ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ..!! – ಪ್ರಧಾನಿ ಮೋದಿಯಿಂದಲೇ ಲೋಕಾರ್ಪಣೆಗೆ ಸಿದ್ಧತೆ

ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ..!! – ಪ್ರಧಾನಿ ಮೋದಿಯಿಂದಲೇ ಲೋಕಾರ್ಪಣೆಗೆ ಸಿದ್ಧತೆ

ನ್ಯೂಸ್‌ ಆ್ಯರೋ : ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮುಂಬರುವ ವರ್ಷದೊಳಗೆ ಲೋಕಾರ್ಪಣೆಗೆ ಸಿದ್ಧವಾಗಲಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಅಕ್ಷರಧಾಮ ಉದ್ಘಾಟನೆಯಾದ ಬೆನ್ನಲ್ಲೇ, ಇನ್ನೊಂದು ಭವ್ಯ ಹಿಂದು ದೇವಾಲಯ ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿದೆ. ಈ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಅಬುಧಾಬಿಯಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಲು ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರು ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಅವರು, ದೇವಾಲಯದ ಕೆಲಸ ವೇಗವಾಗಿ ಮುಗಿಯುತ್ತಿದೆ. 2024 ರ ಫೆಬ್ರವರಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 55,000 ಚದರ ಮೀಟರ್ ವಿಸ್ತೀರ್ಣದಲ್ಲಿ ದೇವಾಲಯ ನಿರ್ಮಿಸಲಾಗುತ್ತಿದೆ. ಇದು ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಗುರುತಾಗಲಿದೆ ಎಂದರು.

ದೇವಾಲಯದ ವಿಶೇಷತೆ:

27 ಎಕರೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿಯ ಕಾಲ್ಪನಿಕ ಸಂಗಮದಲ್ಲಿ ಇದು ಸಿದ್ಧವಾಗುತ್ತಿದೆ. ಮೂರು ನದಿಗಳ ನೀರನ್ನು ಇಲ್ಲಿ ಬಳಸಲಾಗಿದೆ. ಭಾರತದ ದೇವಾಲಯಗಳಷ್ಟೇ ಭವ್ಯತೆಯನ್ನು ಇದು ಹೊಂದಿರಲಿದೆ ಎಂದರು.

ದೇವಾಲಯಕ್ಕೆ ಮೋದಿಯಿಂದ ಶಂಕುಸ್ಥಾಪನೆ:

2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಯುಎಇಯಲ್ಲಿ ನೆಲೆಸಿರುವ 35 ಲಕ್ಷ ಭಾರತೀಯರ ಆಧ್ಯಾತ್ಮಿಕ ಕ್ಷೇತ್ರವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯುಎಇ ಪ್ರವಾಸದ ವೇಳೆ ಸ್ವಾಮಿನಾರಾಯಣ ಮಂದಿರಕ್ಕೂ ಪ್ರಧಾನಿ ಅಡಿಪಾಯ ಹಾಕಿದ್ದರು.

ಅಕ್ಷರಧಾಮ ಮಹಾಮಂದಿರ ಉದ್ಘಾಟನೆ:

ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಶ್ವದ ಅತ್ಯಂತ ದೊಡ್ಡ ಆಧುನಿಕ ಹಿಂದು ದೇಗುಲವಾದ ಅಕ್ಷರಧಾಮವನ್ನು ಅಕ್ಟೋಬರ್​ 8 ರಂದು ಉದ್ಘಾಟನೆ ಮಾಡಲಾಗಿದೆ.

Related post

ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು; ರೌಡಿ ಶೀಟರ್ ಕಾಲಿಗೆ ಗುಂಡು ಹೊಡೆದ ಖಾಕಿ..!

ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು; ರೌಡಿ ಶೀಟರ್ ಕಾಲಿಗೆ…

ನ್ಯೂಸ್ ಆರೋ: ಶಿವಮೊಗ್ಗದಲ್ಲಿ ಮುಂಜಾನೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಕೊಲೆ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ತಾಲೂಕಿನ ಬೀರನಕೆರೆ ಗ್ರಾಮದ ಸಮೀಪ ನಡೆದಿದೆ. ಕೊಲೆ…
ಕಿರುತೆರೆ ನಟಿ ಅಗ್ನಿಸಾಕ್ಷಿ ‘ವೈಷ್ಣವಿ ಗೌಡ’ ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಕಿರುತೆರೆ ನಟಿ ಅಗ್ನಿಸಾಕ್ಷಿ ‘ವೈಷ್ಣವಿ ಗೌಡ’ ಗೆ ದಂಡ ವಿಧಿಸಿದ ಟ್ರಾಫಿಕ್…

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರಾ ಗುಳಿ ಕೆನ್ನೆ ಬೆಡಗಿ..! ನ್ಯೂಸ್ ಆರೋ: ಸಂಚಾರ ನಿಯಮವನ್ನು ಪಾಲಿಸದೇ ಇದ್ದುದ್ದಕ್ಕೆ  ಬೆಂಗಳೂರು ಸಂಚಾರಿ  ಪೊಲೀಸರು ಕನ್ನಡದ ಕಿರುತೆರೆ ನಟಿಯೊಬ್ಬರಿಗೆ ಶಾಕ್‌ ಕೊಟ್ಟಿದ್ದಾರೆ.…
ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

Leave a Reply

Your email address will not be published. Required fields are marked *