ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಭವಿಷ್ಯದ ಬಗ್ಗೆ ನೀವೇ ತೀರ್ಮಾನಿಸಿ – ರೋಹಿತ್, ವಿರಾಟ್ ಗೆ ಬಿಸಿಸಿಐ ನೇರ ಸೂಚನೆ..!
- ಕ್ರೀಡಾ ಸುದ್ದಿ
- November 24, 2023
- No Comment
- 98
ನ್ಯೂಸ್ ಆ್ಯರೋ : ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಂತ್ಯವಾಗಿದೆ. ಫೈನಲ್ ಹಂತಕ್ಕೆ ತಲುಪಿದ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲುಣ್ಣಬೇಕಾಯಿತು. ಇನ್ನು ಮುಂದಿನ ಟಿ20 ವಿಶ್ವಕಪ್ ಸಿದ್ದತೆ ಮಾಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಇಂದಿನಿಂದ ಆಡಲಿದೆ. ವಿಶ್ವಕಪ್ ನಲ್ಲಿ ಆಡಿದ್ದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಮುಖಗಳಿಗೆ ಟಿ20 ಸರಣಿಯಲ್ಲಿ ಮಣೆ ಹಾಕಲಾಗಿದೆ.
ಬಿಸಿಸಿಐ ಏನು ಹೇಳಿದೆ..?
ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಅಂತಾರಾಷ್ಟ್ರೀಯ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅಧಿಕಾರ ನೀಡಲು ಮುಂದಾಗಿದೆ.
ಈ ನಿರ್ಧಾರವು ಇಬ್ಬರು ಕ್ರಿಕೆಟಿಗರಿಗೆ ಸಂಪೂರ್ಣವಾಗಿ ಸೇರಿದೆ ಎಂದು ಸ್ಪಷ್ಟಪಡಿಸಿದ ಬಿಸಿಸಿಐ, ಮುಂಬರುವ ವಿಶ್ವಕಪ್ನಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದರೆ, ಅವರ ವೈಯಕ್ತಿಕ ಆಯ್ಕೆಗಳನ್ನು ಗೌರವಿಸಿ ಮಂಡಳಿಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದೆ. “ಇಬ್ಬರೂ ಆಟಗಾರರು ಮುಂದಿನ ವರ್ಷದ ವಿಶ್ವಕಪ್ನಲ್ಲಿ ಆಡಲು ಬಯಸಿದರೆ, ನಮ್ಮ ಅಭ್ಯಂತರವಿಲ್ಲ; ಅದು ಅವರ ಇಚ್ಛೆ.” ಎಂದು ಬಿಸಿಸಿಐ ತಿಳಿಸಿದೆ.
ಇನ್ನು ಹಿರಿಯ ಆಟಗಾರರ ಅನುಪಸ್ಥಿತಿಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಹುತೇಕ ತಂಡವನ್ನೇ ಭಾರತೀಯ ಆಯ್ಕೆಗಾರರು ಕಣಕ್ಕಿಳಿಸಿದ್ದಾರೆ.
ಆಸ್ಟ್ರೇಲಿಯಕ್ಕೆ ಮ್ಯಾಥ್ಯೂ ವೇಡ್ ನಾಯಕರಾಗಿದ್ದಾರೆ. ಸ್ಟೀವ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗಲ್ಸ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಟಿಮ್ ಡೇವಿಡ್ ಆಸೀಸ್ ತಂಡದಲ್ಲಿ ಹಿರಿಯ ಆಟಗಾರರಾಗಿದ್ದಾರೆ.