ಎರಡು ತಿಂಗಳ ಕಾಲ ಮಾಂಸಾಹಾರ ತ್ಯಜಿಸಿದ್ದ ಸಿದ್ದರಾಮಯ್ಯ – ನಾಟಿ ಕೋಳಿ, ರಾಗಿಮುದ್ದೆ ಪ್ರಿಯ ನಾನ್ ವೆಜ್ ಬಿಟ್ಟಿದ್ದೇಕೆ?
- ರಾಜಕೀಯ
- May 19, 2023
- No Comment
- 98
ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲು ಕಾರಣಕರ್ತರಾದವರಲ್ಲಿ ಒಬ್ಬರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರ ಆಡಳಿತಕ್ಕೆ ಮುಹೂರ್ತವೂ ನಿಗದಿಯಾಗಿದೆ. ನಾಳೆ (ಮೇ 20) ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಬಗ್ಗೆ ಕುತೂಹಲಕರ ಮಾಹಿತಿಯೊಂದು ಹೊರ ಬಿದ್ದಿದೆ. ಮಾಂಸಾಹಾರ ಪ್ರಿಯರಾದ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಮಾಂಸಾಹಾರ ತ್ಯಜಿಸಿದ್ದರಂತೆ. ಅದು ಯಾಕೆ ಎನ್ನುವುದರ ಮಾಹಿತಿ ಇಲ್ಲಿದೆ.
ವಾರಕ್ಕೆರಡು ಬಾರಿ ನಾಟಿ ಕೋಳಿ ಸಾರು ರಾಗಿಮುದ್ದೆ ತಿನ್ನುವ ಅವರು ಪ್ರಚಾರದ ಸಂದರ್ಭದಲ್ಲಿ ಬರೀ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದರು. ಇದನ್ನು ಸ್ವತಃ ಸಿದ್ಧರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸ ಮಾಡಬೇಕಾಗಿದ್ದರಿಂದ ಅನಿವಾರ್ಯವಾಗಿ ಮಾಂಸಾಹಾರ ಬಿಡಬೇಕಾಯಿತು. ಆರೋಗ್ಯದಲ್ಲಿ ಕೂಡ ಏರುಪೇರಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಾಂಸ ತಿನ್ನುವುದನ್ನು ಬಿಟ್ಟಿದ್ದೆ ಎಂದು ವಿವರಿಸಿದ್ದಾರೆ.
ಸಿದ್ದರಾಮಯ್ಯ ಪ್ರಚಾರಕ್ಕಾಗಿ ಸಾವಿರಾರು ಕಿ.ಮೀ. ದೂರದವರೆಗೆ ಪ್ರಯಾಣ ಮಾಡುತ್ತಿದ್ದರು. ಪ್ರತಿ ಊರಿನಲ್ಲಿ ಸಮಾವೇಶಗಳು, ಗಂಟೆಗಟ್ಟಲೆ ಭಾಷಣ, ಚುನಾವಣಾ ರ್ಯಾಲಿ ಇರುತ್ತಿದ್ದ ಕಾರಣ ವೈದ್ಯರ ಸಲಹೆಯಂತೆ ಸಿದ್ದರಾಮಯ್ಯ ನಾಟಿ ಕೋಳಿ ತಿನ್ನುವುದನ್ನು ಬಿಟ್ಟಿದ್ದರು.
ಮಾಂಸಾಹಾರ ತಿನ್ನುವುದರಿಂದ ಹೆಚ್ಚಿನ ಪ್ರವಾಸ ಮಾಡಲು ಕಷ್ಟವಾಗುತ್ತದೆ, ಹೆಚ್ಚಾಗಿ ಸುಸ್ತಾಗುತ್ತದೆ. ಚುನಾವಣೆಯಲ್ಲಿ ನಿರತರಾಗಿದ್ದರಿಂದ ವ್ಯಾಯಾಮ ಮಾಡಲು ಕೂಡ ಸಮಯ ಸಿಗದೇ ಇರುವ ಮಾಂಸಾಹಾರ ಬಿಟ್ಟಿದ್ದೆ. ಮೈಸೂರಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಆಪ್ತರ ಮನೆಯಲ್ಲಿ ಕೂಡ ನಾಟಿಕೋಳಿ ಸಾರಿನಲ್ಲಿ ಊಟ ಮಾಡದೆ ಬಂದಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿರುವ ಅವರು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ತಮ್ಮ ನೆಚ್ಚಿನ ಮಾಂಸಾಹಾರವನ್ನು ಸವಿದಿದ್ದಾರೆ.