ಪ್ರಧಾನಿ ಮೋದಿ ಭಾರತ್ ಶಕ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAF ತೇಜಸ್ ಏರ್ ಕ್ರಾಫ್ಟ್ ಪತನ – ಪವಾಡಸದೃಶ ರೀತಿಯಲ್ಲಿ ಬದುಕುಳಿದ ಪೈಲೆಟ್

ಪ್ರಧಾನಿ ಮೋದಿ ಭಾರತ್ ಶಕ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAF ತೇಜಸ್ ಏರ್ ಕ್ರಾಫ್ಟ್ ಪತನ – ಪವಾಡಸದೃಶ ರೀತಿಯಲ್ಲಿ ಬದುಕುಳಿದ ಪೈಲೆಟ್

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಭಾರತದ ರಕ್ಷಣಾ ಪರಾಕ್ರಮ ಪ್ರದರ್ಶನ ಭಾರತ್ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ರಕ್ಷಣಾ ಕ್ಷೇತ್ರದ ಶಸ್ತ್ರ ಸಾಮರ್ಥ್ಯ ವೀಕ್ಷಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ತೆರಳಿದ ಭಾರತದ ಮೊದಲ IAF ತೇಜಸ್ ಫೈಟರ್ ಏರ್‌ಕ್ರಾಫ್ಟ್ ಪತನಗೊಂಡಿದೆ.

ರಕ್ಷಣಾ ಕ್ಷೇತ್ರದ  ಶಸ್ತ್ರಾಸ್ತ್ರ , ಫೈರಿಂಗ್ ರೇಜ್ ಪ್ರದರ್ಶನ ಹಾಗೂ ಸಮರಾಭ್ಯಾಸ ಪರಾಕ್ರಮಗಳ ಕಾರ್ಯಕ್ರಮಕ್ಕೆ ಭಾರತದ ಮೊದಲ ಇಂಡಿಜೀನಿಯಸ್ ಏರ್‌ಕ್ರಾಫ್ಟ್ ತೇಜಸ್ ಮಾರ್ಗಮಧ್ಯ ಪತನಗೊಂಡಿದೆ. ಏರ್‌ಕ್ರಾಫ್ಟ್ ಪತನಗೊಳ್ಳುತ್ತಿದ್ದಂತೆ ಪೈಲೆಟ್ ಸುರಕ್ಷಿತವಾಗಿ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಜೈಸಲ್ಮೇರ್ ಬಳಿ ತೇಜಸ್ ಹೆಲಿಕಾಪ್ಟರ್ ಪತನಗೊಂಡಿದ್ದು, 2001ರಲ್ಲಿ ಬೆಂಗಳೂರಿನ ಹೆಚ್ಎಎಲ್ ಕೇಂದ್ರ ಈ ಫೈಟರ್ ಏರ್‌ಕ್ರಾಫ್ಟ್ ಅಭಿವೃದ್ಧಿಪಡಿಸಿತ್ತು. ಕಳೆದ 23 ವರ್ಷಗಳಲ್ಲಿ ತೇಜಸ್ ಪತನವಾದ ಮೊದಲ ಘಟನೆ ಇದಾಗಿದೆ.  

ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ  IAF ತೇಜಸ್ ಭಾರತದ ಮೊದಲ ಇಂಡಿಜಿನಿಯಸ್ ಏರ್‌ಕ್ರಾಫ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ಏರ್‌ಕ್ರಾಫ್ಟ್ ಪತನಗೊಂಡಿದೆ.

IAF ತೇಜಸ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಇದು ಸಿಂಗಲ್ ಸೀಟರ್ ಫೈಟರ್ ಏರ್‌ಕ್ರಾಫ್ಟ್ ಆಗಿದೆ. ಈ ವಿಭಾಗದಲ್ಲಿ ಟ್ವಿನ್ ಸೀಟರ್(ತರಬೇತಿ)ವೇರಿಯೆಂಟ್ ಕೂಡ ಭಾರತೀಯ ವಾಯುಸೇನೆ ನಿರ್ವಹಣೆ ಮಾಡುತ್ತಿದೆ. ಭಾರತೀಯ ನೌಕಾಸೇನೆ ಟ್ವಿನ್ ಸೀಟರ್ ಫೈಟರ್ ಏರ್‌ಕ್ರಾಪ್ಟ್ ಬಳಕೆ ಮಾಡುತ್ತಿದೆ. 

ಲಘು ಯುದ್ಧ ವಿಮಾನ ತೇಜಸ್ 4.5 ಜನರೇಶನ್ ವಿಮಾನವಾಗಿದೆ. ಭೂ ಕಾರ್ಯಾಚರಣೆಗೆ ಪ್ರಮುಖವಾಗಿ ತೇಜಸ್ ಏರ್‌ಕ್ರಾಫ್ಟ್ ಬಳಸಲಾಗುತ್ತದೆ. ಆಕ್ರಮಣಕಾರಿ ವಾಯು ಬೆಂಬಲದ ಜೊತೆ ಭೂ ಕಾರ್ಯಾಚರಣೆಯಲ್ಲಿ ಈ ಏರ್‌ಕ್ರಾಫ್ಟ್ ಯಶಸ್ವಿಯಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *