ಚಿತ್ರರಂಗ ನನ್ನ ಆಸ್ತಿ ಅಲ್ಲ, ಬರೋದು ಬಿಡೋದು ಅವರಿಷ್ಟ ಎಂದ ಕಿಚ್ಚ ಸುದೀಪ್ – ಕಿಚ್ಚ ಗರಂ ಆಗಿ ಹೀಗೆ ಹೇಳಿದ್ಯಾಕೆ?

ಚಿತ್ರರಂಗ ನನ್ನ ಆಸ್ತಿ ಅಲ್ಲ, ಬರೋದು ಬಿಡೋದು ಅವರಿಷ್ಟ ಎಂದ ಕಿಚ್ಚ ಸುದೀಪ್ – ಕಿಚ್ಚ ಗರಂ ಆಗಿ ಹೀಗೆ ಹೇಳಿದ್ಯಾಕೆ?

ನ್ಯೂಸ್ ಆ್ಯರೋ : ಕಳೆದ ಕೆಲ ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಸ್ತಬ್ಧವಾಗಿದ್ದ ಕೆಸಿಸಿ ಅರ್ಥಾತ್‌ ‘ಕರ್ನಾಟಕ ಚನಲಚಿತ್ರ ಕಪ್’ ಮತ್ತೆ ಗರಿಗೆದರಿ ನಿಂತಿದೆ. ಸಿನಿಮಾ ಕೆಲಸಗಳನ್ನೆಲ್ಲ ಬದಿಗೊತ್ತಿ ಚಂದನವದ ನಟರು, ತಂತ್ರಜ್ಞರು ಕ್ರಿಕೆಟ್ ಅಂಗಳಕ್ಕಿಳಿಯಲು ಸಿದ್ಧರಾಗಿದ್ದಾರೆ. ಈ ವರ್ಷ ಕೆಸಿಸಿ ಮೂರನೇ‌ ಸೀಸನ್ ನಡೆಯಲಿದ್ದು, ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಕೆಲ ವಿಚಾರಗಳನ್ನು ಪ್ರಸ್ತಾಪಿಸಿದ್ದು ಈ ಸುದ್ದಿಯಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರಿಗೆ, ಕಳೆದ ವರ್ಷ ಚಿತ್ರರಂಗದ ಕೆಲವರು ಕೆಸಿಸಿ ಆಡಲು ಬಂದಿರಲಿಲ್ಲ. ಅವರಿಗೆ ಆಹ್ವಾನ ನೀಡಿರಲಿಲ್ಲವೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಕಿಚ್ಚ, ‘ನಾವು ಚಿತ್ರರಂಗದ ಪ್ರತಿಯೊಬ್ಬರಿಗೂ ಆಹ್ವಾನ ನೀಡುತ್ತೇವೆ. ಕೆಲವರಿಗೆ ಬರೋದಕ್ಕೆ ಇಷ್ಟ ಇರಲ್ಲ, ಅಂತವರು ಬರೋದಿಲ್ಲ. ಅವರು ಯಾಕೆ ಬಂದಿಲ್ಲ, ಇವರು‌ ಯಾಕೆ ಬಂದಿಲ್ಲ ಅಂತ ಕೇಳಬೇಡಿ, ಸಿನಿಮಾರಂಗ ನನ್ನೊಬ್ಬನ‌ ಸೊತ್ತಲ್ಲ ಎಂದಿದ್ದಾರೆ.

ಮುಂದುವರೆಸಿ, ಕಳೆದ ಎರಡು ಸೀಸನ್‌ಗಳಂತೆ ಈ ಬಾರಿಯೂ ಕೆಸಿಸಿ ನಲ್ಲಿ ಆರು ಅಂತರಾಷ್ಟ್ರೀಯ ಆಟಗಾರರನ್ನು ಸೇರಿ, ಕನ್ನಡ ಸಿನಿಮಾ‌ ನಟರು, ತಂತ್ರಜ್ಞರು ಭಾಗವಹಿಸಲಿದ್ದಾರೆ. ರಾಜಕೀಯ ವಲಯದವರು, ಮಾಧ್ಯಮ ಮಿತ್ರರೂ‌ ಕೂಡ ಕೆಸಿಸಿ‌ಯಲ್ಲಿ ಆಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನುಳಿದಂತೆ, ಈ ಬಾರಿಯ ಕೆಸಿಸಿ ಅತ್ಯಂತ ವರ್ಣರಂಜಿತವಾಗಿರಲಿದೆ. ಟೂರ್ನಮೆಂಟ್ ಗಳು ಫೆ.11 ಮತ್ತು 12 ರಂದು ನಡೆಯಲಿದೆ ಎಂದಿದ್ದಾರೆ. ನಟ ಶಿವರಾಜ್ ಕುಮಾರ್, ಗಣೇಶ್, ಡಾಲಿ ದನಂಜಯ್ ಸೇರಿದಂತೆ, ಕನ್ನಡದ ದಿಗ್ಗಜರು ಭಾಗವಹಿಸುವ ನಿರೀಕ್ಷೆಗಳಿವೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *