ಎಚ್ಚರ! ಮೊಬೈಲ್ ಕವರ್ ಒಳಗೆ ಕರೆನ್ಸಿ ನೋಟು, ಕಾರ್ಡ್ ಇಡುತ್ತೀರಾ? – ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..!

ಎಚ್ಚರ! ಮೊಬೈಲ್ ಕವರ್ ಒಳಗೆ ಕರೆನ್ಸಿ ನೋಟು, ಕಾರ್ಡ್ ಇಡುತ್ತೀರಾ? – ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..!

ನ್ಯೂಸ್ ಆ್ಯರೋ‌ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಲಾಸ್ಟ್ ಸುದ್ದಿಗಳು ಹೆಚ್ಚಾಗಿ ಕೇಳಿ ಬರಲಾರಂಭಿಸಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ. ಅದು ಹೇಗೆ? ಯಾವ ರೀತಿ ಎಚ್ಚರಿಕೆ ವಹಿಸಬೇಕು? ಎನ್ನುವುದರ ವಿವರ ಇಲ್ಲಿದೆ.

ಈ ರೀತಿಯ ಅಭ್ಯಾಸ ಇದ್ದರೆ ಈಗಲೇ ಬಿಟ್ಟುಬಿಡಿ

ಕೆಲವರು ಮೊಬೈಲ್‍ನ ಹಿಂಬದಿ ಕವರ್ ಒಳಗೆ ಎಟಿಎಂ, ಆಧಾರ್, ಕಾರ್ಡ್, ಕರೆನ್ಸಿ ನೋಟು, ಕಾಯಿನ್, ಕೀ ಮುಂತಾದವುಗಳನ್ನು ಇಡುತ್ತಾರೆ. ಬಳಕೆಗೆ ಅನುಕೂಲ ಎಂದುಕೊಂಡಿದ್ದರೂ ಇದು ಸೃಷ್ಟಿಸಬಲ್ಲ ಅಪಾಯ ಕೂಡ ಅಪಾರವಾದುದು ಎನ್ನುತ್ತಾರೆ ತಜ್ಞರು.

ಬೆಂಕಿ ಹತ್ತಿಕೊಳ್ಳಬಹುದು

ತಪ್ಪಾದ ಬಳಕೆಯೇ ಮೊಬೈಲ್ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣ. ಫೋನ್ ಅತಿಯಾಗಿ ಬಿಸಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬ್ಯಾಟರಿ ಮತ್ತು ಫೋನ್ ನ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಬಿದ್ದಾಗ ಬೆಂಕಿ ಕಾನಿಸಿಕೊಳ್ಳುತ್ತದೆ. ಮೊಬೈಲ್ ಕವರ್ ನಲ್ಲಿ ನಾವು ತುರುಕುವ ವಸ್ತುಗಳಿಂದಲೇ ಈ ಒತ್ತಡ ಸೃಷ್ಟಿಯಾಗುತ್ತದೆ.

ಅಲ್ಲದೆ ಕರೆನ್ಸಿ ನೋಟುಗಳನ್ನು ತಯಾರಿಸಲು ಪ್ರತ್ಯೇಕವಾದ ಕಾಗದವನ್ನು ಬಳಸಲಾಗುತ್ತದೆ. ಜೊತೆಗೆ ವಿವಿಧ ರಾಸಾಯನಿಕಗಳನ್ನೂ ಉಪಯೋಗಿಸಲಾಗುತ್ತದೆ. ಮೊಬೈಲ್ ಹೊರ ಸೂಸುವ ಉಷ್ಣತೆಯನ್ನು ಹೊರ ಹೋಗದಂತೆ ಕರೆನ್ಸಿ ನೋಟುಗಳು ಅಥವಾ ಇತರ ವಸ್ತುಗಳು ತಡೆಯುತ್ತವೆ. ಇದರಿಂದ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು ಜೊತೆಗೆ ಸ್ಫೋಟಗೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *