ಹುಡುಗಿ ಕರೆದಳೆಂದು ಬಾಡಿಗೆ ರೂಂಗೆ ಹೋದ ಯೂಟ್ಯೂಬರ್ – ಜ್ಯೂಸ್ ಕುಡಿದು ಕಣ್ಣು ಬಿಟ್ಟಾಗ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದ..!!

ಹುಡುಗಿ ಕರೆದಳೆಂದು ಬಾಡಿಗೆ ರೂಂಗೆ ಹೋದ ಯೂಟ್ಯೂಬರ್ – ಜ್ಯೂಸ್ ಕುಡಿದು ಕಣ್ಣು ಬಿಟ್ಟಾಗ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದ..!!

ನ್ಯೂಸ್ ಆ್ಯರೋ : ಯೂಟ್ಯೂಬರ್‌ ಒಬ್ಬನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಹಾಗೂ ಕಾರನ್ನು ದೋಚಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಯುವತಿಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇಡುಕ್ಕಿಯ ವತ್ತಪರಾ ಮೂಲದ ಪಿ.ಎಸ್​. ಅಭಿಲಾಷ್​ (28), ಕೊಲ್ಲಂನ ಕೈತೋಡ್​ ನೀಲಮೇಲ್​ ನಿವಾಸಿ ಎ.ಐ. ಅಮೀನ್​ (23), ಇಡುಕ್ಕಿಯ ಸಾಂತಂಪರಾ ಮೂಲದ ಪಿ. ಅಥಿರಾ (28) ಹಾಗೂ ಇಡುಕ್ಕಿಯ ವಲರಾ ಮೂಲದ ಕೆ.ಕೆ. ಅಕ್ಷಯಾ (21) ಎಂದು ಗುರುತಿಸಲಾಗಿದೆ.

ನಾಲ್ವರನ್ನು ಥ್ರಿಪ್ಪನಿಥುರಾದಲ್ಲಿರುವ ಅಪಾರ್ಮೆಂಟ್​ನಲ್ಲಿ ಕೂಥಟ್ಟುಕುಲಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ ಒಳಗಾದ ಕೌನ್ಸಿಲಿಂಗ್ ಯುವಕನ್ನು ಯೂಟ್ಯೂಬರ್ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ:

ಆರೋಪಿ ಅಕ್ಷಯಾ ತನಗೆ ಕೌನ್ಸೆಲಿಂಗ್ ಬೇಕೆಂದು ಯೂಟ್ಯೂಬರ್‌ಗೆ ಕರೆ ಮಾಡಿ ಕೂಥಟ್ಟುಕುಲಂನಲ್ಲಿರುವ ಬಾಡಿಗೆ ರೂಮಿಗೆ ಕರೆಸಿಕೊಂಡಿದ್ದಾಳೆ. ರೂಮಿಗೆ ತೆರಳಿದ ಬಳಿಕ ಅಕ್ಷಯಾ ಕೊಟ್ಟ ಜ್ಯೂಸ್ ಕುಡಿದ ಯೂಟ್ಯೂಬರ್​ ನಿದ್ದೆಗೆ ಜಾರಿದ್ದಾರೆ. ಎಚ್ಚರಗೊಳ್ಳುವಷ್ಟರಲ್ಲಿ ವಂಚನೆ ಗ್ಯಾಂಗ್​ನ ನಾಲ್ವರು ಸೇರಿ ಆಥಿರಾ ಜತೆ ಬೆತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದಾರೆ.

ಇದಾದ ಬಳಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಯೂಟ್ಯೂಬರ್​ಗೆ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಹೆದರಿದ ಯೂಟ್ಯೂಬರ್ ಗ್ಯಾಂಗ್​ನ ಬೇಡಿಕೆಯಂತೆ ತನ್ನ ಖಾತೆಯಲ್ಲಿದ್ದ ₹14000 ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ, ಎರಡು ₹2ಲಕ್ಷ ಮೌಲ್ಯದ ಕಾರನ್ನು ಸಹ ಆರೋಪಿಗಳು ಕಸಿದುಕೊಂಡಿದ್ದಾರೆ.

ಕೂಥಟ್ಟುಕುಲಂ ಠಾಣಾ ಪೊಲೀಸರಿಗೆ ಯೂಟ್ಯೂಬರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ನಿವಾಸವನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪತ್ತೆ ಹಚ್ಚಲಾಯಿತು. ನಿನ್ನೆ (ನ.03) ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ.

ಡಿವೈಎಸ್‌ಪಿ ಟಿ.ಬಿ.ವಿಜಯನ್ ಹಾಗೂ ಇನ್ಸ್​ಪೆಕ್ಟರ್ ಎಂ.ಎ.ಆನಂದ್ ಮಾತನಾಡಿ, ಈ ತಂಡ ಇನ್ಯಾವುದೇ ರೀತಿಯ ವಂಚನೆ ಮಾಡಿದ್ದರೇ ಎಂದು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

Related post

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…

Leave a Reply

Your email address will not be published. Required fields are marked *