ಕೀಟನಾಶಕ ಬಾಟಲ್ ಮೇಲಿರುವ ವಿವಿಧ ಬಣ್ಣಗಳ ಅರ್ಥವೇನು? – ಶೇ.90 ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ‌‌..!

ಕೀಟನಾಶಕ ಬಾಟಲ್ ಮೇಲಿರುವ ವಿವಿಧ ಬಣ್ಣಗಳ ಅರ್ಥವೇನು? – ಶೇ.90 ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ‌‌..!

ನ್ಯೂಸ್ ಆ್ಯರೋ : ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ ರೈತರು ಕೀಟನಾಶಕಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಬಳಸುವಂತಹ ಕೀಟನಾಶಕಗಳ ಬಾಟಲ್ ಒಂದೊಂದು ಬಣ್ಣದಲ್ಲಿರುತ್ತದೆ. ಈ ಬಣ್ಣದ ಲೇಬಲ್ ಯಾವ ಸಂದೇಶವನ್ನು ನೀಡುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಪೀಡೆನಾಶಕಗಳ ಅಸಮರ್ಪಕ, ಅವೈಜ್ಞಾನಿಕ ಹಾಗೂ ಯಥೇಚ್ಛ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಲವು. ಇಂಥಹ ಪೀಡೆನಾಶಕಗಳ ವಿಷದ ಪ್ರಮಾಣ ತಿಳಿಸಲು ಬಣ್ಣ ಬಣ್ಣದ ಲೇಬಲ್ ಗಳನ್ನು ಕೀಟನಾಶಕಗಳ ಬಾಟಲ್ ಗಳ ಮೇಲೆ ಮುದ್ರಿಸಲಾಗಿರುತ್ತದೆ.

ಹೀಗೆ ಕೀಟನಾಶಕ ಬಾಟಲ್ ಗಳ ಮೇಲೆ ಮುದ್ರಿಸಿರುವಂತ ಬಣ್ಣಗಳು ಆಯಾ ಕೀಟನಾಶಕಗಳ ಸಂಭಾವ್ಯ ಅಪಾಯ ಸೂಚಕದ ಸಂಕೇತವಾಗಿವೆ. ರೈತರು ಇದನ್ನು ನೋಡಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂಬುದು ಇದರ ಸೂಚನೆ.

ಕೆಂಪು ಲೇಬಲ್:

ಈ ಬಣ್ಣವನ್ನು ನೀವು ಕೀಟನಾಶಕ ಬಾಟಲ್ ಮೇಲೆ ಕಂಡ್ರೇ, ಆ ರಾಸಾಯನಿಕಗಳು ಅತ್ಯಂತ ವಿಷಕಾರಿಯಾಗಿದ್ದು, ಗರಿಷ್ಠ ಎಚ್ಚರಿಕೆಯಿಂದ ಬಳಸಬೇಕೆಂಬುದು ರೈತರಿಗೆ ಸೂಚಿಸಲಾಗಿದೆ.

ಹಳದಿ ಲೇಬಲ್:

ಕೀಟನಾಶಕ ವಿಷತ್ವ ಲೇಬಲ್ ಗಳ ಪಟ್ಟಿಯಲ್ಲಿ ಇದು ಎರಡನೇಯದು. ಇದು ಕೂಡ ಹೆಚ್ಚು ಅಪಾಯ ಸೂಚಕವಾದಂತ ರಾಸಾಯನಕವಾಗಿದೆ.

ನೀಲಿ ಲೇಬಲ್:

ಕೀಟನಾಶಕ ವಿಷತ್ವದ ಪ್ರಮಾಣದಲ್ಲಿ ಇದು 3ನೇಯದು. ಇದು ಸಾಧಾರಣ ವಿಷ ಪ್ರಮಾಣ ಸೂಚಿಸುತ್ತದೆ.

ಹಸಿರು ಲೇಬಲ್ :

ಈ ಬಣ್ಣದ ಲೇಬಲ್ ಇರುವ ಬಾಟಲಿಯ ರಾಸಾಯನಿಕಗಳು ಕಡಿಮೆಯಿಂದ ಮಧ್ಯಮ ವಿಷತ್ವ ಹೊಂದಿರುತ್ತವೆ

ಹೀಗೇ ವಿವಿಧ ಬಣ್ಣದ ಲೇಬಲ್‌ ಅಪಾಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸೂಚಿಸುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *