ದೇಶದ ಜನರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್ – ಒಂದು ಲಕ್ಷ ರೂಪಾಯಿ ಗೆಲ್ಲುವ ಅವಕಾಶ ; ವಿವರ ಇಲ್ಲಿದೆ…
- ರಾಷ್ಟ್ರೀಯ ಸುದ್ದಿ
- January 3, 2023
- No Comment
- 191
ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರವು ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾಗಳ ಹೆಸರುಗಳನ್ನು ಸೂಚಿಸುವಂತೆ ದೇಶದ ಜನರನ್ನು ಕೇಳಿಕೊಂಡಿತ್ತು. ಅಲ್ಲದೇ ಅದಕ್ಕಾಗಿ ಬಹುಮಾನ ಕೂಡ ಘೋಷಿಸಿತ್ತು. ಇದೀಗ ಆಯುಷ್ಮಾನ್ ಭಾರತ್ ಯೋಜನೆಗೆ ಹೊಸ ಲೋಗೋ ವಿನ್ಯಾಸವನ್ನು ಸೂಚಿಸಲು ಜನರಿಗೆ ಸೂಚಿಸಲಾಗಿದ್ದು, ಅದಕ್ಕೂ ಬಹುಮಾನ ಘೋಷಿಸಿದೆ.
ಕೇಂದ್ರ ಸರ್ಕಾರವು ದೇಶದ ಬಡ ಜನರಿಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸುತ್ತಿದೆ. ಅಕ್ಟೋಬರ್ 25, 2021ರಂದು, ಆಯುಷ್ಮಾನ್ ಭಾರತ್ ಯೋಜನೆಯನ್ನ ಪ್ರಾರಂಭಿಸಲಾಯಿತು.
ಇದರ ಭಾಗವಾಗಿ, ಅರ್ಹ ಜನರಿಗೆ 5 ಲಕ್ಷ ರೂಪಾಯಿವರೆಗಿನ ವೈದ್ಯಕೀಯ ಸೌಲಭ್ಯವನ್ನ ಉಚಿತವಾಗಿ ಒದಗಿಸಲಾಗುವುದು. ಈಗ ಸರ್ಕಾರವು ಈ ಯೋಜನೆಗಾಗಿ ಹೊಸ ಲೋಗೋವನ್ನು ವಿನ್ಯಾಸಗೊಳಿಸಲು ಜನರನ್ನು ಕೇಳಿದೆ. ಈ ಲೋಗೋದ ವಿತರಣೆಯು ಅತ್ಯುತ್ತಮ ಲೋಗೋಗೆ ಆಯ್ಕೆಯಾದ ವಿಜೇತರಿಗೆ 10,000 ರೂಪಾಯಿಂದ 1 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುತ್ತದೆ.
ಲೋಗೋವನ್ನು ವಿನ್ಯಾಸಗೊಳಿಸಲು ಆಸಕ್ತಿ ಇರುವವರು ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಲೋಗೋ ವಿನ್ಯಾಸವನ್ನು ಸಲ್ಲಿಸಲು ಜನವರಿ 12 ಕೊನೆಯ ದಿನಾಂಕವಾಗಿದೆ. ಇಲ್ಲಿಯವರೆಗೆ, ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಲೋಗೋಗಳನ್ನು ಕಳುಹಿಸಲಾಗಿದೆ. ಗೆದ್ದ ಅಭ್ಯರ್ಥಿಗಳಿಗೆ 1 ಲಕ್ಷ ರೂ.ಗಳ ಬಹುಮಾನ ನೀಡಲಾಗುವುದು. ಸಂಪೂರ್ಣ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.