ಸಾವಿನಂಚಿನಲ್ಲಿದ್ದ ತಾಯಿಯ ಕೊನೆಯ ಆಸೆ ಈಡೇರಿಸಿದ ಪುತ್ರಿ – ಐಸಿಯುನಲ್ಲೇ ಹಸೆಮಣೆ ಏರಿ ಮಾದರಿಯಾದ ಮಗಳು

ಸಾವಿನಂಚಿನಲ್ಲಿದ್ದ ತಾಯಿಯ ಕೊನೆಯ ಆಸೆ ಈಡೇರಿಸಿದ ಪುತ್ರಿ – ಐಸಿಯುನಲ್ಲೇ ಹಸೆಮಣೆ ಏರಿ ಮಾದರಿಯಾದ ಮಗಳು

ನ್ಯೂಸ್‌ ಆ್ಯರೋ : ತಾಯಿಯ ಕೊನೆಯ ಆಸೆಯನ್ನು ಪೂರೈಸಲು ಮಗಳು ಆಸ್ಪತ್ರೆಯ ಐಸಿಯುನಲ್ಲಿ ವಿವಾಹವಾದ ಹೃದಯ ವಿದ್ರಾವಕ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಸಾವಿನ ಅಂಚಿನಲ್ಲಿರುವವರ ಕೊನೆಯ ಆಸೆಯಿದ್ದರೆ ಅದನ್ನು ಈಡೇರಿಸಬೇಕು ಎಂದು ಹೇಳಲಾಗುತ್ತದೆ. ಅದರಂತೆ ತನ್ನ ಪ್ರೀತಿಯ ತಾಯಿಯ ಕೊನೆಯ ಆಸೆಯನ್ನು ಪೂರೈಸಲು ಮಗಳು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಹಸೆಮಣೆ ಏರಿದರು. ಆದರೆ, ಮಗಳ ಮದುವೆಯಾದ ಎರಡು ಗಂಟೆಯಲ್ಲೇ ತಾಯಿ ಇಹಲೋಕ ತ್ಯಜಿಸಿದ್ದಾರೆ.

ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದ ವಧು– ವರನ ಕುಟುಂಬದವರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಯ ಕಣ್ಣುಗಳೂ ಒದ್ದೆಯಾದವು. ಈ ಮದುವೆಯು ಗಯಾದ ಆಶಾ ಸಿಂಗ್ ಮಾಡ್ ಮ್ಯಾಜಿಸ್ಟ್ರೇಟ್ ಕಾಲೋನಿ ಬಳಿ ಇರುವ ಆರ್ಶ್ ಆಸ್ಪತ್ರೆಯ ಐಸಿಯುನಲ್ಲಿ ನಡೆಯಿತು.

ವರ್ಮಾ ಜಿಲ್ಲೆಯ ಗುರಾರು ಬ್ಲಾಕ್‌ನ ಬಾಲಿ ಗ್ರಾಮದ ನಿವಾಸಿ ಲಾಲನ್ ಕುಮಾರ್ ಅವರ ಪತ್ನಿ ಪೂನಂ ಕುಮಾರಿ ವರ್ಮಾ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾನು ಬದುಕಿರುವಾಗಲೇ ಮಗಳು ಚಾಂದಿನಿ ಕುಮಾರಿಯ ಮದುವೆ ನೋಡಬೇಕು ಎಂಬ ಆಸೆ ಇತ್ತು. ಪೂನಂ ಕುಮಾರಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಸಮಯದಲ್ಲಿ ಸಾವು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದರು.

ತಾಯಿಯ ಆಸೆಯಂತೆ ಸಂಬಂಧಿಕರು ಮಾತನಾಡಿ, ಗುರುವಾರ ಬ್ಲಾಕ್‌ನ ಸೇಲಂಪುರ ಗ್ರಾಮದ ವಿದ್ಯುತ್ ಕುಮಾರ್ ಅಂಬೇಡ್ಕರ್ ಅವರ ಪುತ್ರ ಎಂಜಿನಿಯರ್‌ ಸುಮಿತ್ ಗೌರವ್ ಅವರೊಂದಿಗೆ ಚಾಂದಿನಿ ಕುಮಾರಿ ಅವರ ನಿಶ್ಚಿತಾರ್ಥವನ್ನು ಡಿಸೆಂಬರ್ 26 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಹುಡುಗಿಯ ತಾಯಿಯ ಒತ್ತಾಯದ ಕಾರಣ, ಅವರಿಬ್ಬರೂ ನಿಶ್ಚಿತಾರ್ಥದ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಆಸ್ಪತ್ರೆಯಲ್ಲಿಯೇ ಮದುವೆಯಾದರು. 

ಮದುವೆಯಾದ ಕೇವಲ ಎರಡು ಗಂಟೆಯಲ್ಲೇ ತಾಯಿ ತೀರಿ ಹೋಗಿದ್ದು, ಬಳಿಕ ಎಲ್ಲರ ಕಣ್ಣು ತೇವಗೊಂಡಿತ್ತು. ಆಕೆ ಹೃದ್ರೋಗದಿಂದ ಬಳಲುತ್ತಿದ್ದರು. ತಾಯಿಯ ಆಸೆಯನ್ನು ಈಡೇರಿಸಲು ಆಸ್ಪತ್ರೆಯಲ್ಲೇ ಮದುವೆಯಾಗಿ ಮಾದರಿಯಾದಳು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *