ಬಾಯಿಯಲ್ಲಿ ಅಥವಾ ನಾಲಗೆಯಲ್ಲಿ ಬಿಳಿ ಲೇಪನ ಸಂಗ್ರಹ ಆಗ್ತಿದ್ಯಾ? – ಅದಕ್ಕೆ ಕಾರಣ ಮತ್ತು ಪರಿಹಾರ ಇಲ್ಲಿದೆ..

ಬಾಯಿಯಲ್ಲಿ ಅಥವಾ ನಾಲಗೆಯಲ್ಲಿ ಬಿಳಿ ಲೇಪನ ಸಂಗ್ರಹ ಆಗ್ತಿದ್ಯಾ? – ಅದಕ್ಕೆ ಕಾರಣ ಮತ್ತು ಪರಿಹಾರ ಇಲ್ಲಿದೆ..

ನ್ಯೂಸ್ ಆ್ಯರೋ‌ : ಕೆಲವೊಮ್ಮೆ ನಮ್ಮ ನಾಲಗೆಯಲ್ಲಿ ಬಿಳಿ ಲೇಪನವೊಂದು ಸಂಗ್ರಹಗೊಳ್ಳುತ್ತದೆ. ಇದು ಚಿಕ್ಕ ಸಮಸ್ಯೆ ಎಂದುಕೊಂಡು ನಿರ್ಲಕ್ಷ್ಯ ತೋರಿದರೆ ಮುಂದೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಇದರ ನಿವಾರಣೆಯ ಬಗ್ಗೆ ಮಾಹಿತಿ ಇಲ್ಲಿದೆ.

ಬ್ಯಾಕ್ಟೀರಿಯಾ

ಕೆಟ್ಟ ಆಹಾರ ಪದ್ದತಿಯೇ ಈ ರೀತಿಯ ಸಮಸ್ಯೆಗೆ ಮುಖ್ಯ ಕಾರಣ. ಇದು ಬ್ಯಾಕ್ಟೀರಿಯಾ ಆಗಿದ್ದು ಬಾಯಿಯ ದುರ್ವಾಸನೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಕಾರಣವೇನು?

ಬಾಯಿಯನ್ನು ಸರಿಯಾಗಿ ಶುಚಿಗೊಳಿಸದೇ ಇರುವುದು, ಬಾಯಿಯಲ್ಲಿನ ಶುಷ್ಕತೆ, ಸಾಕಷ್ಟು ನೀರು ಕುಡಿಯದೇ ಇರುವುದು, ಧೂಮಪಾನ, ಮದ್ಯಪಾನ, ಮೃದುವಾದ ಮತ್ತು ಹಿಸುಕಿದ ಆಹಾರ ಸೇವನೆ, ಜ್ವರ ಮುಂತಾದವುಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಇದು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ಎಚ್ಚರಿಸುತ್ತಾರೆ ಆರೋಗ್ಯ ತಜ್ಞರು. ಶೀತ ಹುಣ್ಣುಗಳು, ಲ್ಯುಕೋಪ್ಲಾಕಿಯಾ, ಬಾಯಿಯ ಕ್ಯಾನ್ಸರ್, ನಾಲಗೆ ಕ್ಯಾನ್ಸರ್ ಮುಂತಾದವುಗಳ ಸೂಚಕವೂ ಆಗಿರುವ ಸಾಧ್ಯತೆ ಇದೆ.

ಪರಿಹಾರ

ನಾಲಗೆ ಸ್ವಚ್ಛಗೊಳಿಸಿ

ಬೆಳಗ್ಗೆ ಹಲ್ಲುಜ್ಜುವಾಗ ನಾಲಗೆಯನ್ನೂ ಸ್ವಚ್ಛಗೊಳಿಸಬೇಕು. ಇದಕ್ಕೆ ಟಂಗ್ ಕ್ಲೀನರ್ ಬಳಸಬಹುದು ಅಥವಾ ಬ್ರೆಷ್ ನಿಂದಲೂ ಕ್ಲೀನ್ ಮಾಡಿಕೊಳ್ಳಬಹುದು.

ತ್ರಿಫಲ ನೀರು

ನಾಲಗೆಯ ಬಿಳಿ ಪದರ ಹೋಗಲಾಡಿಸಲು ಆಯುರ್ವೇದದ ಪರಿಣಾಮಕಾರಿ ಔಷಧಗಳಲ್ಲಿ ತ್ರಿಫಲ ನೀರು ಕೂಡ ಒಂದು. ಇದು ನಂಜು ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಬಾಯಿಯನ್ನು ಸ್ವಚ್ಛವಾಗಿಡುತ್ತದೆ.

ಬಿಸಿ ನೀರು ಸೇವನೆ

ಆಗಾಗ, ಸಾಕಷ್ಟು ಪ್ರಮಾಣದಲ್ಲಿ ಬಿಸಿ ನೀರು ಕುಡಿಯುತ್ತಿರಬೇಕು. ಇದು ಕರುಳಿನ ಆರೋಗ್ಯವನ್ನು ಕಾಪಾಡುವ ಜೊತೆಗೆ ತ್ಯಾಜ್ಯವನ್ನು ಶರೀರದಿಂದ ಹೊರ ಹಾಕಲು ನೆರವಾಗುತ್ತದೆ.

ಸೋಂಪು ಕಾಳು ಸೇವಿಸಿ

ಊಟದ ಬಳಿಕ ಸೋಂಪು ಕಾಳುಗಳನ್ನು ಸೇವಿಸಬೇಕು. ಸೋಂಪು ಕಾಳು ಆರೊಮ್ಯಾಟಿಕ್ ಎಣ್ಣೆಯ ಅಂಶವನ್ನು ಒಳಗೊಂಡಿದ್ದು, ಹಲ್ಲು, ನಾಲಗೆಯನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ.

ಸಿಹಿ ತಿಂಡಿಯ ಅತಿಯಾದ ಬಳಕೆ ಬೇಡ

ಬಾಯಿಯ ಆರೋಗ್ಯಕ್ಕೆ ಅತಿಯಾದ ಸಿಹಿ ತಿಂಡಿ ಸೇವನೆ ಮಾರಕ. ಅದರಲ್ಲೂ ರಾತ್ರಿ ಸಿಹಿ ಪಧಾರ್ಥ ಸೇವಿಸಲೇ ಬಾರದು. ಇದರಿಂದ ಬಾಯಿಯಲ್ಲೇ ಬ್ಯಾಕ್ಟಿರಿಯಾ ಉಳಿದುಕೊಳ್ಳುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *