ಕೀಟನಾಶಕ ಬಾಟಲ್ ಮೇಲಿರುವ ವಿವಿಧ ಬಣ್ಣಗಳ ಅರ್ಥವೇನು? – ಶೇ.90 ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ‌‌..!

ಕೀಟನಾಶಕ ಬಾಟಲ್ ಮೇಲಿರುವ ವಿವಿಧ ಬಣ್ಣಗಳ ಅರ್ಥವೇನು? – ಶೇ.90 ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ‌‌..!

ನ್ಯೂಸ್ ಆ್ಯರೋ : ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ ರೈತರು ಕೀಟನಾಶಕಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಬಳಸುವಂತಹ ಕೀಟನಾಶಕಗಳ ಬಾಟಲ್ ಒಂದೊಂದು ಬಣ್ಣದಲ್ಲಿರುತ್ತದೆ. ಈ ಬಣ್ಣದ ಲೇಬಲ್ ಯಾವ ಸಂದೇಶವನ್ನು ನೀಡುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಪೀಡೆನಾಶಕಗಳ ಅಸಮರ್ಪಕ, ಅವೈಜ್ಞಾನಿಕ ಹಾಗೂ ಯಥೇಚ್ಛ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಲವು. ಇಂಥಹ ಪೀಡೆನಾಶಕಗಳ ವಿಷದ ಪ್ರಮಾಣ ತಿಳಿಸಲು ಬಣ್ಣ ಬಣ್ಣದ ಲೇಬಲ್ ಗಳನ್ನು ಕೀಟನಾಶಕಗಳ ಬಾಟಲ್ ಗಳ ಮೇಲೆ ಮುದ್ರಿಸಲಾಗಿರುತ್ತದೆ.

ಹೀಗೆ ಕೀಟನಾಶಕ ಬಾಟಲ್ ಗಳ ಮೇಲೆ ಮುದ್ರಿಸಿರುವಂತ ಬಣ್ಣಗಳು ಆಯಾ ಕೀಟನಾಶಕಗಳ ಸಂಭಾವ್ಯ ಅಪಾಯ ಸೂಚಕದ ಸಂಕೇತವಾಗಿವೆ. ರೈತರು ಇದನ್ನು ನೋಡಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂಬುದು ಇದರ ಸೂಚನೆ.

ಕೆಂಪು ಲೇಬಲ್:

ಈ ಬಣ್ಣವನ್ನು ನೀವು ಕೀಟನಾಶಕ ಬಾಟಲ್ ಮೇಲೆ ಕಂಡ್ರೇ, ಆ ರಾಸಾಯನಿಕಗಳು ಅತ್ಯಂತ ವಿಷಕಾರಿಯಾಗಿದ್ದು, ಗರಿಷ್ಠ ಎಚ್ಚರಿಕೆಯಿಂದ ಬಳಸಬೇಕೆಂಬುದು ರೈತರಿಗೆ ಸೂಚಿಸಲಾಗಿದೆ.

ಹಳದಿ ಲೇಬಲ್:

ಕೀಟನಾಶಕ ವಿಷತ್ವ ಲೇಬಲ್ ಗಳ ಪಟ್ಟಿಯಲ್ಲಿ ಇದು ಎರಡನೇಯದು. ಇದು ಕೂಡ ಹೆಚ್ಚು ಅಪಾಯ ಸೂಚಕವಾದಂತ ರಾಸಾಯನಕವಾಗಿದೆ.

ನೀಲಿ ಲೇಬಲ್:

ಕೀಟನಾಶಕ ವಿಷತ್ವದ ಪ್ರಮಾಣದಲ್ಲಿ ಇದು 3ನೇಯದು. ಇದು ಸಾಧಾರಣ ವಿಷ ಪ್ರಮಾಣ ಸೂಚಿಸುತ್ತದೆ.

ಹಸಿರು ಲೇಬಲ್ :

ಈ ಬಣ್ಣದ ಲೇಬಲ್ ಇರುವ ಬಾಟಲಿಯ ರಾಸಾಯನಿಕಗಳು ಕಡಿಮೆಯಿಂದ ಮಧ್ಯಮ ವಿಷತ್ವ ಹೊಂದಿರುತ್ತವೆ

ಹೀಗೇ ವಿವಿಧ ಬಣ್ಣದ ಲೇಬಲ್‌ ಅಪಾಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸೂಚಿಸುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *