ರೊಟ್ಟಿ ಮಾಡಲು‌ ಹೋಗಿ ಮತ್ತೇನೋ ಮಾಡಿದ ಬಿಲ್ ಗೇಟ್ಸ್ – ವಿಚಿತ್ರಾಕಾರದ ರೊಟ್ಟಿ ನೋಡಿ ಕಾಲೆಳೆದ ನೆಟ್ಟಿಗರು : ವಿಡಿಯೋ ನೋಡಿ‌‌..

ರೊಟ್ಟಿ ಮಾಡಲು‌ ಹೋಗಿ ಮತ್ತೇನೋ ಮಾಡಿದ ಬಿಲ್ ಗೇಟ್ಸ್ – ವಿಚಿತ್ರಾಕಾರದ ರೊಟ್ಟಿ ನೋಡಿ ಕಾಲೆಳೆದ ನೆಟ್ಟಿಗರು : ವಿಡಿಯೋ ನೋಡಿ‌‌..

ನ್ಯೂಸ್ ಆ್ಯರೋ : ಬಿಲ್ ಗೇಟ್ಸ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಖ್ಯಾತ ಉದ್ಯಮಿ, ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು, ಅಷ್ಟೇ ಅಲ್ಲದೆ ಕೊಡುಗೈ ದಾನಿಯೂ ಹೌದು. ಆದರೆ ಇದೇ ಬಿಲ್ ಗೇಟ್ಸ್ ಸದ್ಯ, ಭಾರತೀಯ ಶೈಲಿಯಂತೆ ಹಿಟ್ಟು ಕಲಸಿ, ಅದನ್ನು ಲಟ್ಟಣಿಗೆಯಿಂದ ಲಟ್ಟಿಸಿ, ರೊಟ್ಟಿ ತಯಾರಿಸಿ ಸಾಮಾಜಿಕ‌ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.

ಖ್ಯಾತ ಬಾಣಸಿಗ ಹಾಗೂ ವ್ಲಾಗರ್ ಆಗಿರುವ ಐಟಾನ್ ಬರ್ತನ್ ಅವರು ಬಿಲ್ ಗೇಟ್ಸ್ ಜೊತೆ ಸೇರಿ ರೊಟ್ಟಿ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್ ಮೂಲಕ ಹರಿಬಿಟ್ಟಿದ್ದಾರೆ. ಜೊತೆಗೆ ‘ಬಿಲ್ ಗೇಟ್ಸ್ ಮತ್ತು‌ ನಾನು ಜೊತೆಯಾಗಿ ಸೇರಿ ಭಾರತೀಯ ರೊಟ್ಟಿ ತಯಾರಿಸಿದ್ದೇವೆ’ ಎಂದು ಕ್ಯಾಪ್ಟನ್ ಬರೆದಿದ್ದಾರೆ. ಜೊತೆಗೆ ‘ನಾನು ಇತ್ತೀಚೆಗೆ ಭಾರತದ ಬಿಹಾರ ರಾಜ್ಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನೂತನ‌ ತಂತ್ರಜ್ಞಾನ ಬಳಸಿ ಗೋಧಿ ಬೆಳೆದು ಅಧಿಕ ಇಳುವರಿ ಪಡೆಯುತ್ತಿರುವುದನ್ನು ಗಮನಿಸಿದೆ. ಜೊತೆಗೆ ರೊಟ್ಟಿ ಮಾಡುವುದರಲ್ಲಿ ಪಳಗಿದ ಮಹಿಳೆಯೊಬ್ಬರನ್ನು ಭೇಟಿ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಬಿಲ್ ಗೇಟ್ಸ್ ಹಾಗೂ ಐಟಾನ್ ಬರ್ತನ್ ಇರುವ ವಿಡಿಯೋದಲ್ಲಿ ಇವರಿಬ್ಬರು ಮಾತನಾಡುತ್ತಾ ರೊಟ್ಟಿ ತಯಾರಿಸುವುದನ್ನು ಗಮನಿಸಬಹುದು. ಬಿಲ್ ಗೇಟ್ಸ್ ಹಿಟ್ಟು ಕಲಸಿದರೆ, ಬರ್ತನ್ ವೃತ್ತಾಕಾರದ ರೊಟ್ಟಿ ತಯಾರಿಸಿದರು. ಆದರೆ ಬಿಲ್ ಗೇಟ್ಸ್ ರೊಟ್ಟಿ ಲಟ್ಟಿಸಿದಾಗ ಅದು ವೃತ್ತಾಕಾರದಲ್ಲಿರದೆ, ವಿಚಿತ್ರ‌ ಆಕಾರ ಪಡೆಯಿತು. ಇದನ್ನು ಗಮನಿಸಿದ ಅವರು ‘ನಾನು ಅಡುಗೆ ಮಾಡದೇ ಬಹಳಷ್ಟು ಸಮಯವಾಯಿತು. ಈಗೆನಿದ್ದರೂ ಸೂಪ್ ಸೇವಿಸುತ್ತೇನೆ’ ಎಂದರು. ಕೊನೆಗೆ ವಿಚಿತ್ರಾಕಾರದ ರೊಟ್ಟಿಯನ್ನೇ ಬೇಯಿಸಿ ಇಬ್ಬರೂ ನಗುತ್ತಾ ಸೇವಿಸಿದರು.

ಟ್ವಿಟ್ಟರ್ ನಲ್ಲಿ ವೈರಲ್ ಆದ ಈ ವಿಡಿಯೊವನ್ನು ಕಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ‘ಬಿಲ್ ಗೇಟ್ಸ್ ರೊಟ್ಟಿ ತುಂಬಾ ಚೆನ್ನಾಗಿದೆ’ ಎಂದರೆ, ಮತ್ತೆ ಕೆಲವರು ‘ಹೇಗೆ ರೊಟ್ಟಿ ತಯಾರಿಸಬಾರದು ಎಂದು ಬಿಲ್ ಗೇಟ್ಸ್ ಹೇಳಿ ಕೊಡುತ್ತಿದ್ದಾರೆ’ ಎಂದು ಕಾಲೆಳೆದಿದ್ದಾರೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *