ದುಬಾರಿ ಬೆಲೆಯ ಕಾರು ಖರೀದಿಸಿದ ನಟ ನಾಗಾರ್ಜುನ – ನಾಲ್ಕು ನಿಮಿಷ ಚಾರ್ಜ್ ಮಾಡಿದ್ರೆ‌ 100 ಕಿಮೀ ಓಡುತ್ತೆ ಈ ಕಾರು : ಬೆಲೆ ಎಷ್ಟು ಗೊತ್ತಾ?

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ನಾಗಾರ್ಜುನ – ನಾಲ್ಕು ನಿಮಿಷ ಚಾರ್ಜ್ ಮಾಡಿದ್ರೆ‌ 100 ಕಿಮೀ ಓಡುತ್ತೆ ಈ ಕಾರು : ಬೆಲೆ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಟಾಲಿವುಡ್‍ನ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ (akkineni nagarjuna). ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಪುತ್ರ ನಾಗ ಚೈತನ್ಯ ಜೊತೆ ನಟಿಸಿದ್ದ ‘ಬಂಗಾರ್ರಾಜು’ ಚಿತ್ರ ಸೂಪರ್ ಹಿಟ್ ಆಗಿತ್ತು. ಸದ್ಯ ಅವರು ಸಿನಿಮೇತರ ಕಾರಣಕ್ಕೆ ಸುದ್ದಿಯಾಗಿದ್ದಾರೆ. ದುಬಾರಿ ಎಲೆಕ್ಟ್ರಿಕ್ (New Electric car) ಕಾರು ಖರೀದಿಸಿರುವ ಫೋಟೋ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಯಾವ ಕಾರು?

ನಾಗಾರ್ಜುನ ಕಿಯಾ ಇವಿ 6 ಕಾರನ್ನು ಖರೀದಿಸಿದ್ದಾರೆ. ಬಿಳಿ ಬಣ್ಣದ ಈ ಐಷಾರಾಮಿ ಕಾರಿನ ಬೆಲೆ ಬರೋಬ್ಬರಿ 60-70 ಲಕ್ಷ ರೂ. ಕಾರಿನ ಜೊತೆ ನಾಗಾರ್ಜುನ ಮತ್ತು ಅಮಲಾ ದಂಪತಿ ನಿಂತಿರುವ ಫೋಟೋ ಇದೀಗ ಸದ್ದು ಮಾಡುತ್ತಿದೆ.

ಕಾರಿನ ವಿಶೇಷತೆ

ಚಾಲಕನ ಆಸನವನ್ನು ಹತ್ತು ರೀತಿಯಲ್ಲಿ ಸರಿಹೊಂದಿಸಬಹುದು. ಸ್ಮಾರ್ಟ್ ಕೀ, ವೈರ್ ಲೆಸ್ ಚಾರ್ಜರ್ ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ 528 ಕಿ.ಮೀ. ಮೈಲೇಜ್ ನೀಡುತ್ತದೆ. 100 ಕಿ..ಮೀ. ಚಲಿಸಲು 4 ನಿಮಿಷ ಚಾರ್ಜ್ ಮಾಡಿದರೆ ಸಾಕು ಎನ್ನುವುದು ಇದರ ವಿಶೇಷತೆ.

ಸದ್ಯದ ಪ್ರಾಜೆಕ್ಟ್

ಚಿತ್ರಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸುವ ನಾಗಾರ್ಜುನ ಸದ್ಯ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೆ ಮೂವರು ನಿರ್ದೇಶಕರು ಕಥೆ ಹೇಳಿದ್ದಾರಂತೆ. ಆ ಪೈಕಿ ‘ಆರ್.ಎಕ್ಸ್.-100’ ಚಿತ್ರದ ಖ್ಯಾತಿಯ ಅಜಯ್ ಭೂಪತಿ ಹೇಳಿದ ಕಥೆ ಇಷ್ಟವಾಗಿದ್ದು, ಅದರಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *