KTM ಬೈಕ್ ನಲ್ಲಿ ಪುಂಡರ ವ್ಹೀಲಿಂಗ್ ತಂದ ಆಪತ್ತು – ಶಾಲಾ ಶಿಕ್ಷಕಿಯ ಜೀವನ್ಮರಣ ಹೋರಾಟ
- ಕರ್ನಾಟಕ
- July 21, 2023
- No Comment
- 150
ನ್ಯೂಸ್ ಆ್ಯರೋ : ರಾಜ್ಯದಲ್ಲಿ ವ್ಹೀಲಿಂಗ್ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸಿಲುಕಿದ ಮೈಸೂರಿನ ಶಾಲಾ ಶಿಕ್ಷಕಿಯೊಬ್ಬರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಏನಿದು ಘಟನೆ?
ಗಾಯತ್ರಿ ಪುರಂ ಚರ್ಚ್ ಬಳಿ ಮಂಗಳವಾರ ಯುವಕರು ತ್ರಿಬಲ್ ರೈಡಿಂಗ್ ಮೂಲಕ ಬೈಕ್ ವ್ಹೀಲಿಂಗ್ ಮಾಡುತ್ತ ಬಂದು ಶಿಕ್ಷಕಿಗೆ ಡಿಕ್ಕಿ ಹೊಡೆದಿದ್ದರು.
ಕೆಟಿಎಂ ಬೈಕ್ ನಲ್ಲಿ ಬಂದ ಯುಕರು ಡಿಕ್ಕಿ ಹೊಡೆದಿದ್ದರು. ಶಿಕ್ಷಕಿ ಪ್ರಜ್ಞೆ ತಪ್ಪುತ್ತಿದ್ದಂತೆ ಅವರನ್ನು ಅಲ್ಲೇ ಬಿಟ್ಟು ಯುವಕರು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಸದ್ಯ ಶಿಕ್ಷಕಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.