ಗೋ ಮಾಂಸ ತಿಂದು ವಿವಾದಕ್ಕೆ ಕಾರಣರಾದ ಟೀಮ್ ಇಂಡಿಯಾದ ಆಟಗಾರರು – ಯಾರೆಲ್ಲ ಬೀಫ್ ತಿಂದವರು ಗೊತ್ತೆ?

ಗೋ ಮಾಂಸ ತಿಂದು ವಿವಾದಕ್ಕೆ ಕಾರಣರಾದ ಟೀಮ್ ಇಂಡಿಯಾದ ಆಟಗಾರರು – ಯಾರೆಲ್ಲ ಬೀಫ್ ತಿಂದವರು ಗೊತ್ತೆ?

ನ್ಯೂಸ್ ಆ್ಯರೋ‌ : ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ಅದ್ವಿತೀಯ ಸಾಧನೆ ಮಾಡಿ ಮೆರೆಯುತ್ತಿದೆ. ಬಹುತೇಕ ಆಟಗಾರರು ತಮ್ಮ ಪ್ರತಿಭೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆಟದ ಜೊತೆಗೆ ಜೀವನಶೈಲಿಯೂ ಆಗಾಗ ಚರ್ಚೆಗೆ ಗ್ರಾಸವಾಗುತ್ತದೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ಮೂವರು ಹಿಂದೂ ಧರ್ಮದ ಆಟಗಾರರು ಗೋಮಾಂಸ ತಿಂದಿದ್ದಾರೆ ಎನ್ನುವ ಸಂಗತಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಯಾರು ಆ ಮೂವರು ಆಟಗಾರರು ಎನ್ನುವುದರ ಮಾಹಿತಿ ಇಲ್ಲಿದೆ.

ರೋಹಿತ್ ಶರ್ಮಾ

ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ರೋಹಿತ್ ಶರ್ಮಾ. ತಮ್ಮ ಆಟದ ಶೈಲಿ, ನಾಯಕತ್ವದಿಂದ ಗಮನ ಸೆಳೆಯುವ ಅವರು 2021ರಲ್ಲಿ ಗೋಮಾಂಸ ತಿಂದಿದ್ದಾರೆ ಎನ್ನುವ ವಿಚಾರವೇ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಆದರೆ ಈ ಬಗ್ಗೆ ಹಿಟ್ ಮ್ಯಾನ್ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ನವದೀಪ್ ಸೈನಿ

ವೇಗದ ಬೌಲರ್ ನವದೀಪ್ ಸೈನಿ ಕೂಡ ಇದೇ ಕಾರಣಕ್ಕೆ ನೆಟ್ಟಿಗರಿಂದ ಟ್ರೋಲಿಗೆ ಗುರಿಯಾಗಿದ್ದಾರೆ. ಅವರು ಕೂಡ ಗೋ ಮಾಂಸ ಸೇವಿಸಿದ್ದರು ಎನ್ನುವ ವಿಚಾರ ಬಹಿರಂಗವಾಗಿದ್ದು, ನೆಟ್ಟಿಗರು ಗರಂ ಆಗಿದ್ದರು. ರೋಹಿತ್ ಶರ್ಮಾ ಜೊತೆಗೆ ಅಂದು ಸೈನಿ ಇದ್ದರು ಎನ್ನಲಾಗಿದೆ.

ಪೃಥ್ವಿ ಶಾ

ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರನೀತ. 2021ರಲ್ಲಿ ರೋಹಿತ್ ಶರ್ಮಾ, ನವದೀಪ್ ಸೈನಿ ಜೊತೆಗೆ ಪೃಥ್ವಿ ಶಾ ಕೂಡ ಬೀಫ್ ತಿಂದಿದ್ದರು ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಗೊತ್ತಾಗಿದ್ದು ಹೇಗೆ?

ಈ ಮೂವರು ಆಟಗಾರರು ಆಹಾರ ಸೇವಿಸಿದ ಹೋಟೆಲ್ ಬಿಲ್ ಬಹಿರಂಗವಾಗುವುದರೊಂದಿಗೆ ಈ ವಿಷಯ ಹೊರ ಜಗತ್ತಿಗೆ ತಿಳಿಯಿತು. ಬಿಲ್ ನಲ್ಲಿ ಬೀಫ್ ಎಂದು ಉಲ್ಲೇಖವಾಗಿದ್ದು ಈ ಫೋಟೋ ವೈರಲ್ ಆಗಿದೆ. ‘ನೀವೇ ಹೀಗೆ ಮಾಡಿದರೆ ಇತರರಿಗೆ ಹೇಗೆ ಮಾದರಿಯಾಗುತ್ತೀರಿ?’ ಎನ್ನುವುದು ನೆಟ್ಟಿಗರ ಪ್ರಶ್ನೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *