ಅಂದಿನ ನಿತ್ಯಾನಂದ ರಂಜಿತಾ ಪ್ರಣಯ ಪ್ರಸಂಗದ ಹಿನ್ನೆಲೆ ಗೊತ್ತಾ? – ಗಂಡನನ್ನು ಬಿಟ್ಟಾಕೆ ನಿತ್ಯಾನಂದನ ಬುಟ್ಟಿಗೆ ಬಿದ್ದಿದ್ದು ಹೇಗೆ?

ಅಂದಿನ ನಿತ್ಯಾನಂದ ರಂಜಿತಾ ಪ್ರಣಯ ಪ್ರಸಂಗದ ಹಿನ್ನೆಲೆ ಗೊತ್ತಾ? – ಗಂಡನನ್ನು ಬಿಟ್ಟಾಕೆ ನಿತ್ಯಾನಂದನ ಬುಟ್ಟಿಗೆ ಬಿದ್ದಿದ್ದು ಹೇಗೆ?

ನ್ಯೂಸ್ ಆ್ಯರೋ‌ : ದಶಕದ ಹಿಂದೆ ನಿತ್ಯಾನಂದ ರಾಸಲೀಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ನಿತ್ಯಾನಂದ ಹಾಗೂ ನಟಿ ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಿಡಿಯೊಂದು ಕೋಲಾಹಲ ಸೃಷ್ಟಿಸಿತ್ತು. ಇದರಿಂದ ನಿತ್ಯಾನಂದ ಸ್ವಾಮಿ ಜೈಲುವಾಸ ಕೂಡ ಅನುಭವಿಸಬೇಕಾಯಿತು. ಬಳಿಕ ನಿತ್ಯಾನಂದ ಸ್ವಾಮಿ ಎಂದಿನಂತೆ ತಮ್ಮ ಕಾಯಕ ಮುಂದುವರಿಸಿದರು. ಈಗಲೂ ರಂಜಿತಾ ಮತ್ತು ಆಕೆಯ ಹೋದರಿ ನಿರ್ಮಲಾ ನಿತ್ಯಾನಂದ ಸ್ವಾಮಿಯ ಜೊತೆಗೆ ಇದ್ದಾರೆ. ಅವರು ಹೇಗೆ ನಿತ್ಯಾನಂದನ ಆಶ್ರಮಕ್ಕೆ ಹತ್ತಿರವಾದರು ಎನ್ನುವುದನ್ನು ಅವರ ತಂದೆ, ಹಿರಿಯ ನಟ ಅಶೋಕ್ ಕುಮಾರ್ ವಿವರಿಸಿದ್ದಾರೆ.

“ದೊಡ್ಡ ಮಗಳು ನಿರ್ಮಲಾಳ ಮದುವೆಯನ್ನು ಸೋದರಳಿಯನ ಜೊತೆ ಮಾಡಿದ್ದೆ. ಇಬ್ಬರು ಅಮೆರಿಕಾದಲ್ಲಿ ಸೆಟ್ಲ್ ಆಗಿದ್ದರು. ರಂಜಿತಾ ಲವ್ ಮ್ಯಾರೇಜ್ ಆಗಿದ್ದಳು. ಅವರಿಬ್ಬರು ರಾಜಸ್ಥಾನದಲ್ಲಿ ವಾಸಿಸುತ್ತಿದ್ದರು. ನಂತರ ಗಂಡನಿಗೆ ಡಿವೋರ್ಸ್ ಕೊಟ್ಟು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಳು. ಅಲ್ಲಿಯವರೆಗೂ ರಂಜಿತಾಗೆ ದೇವರ ಮೇಲೆ ಭಕ್ತಿ ಇರಲಿಲ್ಲ” ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

“ರಂಜಿತಾ ಗರ್ಭಿಣಿಯಾಗಿದ್ದಾಗ ಸರಿಯಾದ ಚಿಕಿತ್ಸೆ ಸಿಗದೇ ಗರ್ಭಕೋಶವನ್ನೆ ತೆಗೆದು ಹಾಕಲಾಯಿತು. ಅದಕ್ಕೂ ಮುನ್ನ ದೇವಸ್ಥಾನಕ್ಕೂ ಹೋಗದ ರಂಜಿತಾಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿತ್ತು. ಇದೇ ಸಮಯದಲ್ಲಿ ಅಮೆರಿಕಾದಲ್ಲಿದ್ದ ಸಹೋದರಿಯನ್ನು ನೋಡಲು ರಂಜಿತಾ ಹೋಗುತ್ತಿದ್ದಳು. ಅದಾಗಲೇ ನಿರ್ಮಲಾ ಅಮೆರಿಕಾದಲ್ಲಿ ನಿತ್ಯಾನಂದನ ಪ್ರವಚನ ಕೇಳಲು ಹೋಗುತ್ತಿದ್ದಳು. ಆಕೆಯ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು” ಎಂದು ಅಶೋಕ್ ಕುಮಾರ್ ವಿವರಿಸಿದ್ದಾರೆ.

“ನಾನು ಒಮ್ಮೆ ಆಶ್ರಮಕ್ಕೆ ಹೋಗಿದ್ದೆ. ರಂಜಿತಾ – ನಿರ್ಮಲಾ ಇಬ್ಬರು ಅಲ್ಲೇ ಇದ್ದರು. ನನ್ನನ್ನು ನೋಡುತ್ತಿದ್ದಂತೆ ನಿತ್ಯಾನಂದ “ಬನ್ನಿ ಬನ್ನಿ. ನನಗೆ ತುಂಬಾ ಖುಷಿ ಆಗುತ್ತಿದೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ” ಎಂದ. ನಾನು ಆಗ ”ನಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಯಾಕೆ ಇಲ್ಲಿ ಸೇರಿಸಿಕೊಂಡಿದ್ದೀಯಾ, ವಾಪಸ್ ಕಳಿಸು” ಎಂದೆ.

ಅದಕ್ಕೆ ಆತ ” ಬೇಕಿದ್ದರೆ ಕರೆದುಕೊಂಡು ಹೋಗಿ, ನನ್ನದೇನು ಅಭ್ಯಂತರ ಇಲ್ಲ ಎಂದ. ಮಕ್ಕಳ ಬಳಿ ಬನ್ನಿ ಎಂದರೆ, ನಮಗೆ ಮೋಕ್ಷ ಸಿಕ್ಕಿದೆ. ನಾವು ಈಗ ಇಲ್ಲಿ ಆನಂದದಿಂದ ಇದ್ದೇವೆ. ಬಹಳ ಸಂತೋಷವಾಗಿ ಇದ್ದೇವೆ ಎಂದರು. ಎಷ್ಟೆ ಕರೆದರೂ ಬರಲಿಲ್ಲ” ಎಂದು ಅಶೋಕ್ ಕುಮಾರ್ ದುಃಖದಿಂದ ಹೇಳಿದ್ದಾರೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *