ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ರೆ…..!!

ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ರೆ…..!!

ನ್ಯೂಸ್ ಆ್ಯರೋ‌ : ಕೆಲವೊಮ್ಮೆ ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಳ್ಳುವುದನ್ನು ಗಮನಿಸಿರುತ್ತೀರಿ. ಇದಕ್ಕೆ ಕಾರಣವೇನು? ಇದರಿಂದ ಅಪಾಯವಿದೆಯೇ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸ್ಫೋಟಗೊಳ್ಳುವ ಅಪಾಯ
ನಿಧಾನವಾಗಿ ಬ್ಯಾಟರಿ ಕ್ಷೀಣಿಸಿ ಅಂತಿಮವಾಗಿ ಉಬ್ಬಿಕೊಳ್ಳುತ್ತದೆ. ಹೀಗೆ ಊದಿಕೊಳ್ಳುವ ಬ್ಯಾಟರಿಯನ್ನು ಬದಲಾಯಿಸದಿದ್ದರೆ ಮುಂದೊಂದು ದಿನ ಸ್ಫೋಟಗೊಳ್ಳುವ ಅಪಾಯವಿದೆ. ಉಷ್ಣತೆ ಹೆಚ್ಚಿದರೆ, ಅತಿಯಾದ ಬಳಕೆಯಿಂದ ಫೋನ್ ಬಿಸಿಯಾದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.

ತಪ್ಪಾದ ಬಳಕೆ
ಅತಿಯಾಗಿ ಮತ್ತು ತಪ್ಪಾಗಿ ಸ್ಮಾರ್ಟ್ ಫೋನ್ ಅನ್ನು ಉಪಯೋಗಿಸುವುದರಿಂದ ಬ್ಯಾಟರಿ ಊದಿಕೊಳ್ಳುತ್ತದೆ. ಹೀಗಾಗಿ ಚಾರ್ಜ್‍ಗೆ ಹಾಕಿಕೊಂಡು ಫೋನ್ ಬಳಸಬೇಡಿ. ಬಿಸಿಲು ತಾಗುವಂತೆ ಫೋನ್ ಇಡಬೇಡಿ. ಅಲ್ಲದೆ ನಿರಂತರ ತುಂಬಾ ಸಮಯ ಫೋನ್ ಬಳಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಅನಗತ್ಯ ಆ್ಯಪ್
ಫೋನ್ ನಲ್ಲಿರುವ ಅನಗತ್ಯ ಆ್ಯಪ್ ಗಳು ಹೆಚ್ಚು ಬ್ಯಾಟರಿ ಬಳಸುತ್ತವೆ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಈಗಿನ ಬಹುತೇಕ ಆ್ಯಪ್ ಗಳು ಜಿಪಿಎಸ್, ಕ್ಯಾಮರಾ ಅಥವಾ ವೀಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತವೆ. ಇದರಿಂದ ಬ್ಯಾಟರಿ ಮೇಲೆ ಹೊಡೆತ ಬೀಳುತ್ತದೆ. ಹೀಗಾಗಿ ಅನಗತ್ಯ ಆ್ಯಪ್ ಗಳನ್ನು ಡಿಲೀಟ್ ಮಾಡಿ.

ಬ್ಯಾಕ್ ಗ್ರೌಂಡ್ ಆ್ಯಪ್
ಬ್ಯಾಟರಿ ಬೇಗನೆ ಖಾಲಿ ಆಗಲು ಮತ್ತು ಅದರ ಮೇಲೆ ಒತ್ತಡ ಬೀಳಲು ಬ್ಯಾಕ್ ಗ್ರೌಂಡ್ ಆ್ಯಪ್ ಕೂಡ ಕಾರಣ. ಹೀಗಾಗಿ ಆ್ಯಪ್ ಉಪಯೋಗಿಸಿದ ನಂತರ ಅದನ್ನು ಮಿನಿಮೈಸ್ ಮಾಡಿಟ್ಟುಕೊಳ್ಳದೆ ಸಂಪೂರ್ಣ ಕ್ಲೋಸ್ ಮಾಡಿ.

ಸೆಟ್ಟಿಂಗ್ ಗಮನಿಸಿ
ಫೋನ್ ನಲ್ಲಿರುವ ಕೆಲವು ಸೆಟ್ಟಿಂಗ್ ಗಳು ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ಡಿಸ್ ಪ್ಲೇ ಬ್ರೈಟ್ ನೆಡ್ ಕಡಿಮೆ ಮಾಡುವುದು, ಬ್ಲೂ ಟೂತ್, ವೈ-ಫೈ ಆಫ್ ಮಾಡುವುದು ಮುಂತಾದ ವಿಧಾನಗಳಿಂದ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿಲ್ಲದಾಗ ಇವುಗಳನ್ನು ಕೂಡಲೇ ಆಫ್ ಮಾಡಬೇಕು.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *