ಮಂಗಳೂರು : ಗಂಡನಿಲ್ಲದೇ ಏಕಾಂಗಿಯಾದ ಮುಸ್ಲಿಂ ಮಹಿಳೆಯ ಕ್ಷೀರ ಕ್ರಾಂತಿ – 100ಕ್ಕೂ ಅಧಿಕ ಹಸು, 350 ಲೀಟರ್ ಹಾಲು ಉತ್ಪಾದನೆ : ಸಾಧಕಿಯ ಪರಿಚಯ ಮಾಡ್ಕೊಳ್ಳಿ‌..!!

ಮಂಗಳೂರು : ಗಂಡನಿಲ್ಲದೇ ಏಕಾಂಗಿಯಾದ ಮುಸ್ಲಿಂ ಮಹಿಳೆಯ ಕ್ಷೀರ ಕ್ರಾಂತಿ – 100ಕ್ಕೂ ಅಧಿಕ ಹಸು, 350 ಲೀಟರ್ ಹಾಲು ಉತ್ಪಾದನೆ : ಸಾಧಕಿಯ ಪರಿಚಯ ಮಾಡ್ಕೊಳ್ಳಿ‌..!!

ನ್ಯೂಸ್ ಆ್ಯರೋ : ಹೇಳುವುದಕ್ಕೆ ಎಂಜಿನಿಯರ್ ಪದವೀಧರೆ ಆದರೆ‌ ಮಾಡುವುದಕ್ಕೆ ಕೆಲಸವಿಲ್ಲ, ಕೈ ಹಿಡಿದ ಪತಿಯ ಅಕಾಲಿಕ ಮರಣ, ಮೂರು ಜನ ಹೆಣ್ಣು ಮಕ್ಕಳನ್ನು ಸಾಕುವ ಹೊರೆ ಇಷ್ಟೆಲ್ಲ ಕಷ್ಟವಿದ್ದೂ ಕೂಡ ಆಕೆ ಎದೆಗುಂದಲಿಲ್ಲ. ಸವಾಲು, ಒತ್ತಡಗಳಿಗೆ ಮಣಿದು ಮೂಲೆಯಲ್ಲಿ ಕುಳಿತು ಅಳುತ್ತಾ ಕೂರಲಿಲ್ಲ. ಎಲ್ಲ ಸವಾಲುಗಳನ್ನು‌ ಮೆಟ್ಟಿ ಆಕೆ ಹೈನುಗಾರಿಕೆ ಆರಂಭಿಸಿದಳು. ಹೈನುಗಾರಿಕೆಯಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿ ಇಂದು ಲಕ್ಷ ಲಕ್ಷ ಆದಾಯ ಸಂಪಾದಿಸುತ್ತಿದ್ದಾಳೆ. ಇಷ್ಟೆಲ್ಲಾ ಮಾಡಿದ್ದು ಓರ್ವ ಮುಸಲ್ಮಾನ್ ಮಹಿಳೆ. ಮಂಗಳೂರಿನ ಈ ದಿಟ್ಟ ಮಹಿಳೆಯ ಕ್ಷೀರ ಕ್ರಾಂತಿ ಯಶೋಗಥೆ ಇಲ್ಲಿದೆ.

ಸವಾಲುಗಳಿಗೆ ಹೆದರದ ಮೈಮುನಾ!

ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ನಿವಾಸಿಯಾಗಿರುವ ಮೈಮುನಾ ಇಂಜಿನಿಯರಿಂಗ್ ಪದವೀಧರೆ. ಇವರ ಪತಿ ಮಜೀದ್ ಕೆಲ ವರ್ಷಗಳ ಹಿಂದೆ ಅಕಾಲಿಕವಾಗಿ ಸಾವಿಗೀಡಾದರು. ಮೂರು ಹೆಣ್ಣು ಮಕ್ಕಳನ್ನು ಸಾಕುವ ಹೊರೆ ಮೈಮುನಾ ಮೇಲೆ ಬಿತ್ತು. ಆದರೆ‌ ಮಾಡುವುದಕ್ಕೆ ಯಾವುದೇ ಕೆಲಸವಿರಲಿಲ್ಲ.

ಸಂಬಂಧಿಕರು ದೂರವಾದರು. ಬದುಕುವುದಕ್ಕಾಗಿ ಮನೆಯಲ್ಲಿದ್ದ ಹಸುಗಳನ್ನು‌ ಮಾರಾಟ ಮಾಡಿದರು. ಆದರೂ ಜೀವನ ನಿರ್ವಹಣೆ ಕಷ್ಟವಾಯಿತು. ಅಂತಿಮವಾಗಿ ಮತ್ತೆ ಮೈಮುನಾ ದಿಟ್ಟ ನಿರ್ಧಾರ ಮಾಡಿ ಹೈನುಗಾರಿಕೆಯೆಡೆಗೆ ದೃಷ್ಟಿ ನೆಟ್ಟರು.

ಮಗಳ ಸಲಹೆ ಮೇರೆಗೆ ಹಸು ಖರೀದಿ!

ಪತಿಯನ್ನು ಕಳೆದುಕೊಂಡ ಮೇಲೆ ಮೈಮುನಾ ಜೀವನ ನಡೆಸುವುದಕ್ಕಾಗಿ, ಮಕ್ಕಳನ್ನು ಸಾಕುವುದಕ್ಕಾಗಿ ಹರ ಸಾಹಸ ಪಟ್ಟಿದ್ದರು. ಇದೇ ವೇಳೆ ಇವರ ಮಗಳು ಮರ್ಜಿನಾ ಮತ್ತೆ ಹಸುಗಳನ್ನು ಸಾಕುವ ಸಲಹೆ ನೀಡಿದ್ದಳು. ಮಗಳ ಸಲಹೆಯ ಮೇರೆಗೆ ಮೈಮುನಾ ಮತ್ತೆ ಹೈನುಗಾರಿಕೆ ಆರಂಭಿಸಿದರು. ಲಕ್ಷ್ಮಿ ಎಂಬ ಗರ್ಭಿಣಿ ಹಸುವನ್ನು ತಂದು ಸಾಕಿದರು. ಅಂದಿನಿಂದ‌ ಇಂದಿನ ವರೆಗೆ ಮೈಮುನಾ ಹಿಂದಿರುಗಿ ನೋಡಿಲ್ಲ. ಹೈನುಗಾರಿಕೆಯಲ್ಲಿ‌ ಮೈಮುನಾ ಮುಟ್ಟಿದ್ದೆಲ್ಲ ಚಿನ್ನವಾಗಿದೆ.

ದಿನಕ್ಕ 350 ಲೀಟರ್ ಹಾಲು ಉತ್ಪಾದನೆ!

ಒಂದು ಹಸುವಿನಿಂದ ಆರಂಭವಾದ ಮೈಮುನಾ ಅವರ ಹೈನುಗಾರಿಕೆ ಇಂದು ದೊಡ್ಡ ಯಶಸ್ಸು ಗಳಿಸಿದೆ. ಸವಾಲುಗಳಿಂದ ಕಂಗೆಟ್ಟು ಹೋಗಿದ್ದ ಮೈಮುನಾ ಇಂದು ನೂರು ಹಸುಗಳ ಒಡತಿ. ದಿನವೊಂದಕ್ಕೆ ಇವರು 350 ಲೀಟರ್ ಹಾಲು ಉತ್ಪಾದಿಸುತ್ತಾರೆ. ಇದರೊಂದಿಗೆ ಮೇಕೆ, ಕುರಿ, ಕೋಳಿ ಸಾಕಾಣೆ ಮಾಡುತ್ತಾ ಲಕ್ಷ, ಲಕ್ಷ ಸಂಪಾದನೆ ಮಾಡುತ್ತಾರೆ. ಸ್ವಾವಲಂಬನೆಯ ಕನಸು ಹೊತ್ತ ಪ್ರತಿಯೊಬ್ಬ ಮಹಿಳೆಗೂ ಹರೇಕಳದ ಮೈಮುನಾ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *