ಯುಪಿಐ ಪಾವತಿ ಅಥವಾ ಮೊಬೈಲ್ ಟ್ರಾನ್ಸ್‌ಫರ್ ತಪ್ಪಾದರೆ ಏನು ಮಾಡೋದು? – ಗಡಿಬಿಡಿ ಆಗ್ಬೇಡಿ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..

ಯುಪಿಐ ಪಾವತಿ ಅಥವಾ ಮೊಬೈಲ್ ಟ್ರಾನ್ಸ್‌ಫರ್ ತಪ್ಪಾದರೆ ಏನು ಮಾಡೋದು? – ಗಡಿಬಿಡಿ ಆಗ್ಬೇಡಿ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..

ನ್ಯೂಸ್ ಆ್ಯರೋ : ಯುಪಿಐ ಪಾವತಿ ನಗದು ವ್ಯವಹಾರವನ್ನು ಕಡಿಮೆಗೊಳಿಸಿ ಸುರಕ್ಷಿತ ಹಣ ವರ್ಗಾವಣೆಗೆ ದಾರಿ ಮಾಡಿಕೊಟ್ಟಿದೆ. ಆದರೆ ಇದರಲ್ಲಿ ಕೆಲವೊಮ್ಮೆ ತಪ್ಪುಗಳಾದರೆ ಏನು ಮಾಡುವುದು ಎನ್ನುವ ಗೊಂದಲ ಉಂಟಾಗುವುದು ಸಹಜ.

ಕ್ಷಣಾರ್ಧದಲ್ಲಿ ಮಾಡಿ ಮುಗಿಸಬಹುದಾದ ಯುಪಿಐ ಪಾವತಿ ವೇಳೆ ಕೆಲವೊಮ್ಮೆ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾಗಬಹುದು. ಗುರುತು ಪರಿಚಯವಿದ್ದರೆ ಕೇಳಿ ಪಡೆಯಬಹುದು. ಆದರೆ ಹೆಚ್ಚು ಪರಿಚಯವೇ ಇಲ್ಲದವರಿಗೆ ಹೋದರೆ ಏನು ಮಾಡುವುದು. ಹೀಗಾಗಿ ಯುಪಿಐ ಪಾವತಿಗೂ ಮೊದಲು ಸಾಕಷ್ಟು ಯೋಚನೆ ಮಾಡುವಂತಾಗಿದೆ.

ಸಾಮಾನ್ಯವಾಗಿ ಯುಪಿಐ ಪಾವತಿ ಕ್ಷಣಾರ್ಧದಲ್ಲಿ ನಡೆಯುತ್ತದೆ. ಅದನ್ನು ಹಿಂಪಡೆಯುವುದು ಕಷ್ಟ. ಆದರೂ ಕೆಲವೊಮ್ಮೆ ರಿಫಂಡ್ ಗೆ ಮನವಿ ಮಾಡಬಹುದಾಗಿದೆ.

ಏನು ಮಾಡಬಹುದು?

  • ತಪ್ಪಾಗಿ ಬೇರೆಯವರಿಗೆ ಹಣ ಕಳುಹಿಸಿದ್ದರೆ ಕೂಡಲೇ ಅವರನ್ನು ಸಂಪರ್ಕಿಸಿ ಹಣವನ್ನು ಮರಳಿಸುವಂತೆ ಕೇಳುವುದು. ಒಳ್ಳೆಯವರು ಖಂಡಿತ ಹಣವನ್ನು ಮರಳಿ ನೀಡುತ್ತಾರೆ.
  • ಹಣ ಪಡೆದವರು ಹಣ ಮರಳಿಸದೇ ಇದ್ದರೆ ಕೂಡಲೇ ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪೆನಿಯನ್ನು ಸಂಪರ್ಕಿಸಬೇಕು. ಇದಕ್ಕಾಗಿ ವಹಿವಾಟು ಉಲ್ಲೇಖ ಸಂಖ್ಯೆ (ಯುಟಿಆರ್), ದಿನಾಂಕ ಮತ್ತು ವಹಿವಾಟಿನ ಮೊತ್ತವನ್ನು ಒದಗಿಸಬೇಕು.
  • ಹಣ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಬೇಕಾಗಬಹುದು. ಇದಕ್ಕಾಗಿ ನಿರಂತರ ಬ್ಯಾಂ ಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪೆನಿಯೊಂದಿಗೆ ಸಂಪರ್ಕದಲ್ಲಿರಬೇಕು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯುಪಿಐ ವಹಿವಾಟುಗಳು ಬಾಕಿ ಇದ್ದರೆ, ವಿಫಲವಾದ ಸ್ಥಿತಿಯಲ್ಲಿದ್ದರೆ ಮಾತ್ರ ಹಿಂದಕ್ಕೆ ಪಡೆಯಲು ಸಾಧ್ಯ. ವಹಿವಾಟು ಪೂರ್ಣಗೊಂಡ ಬಳಿಕ ಅದನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ.

ಹೀಗಾಗಿ ಯುಪಿಐ ಪೇಮೆಂಟ್ ಮಾಡುವಾಗ ಹಣ ಕಳುಹಿಸುವವರ ಯುಪಿಐ ಐಡಿ ಮತ್ತು ಅನಧಿಕೃತ ವಹಿವಾಟುಗಳ ಬಗ್ಗೆ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪನಿಗೆ ತಕ್ಷಣ ವರದಿ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಿದೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *