ಈ ಹಾರುವ ಕಾರ್ ಒಮ್ಮೆ ಚಾರ್ಜ್ ಮಾಡಿದ್ರೆ 200km ಸಾಗುತ್ತೆ – ಮೈಸೂರಿನಲ್ಲೇ ಉತ್ಪಾದನಾ ಘಟಕ ಸ್ಥಾಪನೆ..!!

ಈ ಹಾರುವ ಕಾರ್ ಒಮ್ಮೆ ಚಾರ್ಜ್ ಮಾಡಿದ್ರೆ 200km ಸಾಗುತ್ತೆ – ಮೈಸೂರಿನಲ್ಲೇ ಉತ್ಪಾದನಾ ಘಟಕ ಸ್ಥಾಪನೆ..!!

ನ್ಯೂಸ್ ಆ್ಯರೋ‌ : ಇನ್ನು ಕೆಲವೇ ವರ್ಷಗಳಲ್ಲಿ ನೆಲದ ಮೇಲೆ ಓಡುವ ಕಾರಿನ ಜೊತೆಗೆ ಆಕಾಶದಲ್ಲಿ ಹಾರುವ ಕಾರನ್ನೂ ನೋಡುವ ಅವಕಾಶ ಸಿಗಲಿದೆ. ಅಂದರೆ ಹಾರುವ ಕಾರಿನ ಕುರಿತಾದ ಸಂಶೋಧನೆ, ಉತ್ಪಾದನೆ ಈಗಾಗಲೇ ಆರಂಭವಾಗಿದೆ. ಅದರಲ್ಲೂ ಈ ಸಂಬಂಧ ನಮ್ಮ ರಾಜ್ಯದ ಬೆಂಗಳೂರು ಮತ್ತು ಮೈಸೂರಿನ ಟೆಕ್ ಕಂಪೆನಿಗಳೆರಡು ಐಐಟಿ ಮದ್ರಾಸ್ ಸ್ಥಾಪಿತ ಇಪ್ಲೇನ್ ಜೊತೆ ಒಪ್ಪಂದ ಮಾಡಿಕೊಂಡಿವೆ.

ಇಪ್ಲೇನ್ ಕಂಪೆನಿ ಎಲೆಕ್ಟ್ರಿಕ್ ಟ್ಯಾಕ್ಸಿ ಮತ್ತು ಡ್ರೋನ್ ಸಿಸ್ಟಂ ನಿರ್ಮಣದಲ್ಲಿ ಹೆಸರುವಾಸಿ. ಇದರೊಂದಿಗೆ ವಿನ್ಯಾಸ್ ಇನೊವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಾಲಿಟಿಕ್ಸ್ ಕಂಪೆನಿಗಳು ಮೇ 18ರಂದು ಒಪ್ಪಂದಕ್ಕೆ ಸಹಿ ಹಾಕಿವೆ.

ಮೈಸೂರಿನಲ್ಲಿ ಉತ್ಪಾದನೆ

ಮೈಸೂರಿನ ವಿನ್ಯಾಸ್ ಇನೊವೇಟಿವ್ ಟೆಕ್ನಾಲಜೀಸ್ ವಿವಿಧ ರೀತಿಯ ಡ್ರೋನ್, ಚಾಲಕ ರಹಿತ ವಿಮಾನ, ಬ್ಯಾಟರಿ ಚಾಲಿತ ಹಾರುವ ವಾಹನಗಳನ್ನು ತಯಾರಿಸಲಿದೆ. ಜೊತೆಗೆ ಸರ್ವಿಸಿಂಗ್ ಮತ್ತು ಮಾರ್ಕೆಟಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಲಿದೆ. ಬೆಂಗಳೂರಿನ ಪ್ರಿಂಟಾಲಿಟಿಕ್ಸ್ ಕಂಪೆನಿ ಈ ಯುಎವಿ ಮತ್ತು ಫ್ಲೈಯಿಂಗ್ ಟ್ಯಾಕ್ಸಿಗಳ ತಯಾರಿಕೆಗೆ ಬೇಕಾದ ಮೆಕ್ಯಾನಿಕಲ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸಪೋರ್ಟ್ ಒದಗಿಸಲಿದೆ.

2017ರಲ್ಲಿ ಆರಂಭವಾದ ಇಪ್ಲೇನ್ ಕಂಪೆನಿಯ ಹಾರುವ ವಾಹನಗಳು ಎಸ್‍ಯುವಿ ಕಾರಿನ ಗಾತ್ರ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ಸಾಗುತ್ತದೆ. ಆದರೆ ಯಾವಾಗಿನಿಂದ ತಯಾರಿಕೆ ನಡೆಯುತ್ತದೆ, ಇಲ್ಲಿ ಸಿದ್ದವಾಗುವ ವಾಹನ ಎಲ್ಲಿ ಬಳಕೆಯಾಗುತ್ತದೆ ಮುಂತಾದ ವಿವರ ಸದ್ಯಕ್ಕೆ ಗೊತ್ತಾಗಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *