ಸಿಮ್ ನ ಒಂದು ಮೂಲೆ ಕಟ್ ಮಾಡಿರುತ್ತಾರೆ ಯಾಕೆ? – ನಿಮಗೆ ಗೊತ್ತಿಲ್ಲದ ಅಸಲಿ ಕಾರಣ ಇಲ್ಲಿದೆ ನೋಡಿ..

ಸಿಮ್ ನ ಒಂದು ಮೂಲೆ ಕಟ್ ಮಾಡಿರುತ್ತಾರೆ ಯಾಕೆ? – ನಿಮಗೆ ಗೊತ್ತಿಲ್ಲದ ಅಸಲಿ ಕಾರಣ ಇಲ್ಲಿದೆ ನೋಡಿ..

ನ್ಯೂಸ್ ಆ್ಯರೋ‌ : ಇದು ಡಿಜಿಟಲ್ ಯುಗ, ಹಣ ಜಮಾ ಅಥವಾ ವರ್ಗಾವಣೆ, ಯಾವುದೇ ಬಿಲ್ ಪೇ ಎಲ್ಲವೂ ಮೊಬೈಲ್ ನಲ್ಲೇ ಮುಗಿದು ಹೋಗುತ್ತದೆ. ಆದರೆ ಅದಕ್ಕೊಂದು ಸಿಮ್ ಇಲ್ಲದೆ ಫೋನ್ ಉಪಯೋಗಕ್ಕೆ ಬರೋದಿಲ್ಲ. ಆದರೆ ಆ ಸಿಮ್ ಕಾರ್ಡಿನ ಒಂದು ಮೂಲೆಯಲ್ಲಿ ಕತ್ತರಿಸಿರುತ್ತದೆ ಅನ್ನೋದು ನೀವೂ ನೋಡಿಯೇ ಇರುತ್ತೀರಾ. ಈ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ ಏಕೆ ಕತ್ತರಿಸುತ್ತಾರೆ ಎಂದು? ಇದರ ಹಿಂದಿನ ಕಾರಣ ಏನು ಗೊತ್ತಾ?

ಮೊದಲು ಸಿಮ್ ಕಾರ್ಡ್‌ಗಳನ್ನು ತಯಾರಿಸಿದಾಗ ಈಗಿನ ಸಿಮ್ ಕಾರ್ಡ್‌ಗಳಂತೆ ಮೂಲೆಯಲ್ಲಿ ಯಾವುದೇ ಕಟ್ ಇರಲಿಲ್ಲ. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್​ ಒಳಗೆ ನಿರ್ದಿಷ್ಟ ಸ್ಲಾಟ್​ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್​ ಸ್ಲಾಟ್​ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು.

ಹೀಗೆ ಸಿಮ್ ಅಳವಡಿಸಲು ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಟೆಲಿಕಾಂ ಕಂಪನಿಗಳು ಒಂದು ಮಹತ್ವದ ನಿರ್ಧಾರ ಕೈಗೊಂಡವು. ಅದಕ್ಕಾಗಿಯೇ ಸಿಮ್ ಕಾರ್ಡ್ ಅನ್ನು ಒಂದೇ ಬಾರಿಗೆ ಸರಿಯಾಗಿ ಒಳಗೆ ಕೂರಿಸಲು ಅದರ ಮೂಲೆಯನ್ನು ಕತ್ತರಿಸುವುದಕ್ಕೆ ಅನುಮತಿಸಿದರು.

ಸಿಮ್ ಕಾರ್ಡಿನಲ್ಲಿ ಕಟ್ ಮಾರ್ಕ್ ಇಲ್ಲದಿದ್ದರೆ ಮೊಬೈಲ್ ಫೋನ್‌ನಲ್ಲಿ ಅದನ್ನು ಸರಿಯಾಗಿ ಸೇರಿಸಲು ಕಷ್ಟವಾಗುತ್ತದೆ. ಮೊಬೈಲ್ ಫೋನ್‌ನಲ್ಲಿ ಸಿಮ್ ಕಾರ್ಡ್‌ನ ತಪ್ಪು ಭಾಗವನ್ನು ಹಾಕುತ್ತೇವೆ. ಮೊಬೈಲ್ ಫೋನ್‌ಗಳಲ್ಲಿ ಬಳಸುವ ಸಿಮ್ ಕಾರ್ಡ್‌ನ ಅಗಲ 25 ಎಂಎಂ, ಉದ್ದ 15 ಎಂಎಂ ಮತ್ತು ದಪ್ಪ 0.76 ಎಂಎಂ ಇರುತ್ತದೆ.

ಮೊಬೈಲ್ ಟೆಲಿಫೋನಿ ಸಾಧನಗಳಲ್ಲಿ (ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಂತಹ) ಚಂದಾದಾರರನ್ನು ಗುರುತಿಸಲು ಮತ್ತು ದೃಢೀಕರಿಸಲು ಈ ಸಂಖ್ಯೆ ಮತ್ತು ಕೀಲಿಯನ್ನು ಬಳಸಲಾಗುತ್ತದೆ. ಹೀಗೆ ಸಿಮ್ ಕಟ್ ಆಗಿರೋದಕ್ಕೆ ಕಾರಣ ಕೊನೆಗೂ ತಿಳಿಯಿತಲ್ಲ‌.‌‌‌‌‌..!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *