ರಾಜಮೌಳಿ ಆಸ್ಕರ್ಗಾಗಿ ಖರ್ಚು ಮಾಡಿದ ಹಣದಲ್ಲಿ 8 ಸಿನಿಮಾ ಮಾಡ್ತಿದ್ದೆ – ಟಾಲಿವುಡ್ ನ ಖ್ಯಾತ ನಿರ್ದೇಶಕನ ವಿವಾದಾತ್ಮಕ ಹೇಳಿಕೆ, ವಿಡಿಯೋ ವೈರಲ್
- ಮನರಂಜನೆ
- March 10, 2023
- No Comment
- 144
ನ್ಯೂಸ್ ಆ್ಯರೋ : ಆಸ್ಕರ್ ಪ್ರಶಸ್ತಿ ಪಡೆಯಲು ನಿರ್ದೇಶಕ ರಾಜಮೌಳಿ 80 ಕೋಟಿಯಷ್ಟು ಹಣ ಖರ್ಚು ಮಾಡುತ್ತಿದ್ದು, ಅಷ್ಟೊಂದು ಹಣ ಇದ್ದಿದ್ದರೆ ನಾನು 8 ಸಿನಿಮಾ ಮಾಡಿ ಬಿಸಾಕುತ್ತಿದ್ದೆ. ಹಣ ದುರುಪಯೋಗ ಮಾಡಿ ಪ್ರಶಸ್ತಿ ಪಡೆಯುವ ಅಗತ್ಯವಿದೆಯೇ? ಹೋಗಲಿ ಬಿಡಿ, ಇದನ್ನೆಲ್ಲಾ ಮಾತನಾಡುತ್ತಾ ಕುಳಿತರೆ ಸಮಯ ವ್ಯರ್ಥವಾಗುತ್ತದೆ ಎಂದು ಹೇಳುವ ಮೂಲಕ ನಿರ್ದೇಶಕ ತಮ್ಮಾ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಆಸ್ಕರ್ಗೆ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ‘ನಾಟು ನಾಟು’ ಹಾಡು ನಾಮಿನೇಟ್ ಆಗಿದೆ. ಇದೀಗ ಚಿತ್ರತಂಡದ ನಿರ್ದೇಶಕ ಎಸ್.ಎಸ್. ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ರಾಮ್ ಚರಣ್ , ಜ್ಯೂನಿಯರ್ ಎನ್ಟಿಆರ್ ಹಾಗೂ ಇನ್ನಿತರರು ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದಾರೆ. ಅಭಿಮಾನಿಗಳು ಶುಭ ಹಾರೈಕೆಯನ್ನು ಮಾಡಿದ್ದಾರೆ.
ಇದೇ 12ರಂದು ಅಮೆರಿಕದಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಈ ಬಾರಿ ಯಾರಿಗೆಲ್ಲಾ ಆಸ್ಕರ್ ಒಲಿಯಬಹುದು ಎಂಬ ಕುತೂಹಲ ಮೂಡಿದ್ದು, ಭಾರತ ಆಸ್ಕರ್ ಒಲಿದು ಬರಲಿ ಎಂದು ಸಿನಿಪ್ರಿಯರು ಹಾರೈಸುತ್ತಿದ್ಧಾರೆ.
ಈ ಸಂದರ್ಭದಲ್ಲಿ ಆಸ್ಕರ್ ಹಾಗೂ ರಾಜಮೌಳಿ ಬಗ್ಗೆ ಖ್ಯಾತ ತೆಲುಗು ನಿರ್ದೇಶಕ, ನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಾಜ್ ನೀಡಿರುವ ವಿವಾದಾತ್ಮಕ ಹೇಳಿಕೆ ಭಾರೀ ವೈರಲ್ ಆಗಿದೆ.
ತಮ್ಮಾರೆಡ್ಡಿ ವಿವಾದಾತ್ಮಕ ಹೇಳಿಕೆಯಲ್ಲಿ ಏನಿದೆ:
ಆಸ್ಕರ್ಗಾಗಿ ರಾಜಮೌಳಿ 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟು ಹಣ ಇದ್ದಿದ್ದರೆ ನಾನು 8 ಸಿನಿಮಾಗಳನ್ನು ಮಾಡಿ ಮುಖದ ಮೇಲೆ ಬಿಸಾಡುತ್ತಿದ್ದೆ. ರಾಜಮೌಳಿ ಹಾಗೂ ಚಿತ್ರತಂಡ ಆಸ್ಕರ್ ಪ್ರಶಸ್ತಿ ಪಡೆಯಲು ಹಣವನ್ನು ನೀರಿನಂತೆ ಖರ್ಚು ಮಾಡಿದ್ಧಾರೆ. ಅಷ್ಟು ಹಣ ಖರ್ಚು ಮಾಡಿ ಆಸ್ಕರ್ ಪ್ರಶಸ್ತಿ ಪಡೆಯುವ ಅಗತ್ಯ ಏನಿದೆ? ಫ್ಲೈಟ್ ಟಿಕೆಟ್ಗಾಗೇ ರಾಜಮೌಳಿ ಅಷ್ಟೆಲ್ಲಾ ಹಣ ಖರ್ಚು ಮಾಡಿದ್ದಾರೆ. ಹೋಗಲಿ ಬಿಡಿ, ಇದನ್ನೆಲ್ಲಾ ಮಾತನಾಡುತ್ತಾ ಕುಳಿತರೆ ಸಮಯ ವ್ಯರ್ಥವಾಗುತ್ತದೆ ಎಂದು ತಮ್ಮಾ ರೆಡ್ಡಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಇನ್ನೂ ತಮ್ಮಾ ರೆಡ್ಡಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧ ವ್ಯಕ್ತವಾಗಿದೆ. ಕೆಲವರು ತಮ್ಮಾರೆಡ್ಡಿ ಹೇಳಿಕೆಗೆ ತಲೆಯಾಡಿಸಿದ್ದು, ಇನ್ನೂ ಕೆಲವರು ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವು ಒಬ್ಬರು ತೆಲುಗಿನವರಾಗಿ ನಮ್ಮದೇ ತೆಲುಗು ಚಿತ್ರ ಆಸ್ಕರ್ ರೇಸ್ನಲ್ಲಿದೆ ಎಂದರೆ ಖುಷಿ ಪಡಬೇಕು, ಆಸ್ಕರ್ ಗೆಲ್ಲಲಿ ಎಂದು ಶುಭ ಹಾರೈಸಬೇಕು, ಅದು ಬಿಟ್ಟು ಈ ರೀತಿ ಕೇವಲವಾಗಿ ಮಾತನಾಡಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.