ಅನ್ ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕ್ – ಪೋಸ್ಟ್, ರಿಟ್ವೀಟ್, ಲೈಕ್ ಗೂ ಇನ್ಮುಂದೆ ಹಣ ಕಟ್ಟಲೇಬೇಕು..!

ಅನ್ ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕ್ – ಪೋಸ್ಟ್, ರಿಟ್ವೀಟ್, ಲೈಕ್ ಗೂ ಇನ್ಮುಂದೆ ಹಣ ಕಟ್ಟಲೇಬೇಕು..!

ನ್ಯೂಸ್ ಆ್ಯರೋ : ನಾವು ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ವಿಟರ್ ಕೂಡಾ ಒಂದು. ಆ್ಯಪ್ ಗಳಲ್ಲಿ ಅಥವಾ ಅದು ಕೆಲಸ ಮಾಡುವ ಪ್ರಕ್ರಿಯೆಗಳಲ್ಲಿ ಏನಾದರೊಂದು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಟ್ವಿಟರ್ ಕಂಪೆನಿಯಲ್ಲಿ ಕೂಡಾ ಇತ್ತೀಚೆಗೆ ನಡೆದ ಬೆಳವಣಿಗೆಗಳು ನಿಮಗೆಲ್ಲಾ ಗೊತ್ತೇ ಇದೆ.‌ ಆದರೆ ಇದೀಗ ಟ್ವಿಟರ್ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೇಳಿಬಂದಿದೆ.

ಏನದು ಹೊಸ ಸುದ್ದಿ..?

ಅನ್ ವೆರಿಫೈಡ್ ಟ್ವಿಟರ್ ಬಳಕೆದಾರರು ಇನ್ಮುಂದೆ ಪೋಸ್ಟ್, ಲೈಕ್, ರಿಟ್ವೀಟ್, ರಿಪ್ಲೈ ಒಳಗೊಂಡ ಮುಂತಾದ ಸಂವಹನ ಸೇವೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ಟ್ವಿಟರ್ ಸಂಸ್ಥೆ ಅನ್ವೆರಿಫೈಡ್ ಬಳಕೆದಾರರಿಗೆ ಪಾವತಿ ಸೇವೆಯನ್ನು ಪರಿಚಯಿಸುತ್ತಿದ್ದು ವರ್ಷಕ್ಕೆ ಒಂದು ಡಾಲರ್ ಪಾವತಿಸಿದರೆ ಮಾತ್ರ ಪೋಸ್ಟ್, ಲೈಕ್, ಕಮೆಂಟ್ ಮಾಡಬಹುದು.

ಈ ಬಗ್ಗೆ ಟ್ವಿಟರ್ ಸಂಸ್ಥೆ ಏನು ಹೇಳುತ್ತೆ..?

ಸದ್ಯ ಈ ಯೋಜನೆ ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಪರೀಕ್ಷಾ ಹಂತದಲ್ಲಿದೆ. ಅ.17, 2023ರಿಂದ ನಾವು ಎರಡು ದೇಶಗಳಲ್ಲಿನ ಹೊಸ ಬಳಕೆದಾರರಿಗೆ ಹೊಸ ಚಂದಾದಾರಿಕೆ ವಿಧಾನವನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ದೇಶಗಳಿಗೂ ಅನ್ವಯವಾಗುವ ಸಾಧ್ಯತೆಯಿದೆ’ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.

ಈ ಹೊಸ ನಿಯಮ ಜಾರಿಗೆ ತರಲು ಕಾರಣವೇನು?

ಸ್ಪ್ಯಾಮ್ ಅಥವಾ ನಕಲಿ ಅಕೌಂಟ್ ಗಳನ್ನು ಕಡಿಮೆ ಮಾಡಲು ಮತ್ತು ಅಧಿಕೃತ ಬಳಕೆದಾರರ ಚಟುವಟಿಕೆಯ ಕುಶಲತೆ ಹೆಚ್ಚಿಸಲು ಈ ಹೊಸ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಹೊಸ ಬಳಕೆದಾರರಿಗೆ ಕಡಿಮೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಹಣ ಪಾವತಿಸದ ಬಳಕೆದಾರರು ಟ್ವಿಟರ್ ನ್ನು ಹೇಗೆ ಉಪಯೋಗಿಸಬಹುದು..?

ಹಣ ಪಾವತಿಸದ ಹೊಸ ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕೇವಲ ಓದಲು ಮಾತ್ರ ಸಾಧ್ಯವಾಗುತ್ತದೆ. ಪ್ರತಿಕ್ರಿಯೆಯ ಯಾವುದೇ ಸೌಲಭ್ಯ ಲಭ್ಯವಾಗುವುದಿಲ್ಲ. ಪ್ರಸ್ತುತ ಭಾರತದಲ್ಲಿ ಗಣ್ಯರು ಹೊರತುಪಡಿಸಿ ಬ್ಲೂಟಿಕ್ ಸೇವೆ ಪಡೆಯಲು 699ರೂ. ಪಾವತಿಸಬೇಕಿದೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *