Wheeling ಮಾಡೋ ಪುಂಡರ ವಿರುದ್ಧ ಖಾಕಿ ಕಾಂತಾರ ಡೈಲಾಗ್ – ಬೆಂಗಳೂರು ಪೋಲಿಸರು ಮಾಡಿರೋ ಟ್ವೀಟ್ ಭಾರೀ ವೈರಲ್…!!

Wheeling ಮಾಡೋ ಪುಂಡರ ವಿರುದ್ಧ ಖಾಕಿ ಕಾಂತಾರ ಡೈಲಾಗ್ – ಬೆಂಗಳೂರು ಪೋಲಿಸರು ಮಾಡಿರೋ ಟ್ವೀಟ್ ಭಾರೀ ವೈರಲ್…!!

ನ್ಯೂಸ್ ಆ್ಯರೋ‌ : ಇತ್ತೀಚೆಗೆ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿಯೇ ದ್ವಿಚಕ್ರ ವಾಹನ ಸವಾರರು ಯಾವುದೇ ಅಂಜಿಕೆ ಇಲ್ಲದೆ ವ್ಹೀಲಿಂಗ್ ಮಾಡುತ್ತಾರೆ. ಇದು ಅವರ ಜೊತೆಗೆ ಇತರರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಇದೀಗ ಈ ಕೃತ್ಯವನ್ನು ಮಟ್ಟ ಹಾಕಲು ಯಶವಂತಪುರ ಪೊಲೀಸರು ‘ಕಾಂತಾರ’ ಚಿತ್ರದ ಮೊರೆ ಹೋಗಿದ್ದಾರೆ. ಅಂದರೆ ಚಿತ್ರದ ಸಂಭಾಷಣೆಯ ರೀತಿಯಲ್ಲೇ ಎಚ್ಚರಿಕೆ ನೀಡಿದ್ದಾರೆ.

“ಎತ್ತು ಎತ್ತು ಇನ್ನೂ ಮೇಲಕ್ಕೆ ಎತ್ತು….ದುರಹಂಕಾರದಿಂದ ಜನಗಳು ಓಡಾಡೋ ರಸ್ತೆ ಮಧ್ಯೆ ವ್ಹೀಲಿಂಗ್ ಮಾಡೋ ಕೆಟ್ಟ ನಿರ್ಧಾರ ನೀನು ಮಾಡು, ಕೋರ್ಟ್ ನ ಮೆಟ್ಟಿಲ ಮೇಲೆ /ಹಾಸ್ಪಿಟಲ್ ಬೆಡ್ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ” ಎಂದು ಟ್ವೀಟ್ ಮಾಡಿರುವುದು ಗಮನ ಸೆಳೆದಿದೆ.

ಈ ಕ್ರಿಯೇಟಿವ್ ಐಡಿಯಾಕ್ಕೆ ಮೆಚ್ಚುಗೆ ಸೂಚಿಸಿರುವ ಸಾರ್ವಜನಿಕರು, ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ಕೊಟ್ಟು ಸುಮ್ಮನಾಗಬೇಡಿ. ಅವರನ್ನು ಹಿಡಿದು ಶಿಕ್ಷೆ ನೀಡಿ ಎಂದು ಸಲಹೆಗಳನ್ನೂ ನೀಡುತ್ತಿದ್ದಾರೆ.

ಟ್ವೀಟ್‌ಗೆ ಬಂದ ಪ್ರತಿಕ್ರಿಯೆಗಳು
“ದೈವ ತೀರ್ಮಾನ ಮಾಡುತ್ತೆ ಎಂದುಕೊಂಡು ನೀವು ಬಿಡಬೇಡಿ, ದೇವರ ಜೊತೆ ಇವರ ಭೇಟಿ ಮಾಡಿಸುವುದು ನಿಮ್ಮ ಕೆಲಸ ಸಾರ್” ಎಂದು ಒಬ್ಬರು ಹೇಳಿದರೆ, “ವಾಹನಗಳನ್ನು ವಶಪಡಿಸಿಕೊಳ್ಳಿ ಮತ್ತು ಸ್ಕ್ರ್ಯಾಪ್ ಮಾಡಿ, ಹರಾಜಿಗೆ ಹಾಕಬೇಡಿ, ಅವರು ಮತ್ತೆ ಖರೀದಿಸುತ್ತಾರೆ, ವ್ಹೀಲಿಂಗ್ ಮಾಡುತ್ತಾರೆ” ಎಂದಿದ್ದಾರೆ ಇನ್ನೊಬ್ಬರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *