ಗೂಗಲ್ ಸಂಸ್ಥೆಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ ಇಷ್ಟೆಲ್ಲಾ ಸೌಲಭ್ಯಗಳಿದೆಯಾ..!? – ಗೂಗಲ್ ಸಿಇಒ ಸುಂದರ್ ಪಿಚೈ ಬರೆದಿರುವ ಪತ್ರದಲ್ಲೇನಿದೆ..?

ಗೂಗಲ್ ಸಂಸ್ಥೆಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ ಇಷ್ಟೆಲ್ಲಾ ಸೌಲಭ್ಯಗಳಿದೆಯಾ..!? – ಗೂಗಲ್ ಸಿಇಒ ಸುಂದರ್ ಪಿಚೈ ಬರೆದಿರುವ ಪತ್ರದಲ್ಲೇನಿದೆ..?

ನ್ಯೂಸ್ ಆ್ಯರೋ : ಇತ್ತೀಚೆಗೆ ದೈತ್ಯ ಜಾಗತಿಕ ಕಂಪೆನಿಗಳು ಉದ್ಯೋಗಿಗಳನ್ನು ವಜಾ ಮಾಡುವ ಟ್ರೆಂಡ್ ಆರಂಭವಾಗಿದೆ‌. ಮೊನ್ನೆಯಷ್ಟೇ ಮೈಕ್ರೋಸಾಫ್ಟ್ ಕಂಪೆನಿ ಸುಮಾರು 11000 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿತ್ತು. ಇದೀಗ ಗೂಗಲ್ ಸಂಸ್ಥೆಯೂ ಕೂಡ ಅದೇ ಹಾದಿಯಲ್ಲಿದೆ‌.

ಗೂಗಲ್ ನಲ್ಲಿ ಪ್ರತಿ ಹೆಚ್ಚುವರಿ ವರ್ಷಕ್ಕೆ 15 ವಾರದ ವೇತನದ ಜೊತೆಗೆ ಬೇರ್ಪಡಿಕೆಯ ಪ್ಯಾಕೆಜನ್ನು ಕೂಡ ನೀಡಲಿದ್ದೇವೆ. ಆ ಮೂಲಕ ವೇಸ್ಟಿಂಗ್ ಕಡಿಮೆ ಮಾಡುತ್ತೇವೆ. ಗೂಗಲ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್ ಸುಮಾರು 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿ ಸಿಇಓ ಮಾಹಿತಿ ನೀಡಿದ್ದಾರೆ.

ಉದ್ಯೋಗ ನಷ್ಟಗಳು ನೇಮಕಾತಿ ಮತ್ತು ಕಾರ್ಪೊರೇಟ್ ಕಾರ್ಯಗಳು, ಎಂಜಿನಿಯರಿಂಗ್ ಹಾಗೂ ಉತ್ಪನ್ನಗಳ ತಂಡಗಳನ್ನು ಸೇರಿದಂತೆ ಕಂಪನಿಯಾದ್ಯಂತ ಕೆಲವು ತಂಡಗಳ ಮೇಲೆ ಪರಿಣಾಮ ಬೀರುತ್ತವೆ. ವಜಾಗೊಳಿಸುವಿಕೆ ಜಾಗತಿಕವಾಗಿದ್ದು ತಕ್ಷಣವೇ ಅಮೆರಿಕ ಸಿಬ್ಬಂದಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಗೂಗಲ್ ಹೇಳಿದೆ. ಈ ನಿರ್ಧಾರದ ನಂತರ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಕಂಪನಿಯ ಉದ್ಯೋಗಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ.

ಸುಂದರ್ ಪಿಚೈ ಅವರು ಪತ್ರದ ಮೂಲಕ ಹೇಳಿದ್ದಿಷ್ಟು..!

ನಿಮ್ಮೊಂದಿಗೆ ನೋವಿನ ಸಂಗತಿಯೊಂದನ್ನು‌ ಹಂಚಿಕೊಳ್ಳುತ್ತಿದ್ದೆನೆ, ಕಂಪನಿಯ ಉದ್ಯೋಗಿಗಳಲ್ಲಿ‌ ಸುಮಾರು 12 ಸಾವಿರ ಪಾತ್ರಗಳು ಕಡಿಮೆಯಾಗಲಿದೆ. ಉದ್ಯೋಗದಿಂದ ವಜಾಗೊಳ್ಳಲಿರುವ ಅಮೇರಿಕಾದ ಉದ್ಯೋಗಿಗಳಿಗೆ ನಾವು ಈಗಾಗಲೇ ಇಮೇಲ್ ಮೂಲಕ ಮಾಹಿತಿ ನೀಡಿದ್ದೇವೆ. ಇನ್ನುಳಿದ ದೇಶಗಳಲ್ಲಿನ ಕಾನೂನು ಹಾಗೂ ನಿಯಮಗಳಿಂದಾಗಿ ಈ ವಿಚಾರ ತಿಳಿಸುವುದು ಕೊಂಚ ತಡವಾಗುತ್ತಿದೆ’ ಎಂದಿದ್ದಾರೆ.

ಮುಂದುವರೆಸಿ, ಪ್ರತಿಭಾವಂತ ಉದ್ಯೋಗಿಗಳನ್ನು ಕಂಪೆನಿಗೆ ನೇಮಕ ಮಾಡಿಕೊಂಡಿದ್ದೆವು. ಕೆಲಸವನ್ನು ಇಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ದೂರ ಮಾಡಲು ಕಷ್ಟವಾಗುತ್ತಿದೆ, ಅದಕ್ಕಾಗಿ ನಾವು ತೀವ್ರವಾಗಿ ವಿಷಾದಿಸುತ್ತವೆ ಎಂದಿರುವ ಪಿಚೈ, ಈ ನಿರ್ಧಾರ ಗೂಗಲ್ ಉದ್ಯೋಗಿಗಳ ಮೇಲೆ ಸಾಕಷ್ಟು ಪರಿಣಾಮ‌ ಬೀರಬಹುದು ಎಂದು ನನಗೆ ತಿಳಿದಿದೆ. ಆ ಎಲ್ಲಾ ಹೊಣೆಯನ್ನು ನಾನೆ ಹೊರುತ್ತೆನೆ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕಂಪೆನಿ ನಾಟಕೀಯ ಬೆಳವಣಿಗೆಗಳನ್ನು ಕಂಡಿದೆ. ಧ್ಯೇಯೋದ್ದೇಶದ ಶಕ್ತಿ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯ ಮತ್ತು AI ನಲ್ಲಿನ ನಮ್ಮ ಆರಂಭಿಕ ಹೂಡಿಕೆಗಳಿಗೆ ಧನ್ಯವಾದಗಳು. ಮುಂದೆ ಇರುವ ದೊಡ್ಡ ಅವಕಾಶದ ಬಗ್ಗೆ ನನಗೆ ವಿಶ್ವಾಸವಿದೆ. ಅದನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಕೆಲವು ಕಠಿಣ ಆಯ್ಕೆಗಳನ್ನು ಮಾಡಬೇಕಾಗಿದೆ. ಆ ಕಾರಣ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದೇವೆ. ಕಂಪನಿಯಾಗಿ ನಮ್ಮ ಹೆಚ್ಚಿನ ಆದ್ಯತೆಗಳೊಂದಿಗೆ ಜೋಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಾಡಕ್ಟ್ ವಲಯ ಮತ್ತು ಕಾರ್ಯಗಳಾದ್ಯಂತ ಕಠಿಣ ವಿಮರ್ಶೆಯನ್ನು ಕೈಗೊಂಡಿದ್ದೇವೆ. ನಾವು ತೆಗೆದುಹಾಕುತ್ತಿರುವ ಪಾತ್ರಗಳು ಆ ವಿಮರ್ಶೆಯ ಫಲಿತಾಂಶವನ್ನು ಪ್ರತಿಬಿಂಬಿಸುತ್ತವೆ. ಆಲ್ಫಾಬೆಟ್ ಸಂಸ್ಥೆ, ಪ್ರಾಡಕ್ಟ್ ವಲಯ, ಕಾರ್ಯ ವಲಯ, ಮಟ್ಟಗಳು ಮತ್ತು ಪ್ರದೇಶಗಳಾದ್ಯಂತ ಇರುವ ನೌಕರರನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ.

ಅಮೇರಿಕಾದ ಉದ್ಯೋಗಿಗಳಿಗೆ‌ ಏನೇನಿದೆ?

ಅಮೇರಿಕಾದ ಉದ್ಯೋಗಿಗಳ ಬಗ್ಗೆ ಉಲ್ಲೇಖಿಸಿರುವ ಸುಂದರ್ ಪಿಚೈ, ಅಲ್ಲಿನ ಉದ್ಯೋಗಗಳಿಗೆ ಅಧಿಸೂಚನೆಯ ಅವಧಿಯಲ್ಲಿ ಸಂಬಳ ನೀಡುತ್ತೆವೆ. 2022ರ ಬೋನಸ್ ಮತ್ತು ಉಳಿದ ರಜೆಯ ಸಮಯದ ಹಣವನ್ನು ಪಾವತಿಸುತ್ತೇವೆ. ಕಂಪೆನಿಯಿಂದ ವಜಾಗೊಂಡಿರುವವರಿಗೆ 6 ತಿಂಗಳ ಆರೋಗ್ಯ ಸೇವೆ, ಉದ್ಯೋಗ ನಿಯೋಜನೆ ಸೇವೆಗಳು ಮತ್ತು ವಲಸೆ ಬೆಂಬಲವನ್ನು ನೀಡುತ್ತೇವೆ ಎಂದಿರುವ ಪಿಚೈ, ಸದ್ಯ 25 ವರ್ಷಗಳ ಗೂಗಲ್ ಕಠಿಣ ಹಾದಿಯಲ್ಲಿ ಸಾಗುತ್ತಿದೆ‌ ಎಂದಿದ್ದಾರೆ.

ಬಳಕೆದಾರರು, ಡೆವಲಪರ್‌ಗಳು ಮತ್ತು ವ್ಯವಹಾರಗಳಿಗಾಗಿ ನಾವು ಸಂಪೂರ್ಣವಾಗಿ ಹೊಸ ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದೇವೆ. ನಮ್ಮ ಉತ್ಪನ್ನಗಳಾದ್ಯಂತ AI ಯೊಂದಿಗೆ ನಮಗೆ ಗಣನೀಯ ಅವಕಾಶವಿದೆ ಮತ್ತು ಅದನ್ನು ಧೈರ್ಯದಿಂದ ಮತ್ತು ಜವಾಬ್ದಾರಿಯುತವಾಗಿ ಸಮೀಪಿಸಲು ಸಿದ್ಧರಿದ್ದೇವೆ.

ಈ ಎಲ್ಲಾ ಕೆಲಸಗಳು ನಮ್ಮ ಸಂಸ್ಕೃತಿಯ ಮೊದಲಿನಿಂದಲೂ “ಅಸಾಧ್ಯವಾದುದಕ್ಕೆ ಆರೋಗ್ಯಕರ ನಿರ್ಲಕ್ಷ್ಯ” ದ ಮುಂದುವರಿಕೆಯಾಗಿದೆ. ನಾನು ಇಂದು Google ಅನ್ನು ನೋಡಿದಾಗ, ಅದೇ ಉತ್ಸಾಹ ಮತ್ತು ಶಕ್ತಿಯು ನಮ್ಮ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ನಾನು ನೋಡುತ್ತೇನೆ. ಅದಕ್ಕಾಗಿಯೇ ನಮ್ಮ ಕಠಿಣ ದಿನಗಳಲ್ಲಿಯೂ ಸಹ ನಮ್ಮ ಉದ್ದೇಶವನ್ನು ತಲುಪಿಸುವ ನಮ್ಮ ಸಾಮರ್ಥ್ಯದ ಬಗ್ಗೆ ನಾನು ಆಶಾವಾದಿಯಾಗಿರುತ್ತೇನೆ. ಇಂದು ಖಂಡಿತವಾಗಿಯೂ ಅವುಗಳಲ್ಲಿ ಒಂದಾಗಿದೆ.

ನಾವು ಹೇಗೆ ಮುಂದುವರಿಯುತ್ತೇವೆ ಎಂಬುದರ ಕುರಿತು ನಿಮಗೆ ಹಲವು ಪ್ರಶ್ನೆಗಳಿವೆ ಎಂದು ನನಗೆ ತಿಳಿದಿದೆ. ಸೋಮವಾರ ಟೌನ್ ಹಾಲ್ ಆಯೋಜಿಸುತ್ತೇವೆ. ವಿವರಗಳಿಗಾಗಿ ನಿಮ್ಮ ಕ್ಯಾಲೆಂಡರ್ ಅನ್ನು ಪರಿಶೀಲಿಸಿ. ಅಲ್ಲಿಯವರೆಗೆ, ಈ ಕಷ್ಟಕರವಾದ ಸುದ್ದಿಯನ್ನು ಒಪ್ಪಿಕೊಳ್ಳುವಾಗ ದಯವಿಟ್ಟು ನಿಮ್ಮ ಕಾಳಜಿ ವಹಿಸಿ ಎಂಬುದಾಗಿ ತಮ್ಮ‌ ಪತ್ರದಲ್ಲಿ ಸುಂದರ್ ಪಿಚೈ ತಿಳಿಸಿದ್ದಾರೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *