10 ನಿಮಿಷ ಚಾರ್ಜ್‌ ಮಾಡಿದ್ರೆ 1200KM ಮೈಲೇಜ್..! – ಈ ಅತ್ಯಾಧುನಿಕ ಟೊಯೋಟಾ ಎಲೆಕ್ಟ್ರಿಕ್ ಕಾರಿನ ಎದುರು ಟೆಸ್ಲಾ ಕೂಡ ಲೆಕ್ಕಕ್ಕಿಲ್ಲ..!

10 ನಿಮಿಷ ಚಾರ್ಜ್‌ ಮಾಡಿದ್ರೆ 1200KM ಮೈಲೇಜ್..! – ಈ ಅತ್ಯಾಧುನಿಕ ಟೊಯೋಟಾ ಎಲೆಕ್ಟ್ರಿಕ್ ಕಾರಿನ ಎದುರು ಟೆಸ್ಲಾ ಕೂಡ ಲೆಕ್ಕಕ್ಕಿಲ್ಲ..!

ನ್ಯೂಸ್ ಆ್ಯರೋ : ವಾಹನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕಲ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಹೆಸರಾಂತ ವಾಹನ ತಯಾರಿಕಾ ಕಂಪೆನಿಗಳು ವಿನೂತನ ಮಾದರಿಯ ಎಲೆಕ್ಟ್ರಿಕಲ್ ಕಾರುಗಳನ್ನು ಪರಿಚಯಿಸುವುದರೊಂದಿಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಮಾದರಿಯ ವಾಹನಗಳಿಗೂ ಠಕ್ಕರ್ ನೀಡುತ್ತಿದೆ. ಸದ್ಯ, ಜಪಾನಿನ‌ ಜನಪ್ರಿಯ ವಾಹನ ತಯಾರಿಕಾ ಕಂಪೆನಿಯಾದ ಟೊಯೋಟಾ ಎಲೆಕ್ಟ್ರಿಕಲ್ ವಾಹನಗಳಲ್ಲಿ ಲಭ್ಯವಿರುವ ಬ್ಯಾಟರಿಗಿಂತ ಹೆಚ್ಚಿನ ಶಕ್ತಿಶಾಲಿ ಬ್ಯಾಟರಿ ಅಳವಡಿಸಿ ಹೊಸದೊಂದು ಅತ್ಯಾಧುನಿಕ ಕಾರು ತಯಾರಿಸಿದ್ದು, ಈ ಎಲೆಕ್ಟ್ರಿಕಲ್ ಕಾರು 10 ನಿಮಿಷ ಚಾರ್ಜ್ ಮಾಡಿದರೆ ಬರೋಬ್ಬರಿ 1200KM ಮೈಲೇಜ್ ನೀಡುತ್ತದೆ.

ಅತ್ಯಾಧುನಿಕ ಬ್ಯಾಟರಿ ಅಳವಡಿಕೆ!

ಇದೀಗ ವಿಶ್ವದ ಜನಪ್ರಿಯ ಕಾರು ತಯಾರಕ ಕಂಪೆನಿ ಎನಿಸಿಕೊಂಡಿರುವ ಟೊಯೋಟಾ ಎಲೆಕ್ಟ್ರಿಕಲ್ ಕಾರುಗಳಿಗಾಗಿ ‘ಸೋಲಿಡ್ ಸ್ಟಾಟ್ ಬ್ಯಾಟರಿ’ಗಳನ್ನು ತಯಾರಿಸುತ್ತಿದೆ. ಟೊಯೋಟಾ ಕಂಪೆನಿಯು ಇತ್ತೀಚೆಗೆ ಬ್ಯಾಟರಿಗಳ ವೆಚ್ಚ ಹಾಗೂ ಗಾತ್ರವನ್ನು ಅರ್ದದಷ್ಟು ಕಡಿಮೆಗೊಳಿಸಬಹುದಾದ ಪ್ರಗತಿಯನ್ನು ತಲುಪಿದೆ ಎಂದು ಹೇಳಿಕೊಂಡಿದೆ. ಒಂದು ವೇಳೆ ಈ ಅತ್ಯಾಧುನಿಕ ಬ್ಯಾಟರಿ ಅಳವಡಿಸಿದ ವಾಹನಗಳು ರಸ್ತೆಗಿಳಿದರೆ ಈಗಿರುವ ಎಲೆಕ್ಟ್ರಿಕಲ್ ವಾಹನಗಳ ಬೆಲೆ ಶೇ.50 ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

1200KM ಮೈಲೇಜ್ ನೀಡುವ ಕಾರು!

ಇನ್ನು ಟೊಯೋಟಾ ಕಂಪೆನಿಯು ಈ ಬ್ಯಾಟರಿ ತಂತ್ರಜ್ಞಾನದ ಮುಂದಿನ ಹಂತಕ್ಕಾಗಿ ಘನ‌ ಸ್ಥಿತಿಯ ಬ್ಯಾಟರಿಗಳ ಬೃಹತ್ ಉತ್ಪಾದನೆಯಲ್ಲಿ ಕೆಲಸ ಮಾಡಲು ಜಪಾನಿನ ಪ್ರಮುಖ ತೈಲ ಕಂಪೆನಿಯಾದ ಐಡೆಮಿಟ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗಿದೆ. ಒಂದು ವೇಳೆ ಈ ಒಪ್ಪಂದ ಯಶಸ್ವಿಯಾದರೆ ಘನ‌ ಸ್ಥಿತಿಯ ಬ್ಯಾಟರಿಗಳು EV ಗಳ ವ್ಯಾಪ್ತಿಯನ್ನು 1200KM ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದುತ್ತದೆ.

ಈ ಬ್ಯಾಟರಿ ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಇನ್ನು ಈ ಅತ್ಯಾಧುನಿಕ ಕಾರು ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬ ಬಗ್ಗೆ ಕಂಪೆನಿಯೂ ಅಧೀಕೃತ ಮಾಹಿತಿ ಹಂಚಿಕೊಂಡಿಲ್ಲ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *