ಇನ್ನೊಂದು ವರ್ಷದಲ್ಲಿ ಶಾಲೆ ಬಿಡುವಂತೆ ಮಗ ವಿನೀಶ್‌ಗೆ ವಾರ್ನಿಂಗ್ ಕೊಟ್ಟ ಡಿ ಬಾಸ್ – ವರ್ಷದೊಳಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಆಗ್ತಾರಾ ಜೂನಿಯರ್ ದರ್ಶನ್…!?

ನ್ಯೂಸ್ ಆ್ಯರೋ : ಮಗ ವಿನೀಶ್‌ನನ್ನು ಇಂಡಸ್ಟ್ರಿಗೆ ಕರೆತರುವುದಾಗಿ ಈ ಹಿಂದೆ ಸುಳಿವು ನೀಡಿದ್ದ ಡಿ ಬಾಸ್ ದರ್ಶನ್ ಇದೀಗ ಮಗನಿಗೆ ಒಂದು ವರ್ಷದೊಳಗೆ ಈ ಬಗ್ಗೆ ನಿರ್ಧರಿಸುವ ಕಾಲಾವಕಾಶವನ್ನು ನೀಡಿದ್ದಾರೆ‌‌. ಯೂಟ್ಯೂಬ್ ಸಂದರ್ಶನವೊಂದರಲ್ಲಿ ದರ್ಶನ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಕಡೆ ಶ್ರಮ ಪಡಬೇಕು. ವಿದ್ಯಾಭ್ಯಾಸ ಅಥವಾ ಯಾವುದೇ ಕೆಲಸವನ್ನು ಗುರಿಯಿಲ್ಲದೆ ಮಾಡಿದರೆ ಅದು ವ್ಯರ್ಥ ಎಂದು ಹೇಳಿರುವ ಡಿಬಾಸ್ ಮಗನಿಗೆ ಈ ಸಂಬಂಧ ಬುದ್ಧಿ ಹೇಳಿದ್ದಾರೆ. ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ತೋರದಿರುವ ಕಾರಣ ಮಗನಿಗೆ ಈ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿನೀಶ್‌ಗೆ ತಂದೆ ದರ್ಶನ್ ಅವರು ಒಂದು ವರ್ಷಗಳ ಕಾಲ ಅವಕಾಶ ನೀಡಿದ್ದಾರೆ. ವಿದ್ಯಾಭ್ಯಾಸವಾ ಅಥವಾ ಚಿತ್ರರಂಗವಾ ಎಂದು ನಿರ್ಧರಿಸಬೇಕು. ಸಿನಿಮಾರಂಗಕ್ಕೆ ಬರುವುದಾದರೆ ವಿದ್ಯಾಭ್ಯಾಸವನ್ನು ಇಲ್ಲಿಗೆ ನಿಲ್ಲಿಸಬೇಕು. ಒಟ್ಟಿನಲ್ಲಿ ನಿನಗೆ ಒಂದು ವರ್ಷಗಳ ಅವಕಾಶ ಇದ್ದು, ಯಾವ ರಂಗಕ್ಕೆ ಬರಬೇಕು ಎನ್ನುವುದು ನಿನಗೆ ಬಿಟ್ಟಿದ್ದೇನೆ ಎಂದು ವಾರ್ನಿಂಗ್ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ದೊಡ್ಡ ಖಳನಾಯಕನ ಮಗನಾದರೂ ತುಂಬಾ ಕಷ್ಟ ಪಟ್ಟು ಬೆಳೆದಿದ್ದಾರೆ. ಲೈಟ್‌ ಬಾಯ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್ ಅವರು ಯಶಸ್ಸನ್ನು ಕಾಣಲು ತುಂಬಾನೇ ಶ್ರಮಪಟ್ಟಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿರುವ ದರ್ಶನ್ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *