ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆದ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ – ಡೆಲಿವರಿ ಮಾಡಿದ ಬಳಿಕ ಗೋಯಲ್ ಹೇಳಿದ್ದೇನು?

ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆದ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ – ಡೆಲಿವರಿ ಮಾಡಿದ ಬಳಿಕ ಗೋಯಲ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಆಹಾರ ವಿತರಣಾ ಆ್ಯಪ್ ಝೊಮಾಟೊ ದ ಸಿಇಒ ದೀಪಿಂದರ್ ಗೋಯಲ್ ಅವರು ತಾವು ಒಂದು ದಿನದ ಡೆಲಿವರಿ ಏಜೆಂಟ್‌ನ ಪಾತ್ರವನ್ನು ವಹಿಸಿಕೊಂಡಿದ್ದಾಗಿ ಟ್ವೀಟ್ ಮಾಡಿ ಹೇಳಿದ್ದಾರೆ.

ಗೋಯಲ್ ಅವರು ಝೊಮಾಟೊ ಪ್ರಧಾನ ಕಚೇರಿಯಲ್ಲಿ ಆದೇಶವನ್ನು ಸ್ವೀಕರಿಸುತ್ತಿರುವ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದಾರೆ. “ನನ್ನ ಮೊದಲ ಡೆಲಿವರಿ ನನ್ನನ್ನು ಝೊಮಾಟೊ ಆಫೀಸ್‌ಗೆ ಕರೆತಂದಿತು ಎಂದು ಅವರು ಬರೆದುಕೊಂಡಿದ್ದಾರೆ. ಈ ಎಲ್ಲಾ ಟ್ವೀಟ್‌ಗಳಲ್ಲಿ ಗ್ರಾಹಕರಿಗೆ ಆಹಾರವನ್ನು ತಲುಪಿಸುವ ಅನುಭವವನ್ನು ಗೋಯಲ್ ಹಂಚಿಕೊಂಡಿದ್ದಾರೆ.

“ಇದೊಂದು ಮೋಜಿನ ಸಂಗತಿ:

ಇಂದು ವಿತರಿಸಲಾದ ಆರ್ಡರ್‌ಗಳು ಎಷ್ಟಿತ್ತು ಎಂದರೆ, ನಮ್ಮ ಆಹಾರ ವಿತರಣಾ ಸೇವೆಯ ಮೊದಲ 3 ವರ್ಷಗಳಲ್ಲಿ ವಿತರಿಸಲಾದ ಎಲ್ಲಾ ಆರ್ಡರ್‌ಗಳನ್ನು ಸೇರಿಸಿದರೆ ಎಷ್ಟು ಇತ್ತೋ ಅಷ್ಟು” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

ನಾಲ್ಕು ಯಶಸ್ವಿ ಆರ್ಡರ್‌ಗಳನ್ನು ಪೂರೈಸಿದ ಗೋಯಲ್

ಟ್ವಿಟರ್‌ನಲ್ಲಿ ನಾನು ಮೊದಲ ಫುಡ್‌ ಆರ್ಡರ್‌ನ್ನು ಪಡೆದುಕೊಂಡಿದ್ದೇನೆ, ಅದನ್ನು ಸರಿಯಾದ ಸಮಯಕ್ಕೆ ಡೆಲಿವರಿ ಮಾಡುವುದಾಗಿ ಟ್ವೀಟ್‌ ಮಾಡಿದ್ದರು.

ಮೊದಲ ಆರ್ಡರ್‌ ಅನ್ನು ಡೆಲಿವರಿ ಮಾಡಿದ ನಂತರ ಗೋಯಲ್‌ ಆಫೀಸಿಗೆ ಮರಳಿದ್ದಾಗಿ ತಿಳಿಸಿದ್ದಾರೆ. ಇನ್ನೂ ಮತ್ತೊಂದು ಟ್ವೀಟ್‌ನಲ್ಲಿ ದೀಪಿಂದರ್ ಗೋಯಲ್ ತಾವು ಯಾರಿಗೆ ಫುಡ್‌ ಡೆಲಿವರಿ ಮಾಡಿದ್ದೇನೆ ಎಂದು ಸಹ ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಗೋಯಲ್ ಮೊಮ್ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಿರುವ ವಯಸ್ಸಾದ ದಂಪತಿಗಳಿಗೆ ಆಹಾರ ವಿತರಣೆ ಮಾಡಿದ್ದಾಗಿ ಹೀಗೆ ಸುಮಾರು ನಾಲ್ಕು ಆರ್ಡರ್‌ಗಳನ್ನು ಡೆಲಿವರಿ ಮಾಡಿದ್ದಾಗಿ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹೊಸ ವರ್ಷದ ಮುನ್ನಾದಿನದಂದು ಭಾರಿ ಬೇಡಿಕೆಗಳನ್ನು ಪಡೆದುಕೊಂಡಿದ್ದವು ಎಂದು ವರದಿಗಳು ಹೇಳಿವೆ.

ಇನ್ನೂ ಜೊಮ್ಯಾಟೋ ಸಹ ಈ ದಿನ ಸಾಕಷ್ಟು ಲಾಭದಾಯಕವಾಗಿ ಸಾಗಿದೆ. ಇಯರ್‌ ಎಂಡ್‌ ದಿನ ಕಂಪನಿಯು ಸ್ವೀಕರಿಸಿದ ಆರ್ಡರ್‌ಗಳ ಮೊತ್ತವು ಮೊದಲ ಮೂರು ವರ್ಷಗಳಲ್ಲಿ ಕಂಪನಿಯು ಪಡೆದ ಆರ್ಡರ್‌ಗಳ ಮೊತ್ತಕ್ಕೆ ಸಮನಾಗಿತ್ತು ಎಂಬ ಸಂಗತಿಯನ್ನು ಗೋಯಲ್‌ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಡಿಸೆಂಬರ್ 31, 2022 ರಂದು ಕಂಪನಿಯ ಆರ್ಡರ್‌ಗಳು ಹಿಂದಿನ ವರ್ಷಕ್ಕಿಂತ 45% ಹೆಚ್ಚಾಗಿದೆ. ಇದು ನಮ್ಮ ಮತ್ತೊಂದು ಮೈಲಿಗಲ್ಲು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *