ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 61 ಕೈದಿಗಳಿಗೆ ಬಿಡುಗಡೆ ಭಾಗ್ಯ – ಸನ್ನಡತೆ ಆಧಾರದಲ್ಲಿ ರಿಲೀಸ್ ಹೇಗೆ? ಏನೆಲ್ಲಾ ನಿಯಮಗಳಿವೆ?

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 61 ಕೈದಿಗಳಿಗೆ ಬಿಡುಗಡೆ ಭಾಗ್ಯ – ಸನ್ನಡತೆ ಆಧಾರದಲ್ಲಿ ರಿಲೀಸ್ ಹೇಗೆ? ಏನೆಲ್ಲಾ ನಿಯಮಗಳಿವೆ?

ನ್ಯೂಸ್‌ ಆ್ಯರೋ : ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷಯನ್ನು ಅನುಭವಿಸುತ್ತಿದ್ದ 61 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಅವರ ಒಪ್ಪಿಗೆಯಂತೆ ಬಿಡುಗಡೆ ಮಾಡಲಾಗಿದೆ.

ಗೃಹ ಇಲಾಖೆಯು ಸನ್ನಡತೆ ಆಧಾರದ ಮೇಲೆ 64 ಕೈದಿಗಳ ರಿಲೀಸ್​ಗೆ ಪಟ್ಟಿ ತಯಾರಿಸಿತ್ತು. ಬಳಿಕ ಈ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿತ್ತು. ಈ ಪೈಕಿ ಮೊದಲು 57 ಕೈದಿಗಳ ರಿಲೀಸ್​ಗೆ ರಾಜ್ಯಪಾಲರ ಒಪ್ಪಿಗೆ ಸೂಚಿಸಿದ್ದರು. 7 ಕೈದಿಗಳ ಹೆಸರನ್ನು ವಾಪಸ್ ಕಳುಹಿಸಿದ್ದರು.

ಮರುಪರಿಶೀಲನೆ ಮಾಡಿ 7 ಕೈದಿಗಳಲ್ಲಿ ನಾಲ್ವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 3 ಕೈದಿಗಳ ವಿರುದ್ಧ ಗಂಭೀರವಾದ ಕೇಸ್ ದಾಖಲಾಗಿದ್ದರಿಂದ ಬಿಡುಗಡೆಗೆ ನಿರಾಕರಿಸಲಾಗಿದೆ.

ಸನ್ನಡತೆ ಆಧಾರ ಎಂದರೇನು? ಸಾಮಾನ್ಯವಾಗಿ ಸನ್ನಡತೆ ಎಂದರೆ ಇತರರಿಗೆ ಉಪಕಾರಿಯಾಗಿ, ತಲೆ ಬಾಗಿ ನಡೆದುಕೊಳ್ಳುವುದು. ನೀತಿ-ನಿಯಮಗಳನ್ನು ಪಾಲಿಸುವುದು. ಇನ್ನೂ ಜೈಲು ಶಿಕ್ಷೆ ಅನುಭವಿಸುತ್ತಿರುವವರು ಕೂಡ ಶಿಕ್ಷಾವಧಿಯಲ್ಲಿ ಬದಲಾಗಿ ಜೈಲಿನಲ್ಲಿ ಈ ಬಗೆಯ ಸನ್ನಡತೆಯನ್ನು ತೋರಿದರೆ ಅವರಿಗೆ ಅವಧಿಪೂರ್ವ ಬಿಡುಗಡೆಯನ್ನು ದಯಪಾಲಿಸುವ ರಿವಾಜು ನಮ್ಮ ಕಾನೂನಿನಲ್ಲಿದೆ.

ಇನ್ನೂ ಶಿಕ್ಷಾವಧಿಯಲ್ಲೂ ಯಾವುದೇ ಬಗೆಯ ಸುಧಾರಣೆಯನ್ನು ತೋರದಿದ್ದರೆ ಅವಧಿಪೂರ್ವ ಬಿಡುಗಡೆಗೆ ಅರ್ಹರಾಗುವುದೇ ಇಲ್ಲ. ಅದರಲ್ಲೂ ಅತ್ಯಾಚಾರ, ಕೊಲೆ, ದೇಶದ್ರೋಹ ಇತ್ಯಾದಿ ಅಪರಾಧಗಳನ್ನು ಎಸಗಿರುವ ಅಪರಾಧಿಗಳನ್ನು ಸನ್ನಡತೆಯಾಧಾರಿತ ಬಿಡುಗಡೆಗೆ ಪರಿಗಣಿಸಲೇ ಬಾರದೆಂದು ಕೇಂದ್ರ ಸರಕಾರ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ರೂಪಿಸಲಾದ ನಿಯಮಾವಳಿಗಳು ಸ್ಪಷ್ಟಪಡಿಸಿತ್ತು.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *