ಎಚ್ಚರ! ಮೊಬೈಲ್ ಕವರ್ ಒಳಗೆ ಕರೆನ್ಸಿ ನೋಟು, ಕಾರ್ಡ್ ಇಡುತ್ತೀರಾ? – ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..!

ಎಚ್ಚರ! ಮೊಬೈಲ್ ಕವರ್ ಒಳಗೆ ಕರೆನ್ಸಿ ನೋಟು, ಕಾರ್ಡ್ ಇಡುತ್ತೀರಾ? – ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..!

ನ್ಯೂಸ್ ಆ್ಯರೋ‌ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಲಾಸ್ಟ್ ಸುದ್ದಿಗಳು ಹೆಚ್ಚಾಗಿ ಕೇಳಿ ಬರಲಾರಂಭಿಸಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ. ಅದು ಹೇಗೆ? ಯಾವ ರೀತಿ ಎಚ್ಚರಿಕೆ ವಹಿಸಬೇಕು? ಎನ್ನುವುದರ ವಿವರ ಇಲ್ಲಿದೆ.

ಈ ರೀತಿಯ ಅಭ್ಯಾಸ ಇದ್ದರೆ ಈಗಲೇ ಬಿಟ್ಟುಬಿಡಿ

ಕೆಲವರು ಮೊಬೈಲ್‍ನ ಹಿಂಬದಿ ಕವರ್ ಒಳಗೆ ಎಟಿಎಂ, ಆಧಾರ್, ಕಾರ್ಡ್, ಕರೆನ್ಸಿ ನೋಟು, ಕಾಯಿನ್, ಕೀ ಮುಂತಾದವುಗಳನ್ನು ಇಡುತ್ತಾರೆ. ಬಳಕೆಗೆ ಅನುಕೂಲ ಎಂದುಕೊಂಡಿದ್ದರೂ ಇದು ಸೃಷ್ಟಿಸಬಲ್ಲ ಅಪಾಯ ಕೂಡ ಅಪಾರವಾದುದು ಎನ್ನುತ್ತಾರೆ ತಜ್ಞರು.

ಬೆಂಕಿ ಹತ್ತಿಕೊಳ್ಳಬಹುದು

ತಪ್ಪಾದ ಬಳಕೆಯೇ ಮೊಬೈಲ್ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣ. ಫೋನ್ ಅತಿಯಾಗಿ ಬಿಸಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬ್ಯಾಟರಿ ಮತ್ತು ಫೋನ್ ನ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಬಿದ್ದಾಗ ಬೆಂಕಿ ಕಾನಿಸಿಕೊಳ್ಳುತ್ತದೆ. ಮೊಬೈಲ್ ಕವರ್ ನಲ್ಲಿ ನಾವು ತುರುಕುವ ವಸ್ತುಗಳಿಂದಲೇ ಈ ಒತ್ತಡ ಸೃಷ್ಟಿಯಾಗುತ್ತದೆ.

ಅಲ್ಲದೆ ಕರೆನ್ಸಿ ನೋಟುಗಳನ್ನು ತಯಾರಿಸಲು ಪ್ರತ್ಯೇಕವಾದ ಕಾಗದವನ್ನು ಬಳಸಲಾಗುತ್ತದೆ. ಜೊತೆಗೆ ವಿವಿಧ ರಾಸಾಯನಿಕಗಳನ್ನೂ ಉಪಯೋಗಿಸಲಾಗುತ್ತದೆ. ಮೊಬೈಲ್ ಹೊರ ಸೂಸುವ ಉಷ್ಣತೆಯನ್ನು ಹೊರ ಹೋಗದಂತೆ ಕರೆನ್ಸಿ ನೋಟುಗಳು ಅಥವಾ ಇತರ ವಸ್ತುಗಳು ತಡೆಯುತ್ತವೆ. ಇದರಿಂದ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು ಜೊತೆಗೆ ಸ್ಫೋಟಗೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *