ದಾಸವಾಳದ ರಸದಲ್ಲಿದೆ ಸ್ತನ ಕ್ಯಾನ್ಸರ್ ತಡೆಯುವ ಶಕ್ತಿ ; ತಿಳಿದುಕೊಳ್ಳಲೇ ಬೇಕಾದ ಮನೆ ಮದ್ದು

ದಾಸವಾಳದ ರಸದಲ್ಲಿದೆ ಸ್ತನ ಕ್ಯಾನ್ಸರ್ ತಡೆಯುವ ಶಕ್ತಿ ; ತಿಳಿದುಕೊಳ್ಳಲೇ ಬೇಕಾದ ಮನೆ ಮದ್ದು

ನ್ಯೂಸ್ ಆ್ಯರೋ : ಅತ್ಯಂತ ಅಪಾಯಕಾರಿ ಎನಿಸಿಕೊಂಡಿರುವ ಕ್ಯಾನ್ಸರ್ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಮನುಷ್ಯ ಸಂಕುಲವನ್ನು ಬಾಧಿಸುತ್ತಿದೆ. ಈ ಮಾರಣಾಂತಿಕ ಖಾಯಿಲೆ ದೇಹದ ಯಾವ ಭಾಗವನ್ನೂ ಕೂಡ ಆಕ್ರಮಿಸಿಕೊಳ್ಳಬಹುದು. ಇವುಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ವರದಿಯೊಂದರ ಪ್ರಕಾರ, ಕಳೆದ ವರ್ಷವೊಂದರಲ್ಲೇ 20ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣ ವರದಿಯಾಗಿದೆ. ಇಂತಹಾ ಮಾರಕ ಖಾಯಿಲೆಯನ್ನು ದಾಸವಾಳದ ರಸದಿಂದ ತಡೆಗಟ್ಟಬಹುದಾಗಿದೆ ಎಂಬುದು ವೈದ್ಯರುಗಳ ಅಭಿಪ್ರಾಯವಾಗಿದ್ದು, ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ದಾಸವಾಳ ಹೂವಿನ ರಸ ಕ್ಯಾನ್ಸರ್ ನಿವಾರಕ

ದಾಸವಾಳದ ಹೂವು ಸುಲಭವಾಗಿ ಎಲ್ಲರ ಕೈಗೂ ಸಿಗುವಂತಹದ್ದು. ಇದರ ಮೂಲಕ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ. ಇದರ ಬಳಕೆಯಿಂದ ಆರೋಗ್ಯದ‌ ಮೇಲೆ ಯಾವುದೇ ಅಡ್ಡ ಪರಿಣಾಮ ಬೀಳುವುದಿಲ್ಲ ಎಂಬುದು ವೈದ್ಯರ ಅಭಿಪ್ರಾಯವಾಗಿದ್ದು. ದಾಸವಾಳದ ಹೂವಿನ ರಸದ ನಿರಂತರ ಬಳಕೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ದಾಸವಾಳ ಹೂವಿನಲ್ಲಿದೆ ಕ್ಯಾನ್ಸರ್ ವಿರೋಧಿ ಅಂಶ

ದಾಸವಾಳದ ಹೂವಿನಲ್ಲಿ ಅನೇಕ ಔಷಧಿಯ ಗುಣಗಳಿದೆ‌. ಆಯುರ್ವೇದ ಔಷಧದಲ್ಲೂ ಇದನ್ನಯ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕ್ಯಾನ್ಸರನ್ನು ದಾಸವಾಳದಿಂದ ಸಂಪೂರ್ಣವಾಗಿ ಹೋಗಲಾಡಿಸಲಾಗದಿದ್ದರೂ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದನ್ನು ಸಂಯೋಜಿಸವುದರಿಂದ ಅಡ್ಡ ಪರಿಣಾಮಗಳನ್ನು ತಡೆಯಬಹುದು ಎಂದು ವೈದ್ಯರು ನಂಬುತ್ತಾರೆ.

ಕ್ಯಾನ್ಸರ್ ಕೋಶಗಳ ವಿರುದ್ಧ ಪರಿಣಾಮಕಾರಿ

ಸ್ತನ ಕ್ಯಾನ್ಸರ್ ಎಂಬು ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಂಡು ಬರುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ದಾಸವಾಳ ಹೂವಿನ ರಸದ ಪರಿಣಾಮವನ್ನು ಸಂಶೋಧಕರು ಅಧ್ಯಯನ‌ ನಡೆಸಿ, ದಾಸವಾಳದ ರಸವು ಧನಾತ್ಮಕ ಹಾಗೂ ಸ್ತನ‌ ಕ್ಯಾನ್ಸರ್‌ನ ಋಣಾತ್ಮಕ ಕೋಶಗಳ ವಿರುದ್ಧ ಹೋರಾಡಲು ಶಕ್ತವಾಗಿದೆ ಎಂದು ತಿಳಿಸಿದ್ದಾರೆ.

ದಾಸವಾಳದ ಹೂವಿನ ರಸ ಬಳಸುವುದು ಹೇಗೆ?

ದಾಸವಾಳದ ಹೂವಿನ ರಸ ಕ್ಯಾನ್ಸರ್ ತಡೆಯಲು ಪರಿಣಾಮಕಾರಿ ಎಂಬುದು ಈಗಾಗಲೇ ಖಾತ್ರಿಯಾಗಿದೆ. ದಾಸವಾಳದ ಹೂವುಗಳನ್ನು ಒಣಗಿಸಿ ಪುಡಿಮಾಡಿ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿದ ನಂತರ ಅದನ್ನು ಫಿಲ್ಟರ್ ಮಾಡಿ ಬಳಸಬಹುದಾಗಿದೆ. ಆದರೆ ಇಂತಹ ಮನೆ ಮದ್ದು ಬಳಸುವಾಗ ವೈದ್ಯರ ಮಾಹಿತಿ ಪಡಯುವುದು ಉತ್ತಮವಾಗಿರುತ್ತದೆ‌.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *