Global NCAP ಕ್ರ್ಯಾಶ್ ಟೆಸ್ಟ್ ನಲ್ಲಿ ವ್ಯಾಗನ್ ಆರ್, ಆಲ್ಟೋ K10 ಕಳಪೆ ಪ್ರದರ್ಶನ – ಈ ಎರಡೂ ಕಾರ್ ಗಳು ಪಡೆದ ಅಂಕವೆಷ್ಟು ಗೊತ್ತಾ…!?

Global NCAP ಕ್ರ್ಯಾಶ್ ಟೆಸ್ಟ್ ನಲ್ಲಿ ವ್ಯಾಗನ್ ಆರ್, ಆಲ್ಟೋ K10 ಕಳಪೆ ಪ್ರದರ್ಶನ – ಈ ಎರಡೂ ಕಾರ್ ಗಳು ಪಡೆದ ಅಂಕವೆಷ್ಟು ಗೊತ್ತಾ…!?

ನ್ಯೂಸ್ ಆ್ಯರೋ : ಸುರಕ್ಷತೆ ದೃಷ್ಟಿಯಿಂದ ನಡೆಸಲಾದ ಗ್ಲೋಬಲ್ ಎನ್‌ಸಿಎಪಿ(Global NCAP) ಕ್ರ್ಯಾಶ್ ಟೆಸ್ಟ್‌(Crash Test)ಪರೀಕ್ಷೆಯಲ್ಲಿ, ಭಾರತೀಯ ಕಂಪೆನಿಯಾದ ಮಾರುತಿ ಸುಜ಼ುಕಿಯ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಮಾಡೆಲ್ ಗಳು ಕಳಪೆ ಪ್ರದರ್ಶನ ತೋರಿ ಭಾರೀ ನಿರಾಸೆ ಮೂಡಿಸಿದೆ.

ವ್ಯಾಗನ್ ಆರ್

ಗ್ಲೋಬಲ್ ಎನ್‌ಸಿಎಪಿ ‘ವ್ಯಾಗನ್ ಆರ್’ ಕಾರನ್ನು ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safercarsforindia) ಅಡಿಯಲ್ಲಿ ಕ್ರಾಶ್ ಟೆಸ್ಟ್ ನಡೆಸಿತ್ತು. ಈ ಟೆಸ್ಟ್ ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಕೇವಲ ಒಂದು ಸ್ಟಾರ್ ರೇಟಿಂಗ್ ಪಡೆದಿದೆ.ಹಾಗೆಯೇ ಮಕ್ಕಳ ‌ರಕ್ಷಣೆಯಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿಕೊಂಡಿದೆ.‌ ಈ ಹಿಂದೆ 2019ರಲ್ಲಿ ಇದೇ ಕಾರನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಆಗ ಈ ಕಾರ್ 2 ಸ್ಟಾರ್ ರೇಟಿಂಗ್ ಪಡೆದಿತ್ತು.

ವ್ಯಾಗನ್ ಆರ್ ಕಾರು, ಚಾಲಕ ಮತ್ತು ಇತರ ಪ್ರಯಾಣಿಕರ ತಲೆ ಹಾಗೂ ಕುತ್ತಿಗೆಯ ರಕ್ಷಣೆಯಲ್ಲಿ ಉತ್ತಮ ಕ್ಷಮತೆ ತೋರಿದೆ. ಆದರೆ ಚಾಲಕನ ಎದೆಯ ಭಾಗದ ಸುರಕ್ಷತೆಯಲ್ಲಿ ತೀರಾ ದುರ್ಬಲ ಪ್ರದರ್ಶನವನ್ನು ತೋರಿರುವುದರಿಂದ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವ್ಯಾಗನ್ ಆರ್ 34 ಕ್ಕೆ ಕೇವಲ 19.69 ಅಂಕಗಳನ್ನಷ್ಟೇ ಪಡೆದುಕೊಂಡಿತು.

ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ (ISOFIX Child Seat Mount) ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (Child Restraint System) ಇಲ್ಲದಿರುವುದರಿಂದ ಮಕ್ಕಳ ಸುರಕ್ಷತೆ ವಿಭಾಗದಲ್ಲಿ ವ್ಯಾಗನ್ ಆರ್ ಸೊನ್ನೆ ರೇಟಿಂಗ್ ಪಡೆದುಕೊಂಡಿದೆ. ಅಂದರೆ 49ರಲ್ಲಿ ಕೇವಲ 3.40 ಅಂಕಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಆಲ್ಟೊ K10

ಗ್ಲೋಬಲ್ ಎನ್‌ಸಿಎಪಿ ಆಲ್ಟೊ K10 ಕಾರನ್ನೂ ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಿದೆ. ಈ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವ್ಯಾಗನ್ ಆರ್ ಕಾರಿಗಿಂತ ಕೊಂಚ ಉತ್ತಮ ಪ್ರದರ್ಶನ ನೀಡಿದ್ದು 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ಆಲ್ಟೊ K10 34ಕ್ಕೆ 21.67 ಅಂಕಗಳನ್ನು ಗಳಿಸಿದೆ. ಹಾಗೆಯೇ ಈ ಕಾರಿನಲ್ಲೂ ಕೂಡ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಇಲ್ಲದ ಕಾರಣ ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ 49ಕ್ಕೆ 3.52 ಅಂಕಗಳನ್ನಷ್ಟೇ ಗಳಿಸಿಕೊಂಡಿದೆ. ಮಾರುತಿ ಸುಜುಕಿ ಕಂಪೆನಿಯು ಪ್ರಯಾಣಿಕರ ಸುರಕ್ಷತೆಗೆ ಮೊದಲ‌ ಆದ್ಯತೆಯನ್ನು ನೀಡುವ ಅನಿವಾರ್ಯತೆ ಇದೆಯೆಂಬುದು ಈ ಟೆಸ್ಟ್ ಮೂಲಕ ಸಾಬೀತಾಗಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *