ನನ್ನ ಜೀವನ ಫ್ರಿಡ್ಜ್ ನಲ್ಲಿ ಕೊನೆಯಾಗೋದು ಇಷ್ಟವಿಲ್ಲ ಎಂದ ರಾಖಿ ಸಾವಂತ್ – ಬಾಲಿವುಡ್ ನಟಿಗೂ ಲವ್ ಜಿಹಾದ್ ಅನುಭವವಾಯ್ತಾ..!?
- ಮನರಂಜನೆ
- February 3, 2023
- No Comment
- 223
ನ್ಯೂಸ್ ಆ್ಯರೋ : ರಾಖಿ ಸಾವಂತ್ ತಮ್ಮ ಹೊಸ ಗಂಡ ಆದಿಲ್ ಖಾನ್ ಅವರ ಅಕ್ರಮ ಸಂಬಂಧದ ಕುರಿತು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ರಾಖಿ ಸಾವಂತ್, ಮಾಧ್ಯಮಗಳಿಗೆ ವಿಶೇಷವಾದ ಮನವಿಯನ್ನು ಸಲ್ಲಿಸುವ ಭರದಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.
ಮುಂಬೈನಲ್ಲಿ ರಾಖಿ ಸಾವಂತ್ ಅವರು ಜಿಮ್ನಿಂದ ಹೊರಬರುವಾಗ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
ಅಲ್ಲದೇ ಆದಿಲ್ ವಿರುದ್ಧ ಅವರು ಬೇರೆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಮಾಡಿದ್ದು, ನನ್ನ ಜೀವನ ಫ್ರಿಡ್ನಲ್ಲಿ ಕೊನೆಯಾಗುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ..!
ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ ಆದಿಲ್ನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದರು. ಇದು ಭಾರಿ ಸುದ್ದಿಯಾಗಿತ್ತು. ರಾಖಿ ಸಾವಂತ್ ತಾಯಿ ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದರು. ಆ ನೋವು ಇನ್ನೂ ಹಸಿಯಾಗಿರುವಾಗಲೇ ಅವರಿಗೆ ದಾಂಪತ್ಯ ಮುರಿದು ಬೀಳುವ ಭಯ ಕಾಡುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.
ಹೌದು.. ರಾಖಿ ಸಾವಂತ್ ಅವರು ಪತಿ ಆದಿಲ್ ಇನ್ನೊಬ್ಬ ಮಹಿಳೆಯ ಜತೆ ಸಲುಗೆಯಿಂದ ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಆದಿಲ್ ದುರಾನಿ ಜತೆಗೆ ಯಾವುದೇ ಸಂದರ್ಶನಗಳನ್ನು ನಡೆಸದಂತೆ, ಅವರೊಂದಿಗೆ ಸಂವಹನ ನಡೆಸದಂತೆ ರಾಖಿ ವಿನಂತಿಸಿದ್ದಾರೆ. “ನೀವು ಆದಿಲ್ನ ಯಾವುದೇ ಸಂದರ್ಶನಗಳನ್ನು ತೆಗೆದುಕೊಳ್ಳಬಾರದು ಅಥವಾ ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನಾನು ಆದಿಲ್ಗೆ ಹತ್ತು ಅವಕಾಶ ನೀಡಿದೆ. ಆದಿಲ್ ಸುಧಾರಿಸಿಕೊ, ಇದು ಸರಿಯಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಅವನು ಕೇಳಲಿಲ್ಲ. ಆ ಹುಡುಗಿಗೆ ಸಹ ನಾನು ಹೇಳಲು ಇಚ್ಛಿಸುತ್ತೇನೆ. ಯಾರು ಪತ್ನಿಗೆ ವಿಧೇಯರಾಗಿ ಇರುವುದಿಲ್ಲವೋ ಅವರು ಯಾರಿಗೂ ವಿಧೇಯರಾಗಿ ಇರುವುದಿಲ್ಲ” ಎಂದಿದ್ದಾರೆ. ಅಂದ ಹಾಗೆ ರಾಖಿ ಸಾವಂತ್ ಆದಿಲ್ರನ್ನು ಮದುವೆಯಾಗಿ ಹತ್ತು ದಿನವೂ ಕಳೆದಿಲ್ಲ..!
ಇನ್ನೂ ರಾಖಿ ಮಧ್ಯ ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ್ದು, ರಾಖಿ ಅವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಏಕೆ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. “ನನಗೆ ತಿಳಿದಿದೆ. ವೈಯಕ್ತಿಕ ವಿಚಾರಗಳನ್ನು ಮನೆಯ ಹೊರಗಡೆ ತರಬಾರದು ಎಂದು. ಆದರೆ ನನ್ನ ಜೀವನ ಫ್ರಿಡ್ಜ್ ನಲ್ಲಿ ಕೊನೆಯಾಗುವುದು ಇಷ್ಟವಿಲ್ಲ. ಆದ್ದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ” ಎಂದು ಪರೋಕ್ಷವಾಗಿ ಶ್ರದ್ಧಾ ವಾಸ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ.
“ನಾನು ಬಿಗ್ಬಾಸ್ ಮರಾಠಿಯಲ್ಲಿ ಇದ್ದಾಗ ಆದಿಲ್ ಸಾಕಷ್ಟು ಲಾಭ ಪಡೆದುಕೊಂಡಿದ್ದ. ನಮ್ಮ ಮದುವೆಯನ್ನು ಸುಮಾರು ಎಂಟು ತಿಂಗಳ ಕಾಲ ಆದಿಲ್ ಗುಪ್ತವಾಗಿಟ್ಟಿದ್ದಿದ್ದು ಅಫೇರ್ಸ್ ಮುಂದುವರಿಸುವ ಕಾರಣಕ್ಕಾಗಿ ಎಂದು ಈಗ ನನಗೆ ಗೊತ್ತಾಗುತ್ತಿದೆ” ಎಂದಿದ್ದಾರೆ ರಾಖಿ.