ಜಿಯೋ 5ಜಿ ಸೇವೆ ಕಾರ್ಯಾರಂಭಿಸಿದ ಆ ಪ್ರಮುಖ ಜಿಲ್ಲೆಗಳ್ಯಾವುವು ಗೊತ್ತಾ? ; ನಿಮ್ಮ ಜಿಲ್ಲೆಯೂ ಇರಬಹುದು!

ಜಿಯೋ 5ಜಿ ಸೇವೆ ಕಾರ್ಯಾರಂಭಿಸಿದ ಆ ಪ್ರಮುಖ ಜಿಲ್ಲೆಗಳ್ಯಾವುವು ಗೊತ್ತಾ? ; ನಿಮ್ಮ ಜಿಲ್ಲೆಯೂ ಇರಬಹುದು!

ನ್ಯೂಸ್ ಆ್ಯರೋ : ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಸಂಚಲನ ದೇಶದ ನಂಬರ್ 1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ. ಸದ್ಯ ಈ ದೈತ್ಯ ಕಂಪನಿ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲು ಹೊರಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ 11 ಪ್ರಮುಖ ನಗರಗಳಾದ ಹುಬ್ಬಳ್ಳಿ-ದಾರವಾಡ, ಬೆಳಗಾವಿ, ಮಂಗಳೂರು, ಉಡುಪಿ-ಮಣಿಪಾಲ, ವಿಜಯಪುರ,ಕಲಬುರಗಿ ಹಾಗೂ ಬಳ್ಳಾರಿ ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಸೇವೆಗಳನ್ನು‌‌ ಆರಂಭಿಸಿದೆ.

ಸದ್ಯ ಜಿಯೋ 5ಜಿ ಸೇವೆ ಆರಂಭಗೊಂಡಿರುವ ಪ್ರಮುಖ 11 ನಗರಗಳೂ ಕೂಡ ಇ-ಆಡಳಿತ, ಶೈಕ್ಷಣಿಕ ಕ್ರಾಂತಿ, ಗೇಮಿಂಗ್, ಕೃತಕ ಬುದ್ಧಿಮತ್ತೆ, ಆರೋಗ್ಯ, ಕೃಷಿ, ಐಟಿ-ಬಿಟಿ ಕ್ಷೇತ್ರಗಳ ಬೆಳವಣಿಗೆಯ ಅವಕಾಶಗಳನ್ನು‌ ಹೊಂದಿದೆ. ಈ ಜಿಲ್ಲೆಗಳ ಎಲ್ಲಾ ಜಿಯೋ ಗ್ರಾಹಕರು ಹೆಚ್ಚಿನ ಖರ್ಚಿಲ್ಲದೆ 1ಜಿಬಿಪಿಎಸ್+ ಅನಿಯಮಿತ ಡೇಟಾ ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ.

ಇದೀಗ ಜಿಯೋ ಸಂಸ್ಥೆ ಪ್ರತಿ ಭಾರತೀಯನಿಗೂ ಟ್ರೂ 5ಜಿ ಸೇವೆಯನ್ನು ತಲುಪಿಸಲು ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದೆ. ಈ ಸೇವೆಯಿಂದಾಗಿ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಉತ್ಕೃಷ್ಟ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ 5ಜಿ ಸೇವೆ ಆರಂಭಗೊಂಡಿರುವ ದೇಶದ ನಗರಗಳು ಪ್ರಮುಖ ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಕೈಗಾರಿಕಾ ನಗರಗಳಾಗಿ ಬೆಳೆಯುತ್ತಿವೆ. ಈ ಪ್ರದೇಶದ ಗ್ರಾಹಕರು ಅತ್ಯುತ್ತಮ ದೂರ ಸಂಪರ್ಕ‌ ಸೇವೆಗಳನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಇ-ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕೂಡ ಬೆಳೆಯುತ್ತದೆ ಎಂದು ಜಿಯೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

5ಜಿ ಸಪೋರ್ಟ್ ಹೊಂದಿರುವ ಎಲ್ಲಾ ಸ್ಮಾರ್ಟ್ಫೋನ್ ಗಳಲ್ಲೂ ಈ ಸೇವೆ ಲಭ್ಯವಿರಲಿದೆ. ಜೊತೆಗೆ ಅನಿಯಮಿತ 5ಜಿ ಡೇಟಾ ದೊರೆಯಲಿದೆ. ಇದಕ್ಕಾಗಿ 5ಜಿ‌ ಸ್ಮಾರ್ಟ್ಫೋನ್ ಹೊಂದಿರುವ ಜಿಯೋ ಗ್ರಾಹಕರು 5ಜಿ ನೆಟ್ಟವರ್ಕ್ ಸೆಟ್ಟಿಂಗ್ ಸಕ್ರಿಯಗೊಳಿಸುವಂತೆ ಸಂಸ್ಥೆ ತಿಳಿಸಿದೆ‌. ಈ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ ಇದಕ್ಕೆ 5ಜಿ ಸ್ಮಾರ್ಟ್ಫೋನ್ ಬಹುಮುಖ್ಯವಾಗಿ ಬೇಕಾಗುತ್ತದೆ.

5ಜಿ ನೆಟ್ಟವರ್ಕನ್ನು ಸಕ್ರಿಯಗೊಳಿಸುವ‌ ಬಗ್ಗೆ ಜಿಯೋ ತನ್ನ ಅಧಿಕೃತ ಯೂಟ್ಯೂಬ್ ಚಾಬೆಲ್ ನಲ್ಲಿ ವಿಡಿಯೋ ಒಂದನ್ನ ಹಂಚಿಕೊಂಡಿದೆ. ಸದ್ಯ, ನೀವು 239 ರೂ.ಗಿಂತ ಹೆಚ್ಚಿನ ಬೆಲೆಯ ಜಿಯೋ ಯೋಜನೆಗೆ ಗ್ರಾಹಕರಾಗಿದ್ದರೆ ಸಂಸ್ಥೆಯ ಮುಂದಿನ ಆದೇಶದ ವರೆಗೆ ನಿಮಗೆ ಅನಿಯಮಿತ 5ಜಿ ಡೇಟಾ ದೊರೆಯಲಿದೆ ಎಂದು‌‌ ಜಿಯೋ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *