2018ರ ಸೇನಾ ಶಿಬಿರದ ದಾಳಿಯ ಮಾಸ್ಟರ್ ಮೈಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆ – ಶಿರಚ್ಛೇದನಗೈದ ಸ್ಥಿತಿಯಲ್ಲಿ POKಯಲ್ಲಿ ಪತ್ತೆಯಾಯ್ತು ಮೃತದೇಹ..!!

2018ರ ಸೇನಾ ಶಿಬಿರದ ದಾಳಿಯ ಮಾಸ್ಟರ್ ಮೈಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆ – ಶಿರಚ್ಛೇದನಗೈದ ಸ್ಥಿತಿಯಲ್ಲಿ POKಯಲ್ಲಿ ಪತ್ತೆಯಾಯ್ತು ಮೃತದೇಹ..!!

ನ್ಯೂಸ್ ಆ್ಯರೋ : ಲಷ್ಕರ್ ಭಯೋತ್ಪಾದಕ ಖ್ವಾಜಾ ಶಾಹಿದ್ ಶವ ಕಳೆದ ಭಾನುವಾರ ತಡರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದೆ.

2018ರಲ್ಲಿ ಜಮ್ಮುವಿನ ಸೇನಾ ಶಿಬಿರದ ಮೇಲೆ ದಾಳಿಗೆ ಕಾರಣವಾಗಿದ್ದ ಮಾಸ್ಟರ್ ಮೈಂಡ್ ಖ್ವಾಜಾ ಶಾಹಿದ್ ಶವದ ಶಿರಚ್ಛೇದ ಮಾಡಲಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಆತನ ಅಪಹರಣ ನಡೆಸಲಾಗಿತ್ತು ಎನ್ನಲಾಗಿದೆ.

ಜಮ್ಮುವಿನ ಸುಂಜುವನ್ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಯೋಜನೆಯನ್ನೂ ಶಾಹಿದ್ ರೂಪಿಸಿದ್ದ. ಈ ದಾಳಿಯಲ್ಲಿ ಆರು ಜವಾನರು, ಒಬ್ಬ ಸೇನಾಧಿಕಾರಿ, ಓರ್ವ ನಾಗರಿಕ ಮೃತಪಟ್ಟಿದ್ದರು.

ಅಕ್ಟೋಬರ್ ನಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ವಿಶ್ವಾಸಾರ್ಹ ಬುಡಕಟ್ಟು ನಾಯಕ ದಾವುದ್ ಮಲಿಕ್ ನನ್ನು ಉತ್ತರ ವಜೀರಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದರು. ಬಳಿಕ ಕರಾಚಿಯಯಲ್ಲಿ ಹಫೀಜ್ ಸಯೀದ್ ನ ನಿಕಟವರ್ತಿ ಮುಫ್ತಿ ಖೈಸರ್ ಫಾರೂಕ್ ನನ್ನು ಕೊಲೆ ಮಾಡಲಾಗಿತ್ತು. ಬಳಿಕ ಈಗ ಈ ಘಟನೆ ನಡೆದಿದೆ.

ಡೇರಾ ಇಸ್ಮಾಯಿಲ್ ಖಾನ್ ಮೂಲದ ಫಾರೂಕ್, ಜಾಗತಿಕವಾಗಿ ನಿಯೋಜಿತ ಭಯೋತ್ಪಾದಕ ಹಫೀಜ್ ಸಯೀದ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು.

ಐಸಿ-814 ವಿಮಾನದ ಅಪಹರಣಕಾರ, ಜೈಶ್-ಎ-ಮೊಹಮ್ಮ ದ್ (ಜೆಎಂ) ಕಾರ್ಯ ಕರ್ತ ಮಿಸ್ತ್ರಿ ಜಹೂರ್ ಇಬ್ರಾಹಿಂ ಅಲಿಯಾಸ್ ಜಾಹಿದ್ ಅಖೂಂಡ್ ಹತ್ಯೆ ಯೊಂದಿಗೆ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಯೋತ್ಪಾದಕರು ಮತ್ತು ಕಾರ್ಯಕರ್ತರ ನಿರಂತರ ಹತ್ಯೆಗಳ ಸರಣಿ ಆರಂಭವಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಸದಸ್ಯ ಜಾಹಿದ್ ಅಖೂಂಡ್ ನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *