ವಿನೋದ್ ರಾಜ್ ಕುಮಾರ್ ಮದುವೆಯಾಗಿದ್ರೂ ಸತ್ಯ ಮುಚ್ಚಿಟ್ಟಿದ್ದೇಕೆ? – ನಿಜವಾಗಿಯೂ ನಟಿ ಲೀಲಾವತಿ ಅವರ ಗಂಡ ಯಾರು ಗೊತ್ತಾ..!?

ವಿನೋದ್ ರಾಜ್ ಕುಮಾರ್ ಮದುವೆಯಾಗಿದ್ರೂ ಸತ್ಯ ಮುಚ್ಚಿಟ್ಟಿದ್ದೇಕೆ? – ನಿಜವಾಗಿಯೂ ನಟಿ ಲೀಲಾವತಿ ಅವರ ಗಂಡ ಯಾರು ಗೊತ್ತಾ..!?

ನ್ಯೂಸ್‌ ಆ್ಯರೋ : ಮಗನ ಸಂಸಾರ ಚೆನ್ನಾಗಿದೆ ಎಂದು ವಿನೋದ್ ರಾಜ್ ಅವರ ಮದುವೆ ಬಗ್ಗೆ ಮೌನ ಮುರಿದ ನಟಿ ಲೀಲಾವತಿಗೆ ನಿರ್ದೇಶಕ ಪ್ರಕಾಶ್ ಮೇಹು ಅವರು ಮತ್ತೊಂದು ಪೋಸ್ಟ್ ಹಾಕಿ ಇನ್ನೊಂದು ಸತ್ಯ ಒಪ್ಪಿಕೊಂಡು ನಿಮ್ಮ ಗಂಡ ಮಹಾಲಿಂಗ್ ಭಾಗವತರ್ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ನಟಿ ಲೀಲಾವತಿ ವೈಯಕ್ತಿಕ ಬದುಕಿನ ಬಗ್ಗೆ ಕೆಲ ಸೀಕ್ರೆಟ್ ವಿಷಯಗಳು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದಕ್ಕೆಲ್ಲ ಕಾರಣ ನಿರ್ದೇಶಕ ಪ್ರಕಾಶ್ ಮೇಹು ಅವರು ಹಂಚಿಕೊಂಡಿರುವ ಕೆಲ ಫೋಟೋ ಸಹಿತ ದಾಖಲೆಗಳು.

ಡಾ. ರಾಜ್‌ಕುಮಾರ್ ಹಾಗೂ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಎನ್ನುವ ವಿವಾದ ಪದೇ ಪದೇ ಸದ್ದು ಮಾಡುತ್ತಲೇ ಇದೆ. ಇದೇ ವಿಚಾರವಾಗಿ ಪ್ರಕಾಶ್ ರಾಜ್ ಮೇಹು ಸ್ಪೋಟಕ ಮಾಹಿತಿ ಇದೆ ಎಂದು ಹೇಳಿ ಪೋಸ್ಟ್‌ ಮಾಡಿದ್ದರು. ಇದರಲ್ಲಿ 2 ವಿಚಾರಗಳನ್ನು ತಿಳಿಸಿದ್ದರು. ಒಂದು ವಿನೋದ್ ರಾಜ್ ಅವರಿಗೆ ಮದುವೆಯಾಗಿ ಮಗನಿದ್ದಾನೆ ಎಂಬುದು ಹಾಗೂ ಲೀಲಾವತಿ ಅವರ ಗಂಡ ಮಹಾಲಿಂಗ್ ಭಾಗವತರ್ ಎಂಬುದನ್ನು ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದರು.

ಮಗನ ಮದುವೆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ಲೀಲಾವತಿ ಕುಟುಂಬ ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟನೆಯನ್ನು ನೀಡಿದ್ದರು. ಅದಕ್ಕೆ ಇನ್ನೊಂದು ಫೋಸ್ಟ್ ಹಾಕಿ ಪ್ರತಿಕ್ರಿಯಿಸಿದ ಪ್ರಕಾಶ್ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ನಿಮ್ಮ ಗಂಡನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್ ಅವರ ಪೋಸ್ಟ್‌ನಲ್ಲಿ ಏನಿದೆ? “ಒಂದು ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ, ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರೂ ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. “ಯುವರಾಜ”ನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಪ್ರಕಾಶ್ ಮೇಹು ಅವರು ಬರೆದುಕೊಂಡಿದ್ದಾರೆ.

ಮಗನ ಮದುವೆ ಬಗ್ಗೆ ಮೌನ ಮುರಿದ ನಟಿ ಲೀಲಾವತಿ..!!

ಈ ಹಿಂದೆ ನಟ ವಿನೋದ್ ರಾಜ್ ಅವರು ಮದುವೆಯಾಗದೆ ತಮ್ಮ ಬದುಕನ್ನು ತಾಯಿಯ ಆರೈಕೆಗಾಗಿ ಮುಡಿ‍ಪಾಗಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಅದಲ್ಲದೆ ತನಗೆ ಮದುವೆಯಾಗಿಯೆಂದೂ ಎಲ್ಲೂ ವಿನೋದ್ ರಾಜ್ ಅವರು ಬಿಟ್ಟುಕೊಟ್ಟಿಲ್ಲ. ಸಮಾಜದ ಮುಂದೆ ಅವಿವಾಹಿತನಾಗಿಯೇ ಇದುವರೆಗೂ ಗುರುತಿಸಿಕೊಂಡಿದ್ದರು. ಇದೀಗ ಪ‍್ರಕಾಶ್ ಮೇಹು ಅವರು ಹಂಚಿಕೊಂಡಿರುವ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಸಂಬಂಧ ನಟಿ ಲೀಲಾವತಿ ಅವರು ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.

ಸಂದರ್ಶಕರೊಬ್ಬರ ಮಗನ ಕುಟುಂಬದ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ನಟಿ ಲೀಲಾವತಿ, “ನೀಟ್‌ ಇದೆ ಅಲ್ವಾ? ಸೊಟ್ಟಪಟ್ಟ ಇಲ್ದೆ ಅಂಕು ಡೊಂಕು ಇಲ್ದೆ ಕಳ್ಳರ ಹಾಗೆ ಸುಳ್ಳರ ಹಾಗೆ ಇಲ್ದೆ ನೆಮ್ಮದಿಯಾಗಿ ನೀಟಾಗಿ ಇದೆ” ಎಂದಿದ್ದಾರೆ. “ಮಗನಿಗೆ ಮದುವೆ ಮಾಡಿದ್ದೀನಿ. ಯಾಕೆ ಹೇಳ್ಲಿಲ್ಲ ಅಂದ್ರೆ, ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮಾಡಿದ್ದಾರೆ. ನನಗೆ ಆ ಚೈತನ್ಯ ಇರಲಿಲ್ಲ. ಹಾಗಾಗಿ ಅದನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎನಿಸಿತು”.

“ಅವನೇನು ಹೆಣ್ಣು ಹುಡುಗಿ ಅಲ್ಲ, ಕದ್ದು ಬಸುರಾಗಿದ್ದಕ್ಕೆ ಮದ್ವೆ ಮಾಡಿಸಿದೆ ಎಂದು ಹೇಳುವುದಿಲ್ಲ. ಪವಿತ್ರವಾಗಿ ಇದ್ದಾನೆ. ನನಗೆ ಒಳ್ಳೆ ಮಗನಾಗಿ ಇದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದೆ. ನನಗೆ ಅನ್ನಿಸಿತು ಅದು ಶ್ರೇಷ್ಠ ಜಾಗ ಅಂತ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತು, ಡೊಂಕು ಮಾತು ಕೇಳುವ ಬದಲು ಮಾತನಾಡುವುದಕ್ಕಿಂತ ಪರಿಶುದ್ದವಾದ ಜಾಗದಲ್ಲಿ ಮದುವೆ ಮಾಡುವುದು ಒಳ್ಳೆಯದು ಎನಿಸಿತು. ವೆಂಕಟರಮಣ ಸನ್ನಿಧಿಯಲ್ಲಿ ಮಾಡಿಸಿದೆ. 7 ಜನ ಕನ್ನಡಿಗರು ಮದುವೆಗೆ ಬಂದಿದ್ದರು.”

“ಮದುವೆ ಮನೆಯಲ್ಲಿ ಏನ್ ಲೀಲಾವತಿಯವರೇ, ನಿಮ್ಮ ಮಗನ ಮದುವೆಗೆ 7 ಜನ ಮಾತ್ರ ಬಂದಿದ್ದಾರೆ. ಜನ ಸಿಗಲಿಲ್ವಾ? ಎಂದರು. ಆದರೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿ ಇದ್ದಾರೆ. ಬೆರಳು ತೋರಿಸುವಂತೆ ಮಾಡಲಿಲ್ಲ ನಾನು. ಚಿನ್ನದ ಹಾಗೆ ಇದ್ದಾರೆ. ನಾನು ಯಾವುದೇ ಕೊರತೆ ಮಾಡಿಲ್ಲ. ನನಗೆ ಬಹಳ ಬೇಸರ ಆಗುತ್ತದೆ. ನಮ್ಮ ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ.”

“ಯಾರು ಏನೇನೋ ಅಂದುಕೊಳ್ಳುತ್ತಾರೆ. ನಾನು ಬರೀ 30 ಸಾವಿರಕ್ಕೆ ಈ ಜಮೀನು ಕೊಂಡುಕೊಂಡೆ. ಮೊಮ್ಮಗನಿಗೆ ಸೊಸೆಗೆ ಒಳ್ಳೆ ಬಂಗಲೆ ಇದೆ. ಎಲ್ಲಾ ಸೌಕರ್ಯ ಇದೆ. ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನನ್ನ ಬಡತನದ ಬಗ್ಗೆ ಹೇಳಲು ಸಂಕೋಚ ಆಗುತ್ತದೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೂ ನನ್ನ ಮಗನ ಮದುವೆ ವಿಜೃಂಭಣೆಯಿಂದ ಮಾಡೋಕೆ ಆಗಲಿಲ್ಲ ಬೇಸರ ಇದೆ. ಯಾವ ತಾಯಿ ಕೂಡ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಇರೋದು ಬೇಡ ಎನ್ನುವುದಿಲ್ಲ” ಎಂದು ಹೇಳಿದ್ದಾರೆ.

ವಿನೋದ್ ರಾಜ್‌ ಮಾತನಾಡಿ “ಅಮ್ಮ ನೆಮ್ಮದಿಯಾಗಿ ಇದ್ದಾರೆ. ಅವರು ನೆಮ್ಮದಿಯಾಗಿ ಇರಲು ಬಿಡಿ. ಅಮ್ಮ ಕರ್ನಾಟಕದ ಆಸ್ತಿ” ಎಂದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *