ವೀಳ್ಯದೆಲೆ ಚಿತ್ರಾನ್ನ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ತಿಂಡಿ ತಿನ್ನಿ – ಮಾಡೋ ತಲೆಬಿಸಿ ಬೇಡ, ರೆಸಿಪಿ ಇಲ್ಲಿದೆ..

ವೀಳ್ಯದೆಲೆ ಚಿತ್ರಾನ್ನ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ತಿಂಡಿ ತಿನ್ನಿ – ಮಾಡೋ ತಲೆಬಿಸಿ ಬೇಡ, ರೆಸಿಪಿ ಇಲ್ಲಿದೆ..

ನ್ಯೂಸ್ ಆ್ಯರೋ : ಚಿತ್ರಾನ್ನ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಶೇಂಗಾ, ಲೆಮನ್ ಸೇರಿಸಿ ಮಾಡಿದ ಅನ್ನ. ಮಾವಿನಕಾಯಿ, ನೆಲ್ಲಿಕಾಯಿಯನ್ನು ಸೇರಿಸಿ ಸಹ ಚಿತ್ರಾನ್ನವನ್ನು ತಯಾರಿಸ್ತಾರೆ. ನಿಂಬೆಹಣ್ಣಿನಿಂದ ತಯಾರಿಸುವ ಚಿತ್ರಾನ್ನದಂತೆಯೇ ಮಾವಿನಕಾಯಿ ಚಿತ್ರಾನ್ನ, ನೆಲ್ಲಿಕಾಯಿ ಚಿತ್ರಾನ್ನ ಹುಳಿಹುಳಿಯಾಗಿ ಟೇಸ್ಟೀಯಾಗಿರುತ್ತದೆ.

ಆದ್ರೆ ಇದೇ ರೀತಿ ವೀಳ್ಯದೆಲೆಯಿಂದಲೂ ಚಿತ್ರಾನ್ನ ತಯಾರಿಸಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಇಲ್ಲಾಂದ್ರೆ ಕೇಳಿ, ವೀಳ್ಯದೆಲೆಯಿಂದಲೂ (betel leaf) ತುಂಬಾ ಟೇಸ್ಟಿಯಾಗಿರುವ ಚಿತ್ರಾನ್ನ (Rice) ಮಾಡಬಹುದು. ಅದಕ್ಕೆ ಏನೆಲ್ಲಾ ಬೇಕು, ಮಾಡೋದು ಹೇಗೆ ತಿಳ್ಕೊಳ್ಳೋಣ.

ಬೇಕಾದ ಪದಾರ್ಥಗಳು

  • ಎರಡು ವೀಳ್ಯದೆಲೆ
  • 1 ಕಪ್ ಅನ್ನ
  • 2 ಹಸಿ ಮೆಣಸಿನಕಾಯಿ
  • ತುಪ್ಪ
  • ಒಂದು ಹಿಡಿ ಕೊಬ್ಬರಿ ತುರಿ
  • ನಾಲ್ಕೈದು ಕೆಂಪು ಒಣ ಮೆಣಸಿನಕಾಯಿ
  • ಮೂರು ಟೀ ಸ್ಪೂನ್‌ ಎಣ್ಣೆ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಸ್ವಲ್ಪ ಜೀರಿಗೆ
  • ಒಂದು ಟೀ ಸ್ಪೂನ್‌ ಉದ್ದಿನಬೇಳೆ
  • ಅರ್ಧ ಟೀ ಸ್ಪೂನ್‌ ಅರಿಶಿಣ ಪುಡಿ
  • ನಿಂಬೆ ರಸ

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಹದವಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ ಅನ್ನವನ್ನು ತಯಾರಿಸಿಕೊಳ್ಳಿ. ಅನ್ನ ಹೆಚ್ಚು ಬೇಯದಂತೆ ನೋಡಿಕೊಳ್ಳಿ. ಹೀಗಾದರೆ ಅನ್ನ ಉದುರು ಉದುರಾಗಿ ಇರುವುದಿಲ್ಲ ಮತ್ತು ಚಿತ್ರಾನ್ನಕ್ಕೆ ಟೇಸ್ಟ್ ಬರುವುದಿಲ್ಲ. ಬಳಿಕ ಮಿಕ್ಸಿ ಜಾರ್‌ಗೆ ಎರಡು ವೀಳ್ಯದೆಲೆ, ಎರಡು ಹಸಿ ಮೆಣಸಿನಕಾಯಿ ಸೇರಿಸಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ.

ಈಗ ದಪ್ಪ ತಳದ ಪ್ಯಾನ್ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿಕೊಂಡು ಇದಕ್ಕೆ ಸಾಸಿವೆ, ಉದ್ದಿನಬೇಳೆ, ಶೇಂಗಾ ಸೇರಿಸಿ. ಇವಿಷ್ಟು ಕಂದು ಬಣ್ಣಕ್ಕೆ ಬಂದ ನಂತರ ಕತ್ತರಿಸಿದ ಕೆಂಪು ಮೆಣಸಿಕಾಯಿ ಹಾಗೂ ಕರಿಬೇವಿನ ಎಲೆ, ಕತ್ತರಿಸಿದ ತೆಂಗಿನಕಾಯಿ ಚೂರುಗಳನ್ನು ಸೇರಿಸಿ.

ಇದಕ್ಕೆ ರುಬ್ಬಿದ ವೀಳ್ಯದೆಲೆ (Betel Leaves) ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ, ಮೇಲಿನಿಂದ ನಿಂಬೆ ರಸ, ಅರಿಶಿನ, ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷಗಳ ಕಾಲ ಹುರಿಯಿರಿ. ಈಗ ವೀಳ್ಯದೆಲೆಯ ಮಸಾಲಾ ಸಿದ್ಧವಾಗಿದೆ.

ಈಗ ಬಾಣಲೆಗೆ ಬೇಯಿಸಿದ ತಣ್ಣಗಾದ ಅನ್ನವನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿಕೊಳ್ಳಿ. ಈಗ ರುಚಿರುಚಿಯಾದ ವೀಳ್ಯದೆಲೆ ಚಿತ್ರಾನ್ನ ಸವಿಯಲು ಸಿದ್ಧವಾಗಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *