ರಸ್ತೆ ಬದಿ ಸಿಗುವ ಕಬ್ಬಿನ ಹಾಲು ಕುಡಿಯುತ್ತೀರಾ? – ಗಂಭೀರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬೋದು : ವಿವರ ಇಲ್ಲಿದೆ..

ರಸ್ತೆ ಬದಿ ಸಿಗುವ ಕಬ್ಬಿನ ಹಾಲು ಕುಡಿಯುತ್ತೀರಾ? – ಗಂಭೀರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬೋದು : ವಿವರ ಇಲ್ಲಿದೆ..

ನ್ಯೂಸ್‌ ಆ್ಯರೋ : ಸುಡುವ ಬಿಸಿಲ ಧಗೆಗೆ ಕಬ್ಬಿನ ಹಾಲನ್ನು ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಬಹುತೇಕರು ಟ್ರಾವೆಲ್ ಮಾಡುವಾಗ ದಾರಿ ಮಧ್ಯೆ ಅಲ್ಲಲ್ಲಿ ಕಾಣಸಿಗುವ ಜ್ಯೂಸ್‌ ಅನ್ನು ಕುಡಿದು ಹೊಟ್ಟೆ ತಣ್ಣಗೆ ಮಾಡುತ್ತಾರೆ. ಆದರೆ ದಾರಿ ಮಧ್ಯೆ ಸಿಗುವ ಕಬ್ಬಿನ ಹಾಲು ಕುಡೀಯೋದು ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆಗಳಿವೆ.

ಯಾಕೆಂದರೆ ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ವ್ಯಾಪಾರ ಮಾಡುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಕೊಡುತ್ತಾನೆ. ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಗ್ಲೌಸ್ ಕೂಡಾ ಹಾಕುವುದಿಲ್ಲ. ಜ್ಯೂಸ್ ತಯಾರಿಸಿದ ಕೈಯಲ್ಲೇ ಅದನ್ನು ಸೇವನೆ ಮಾಡಲು ಕೊಡುತ್ತಾರೆ. ಅವರಿಂದ ಹಣ ಪಡೆದ ನಂತರ, ಮತ್ತೆ ಕೈಯಲ್ಲೇ ಬೇರೆಯವರಿಗೆ ಜ್ಯೂಸ್ ತೆಗೆಯುತ್ತಾರೆ. ಈ ಎಲ್ಲ ಹಂತದಲ್ಲಿ ಕೈಯನ್ನು ಶುಚಿಯಾಗಿ ಇಟ್ಟುಕೊಳ್ಳದೆ ಇರುವುದರಿಂದ ರೋಗಗಳು ಹರಡುವ ಸಾಧ್ಯತೆಗಳಿವೆ.

ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಆಗಾಗ ಸ್ವಚ್ಛ ಮಾಡುವುದಿಲ್ಲ. ಮಾತ್ರವಲ್ಲದೆ ಕಬ್ಬಿನ ಜ್ಯೂಸ್‌ಗೆ ಬಳಸುವ ನಿಂಬೆಹಣ್ಣು, ಶುಂಠಿ ಅಥವಾ ಪುದೀನಾವನ್ನು ತೊಳೆಯದೆ ನೇರವಾಗಿ ಅದನ್ನು ಜ್ಯೂಸ್‌ ಮಾಡುವ ಯಂತ್ರದೊಳಗೆ ಹಾಕುತ್ತಾರೆ.

ಇನ್ನೂ ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು ಬರಬಹುದು. ಐಸ್ ಗುಣಮಟ್ಟವೂ ಆರೋಗ್ಯ ಕೆಡಲು ಕಾರಣವಾಗಬಹುದು. ಶೀತ, ಗಂಟಲು ನೋವು ಉಂಟಾಗಬಹುದು.

ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಮತ್ತು ಇತರ ತಜ್ಞರು ರಸ್ತೆಬದಿಯ ಕಬ್ಬು ಮತ್ತು ಇತರ ಜ್ಯೂಸ್‌ಗಳನ್ನು ಕುಡಿಯದಂತೆ ಎಚ್ಚರಿಕೆ ನೀಡುತ್ತಾರೆ. ಇಂಥಾ ಅಶುಚಿಯಾದ ಆಹಾರ ಮತ್ತು ಪಾನೀಯಗಳಿಂದ ಹೆಪಟೈಟಿಸ್ A, E ಮತ್ತು ಇತರ ಜಠರಗರುಳಿನ ತೊಂದರೆಗಳನ್ನು ಉಂಟಾಗಬಹುದು ಎಂದು ಹೇಳುತ್ತಾರೆ.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸಮೀರ್ ಪಾಟೀಲ್ ಮಾಹಿತಿ ನೀಡಿ, ಕಲುಷಿತ ನೀರು ಅಥವಾ ಮಂಜುಗಡ್ಡೆಯಿಂದ ತಯಾರಿಸಿದ ಕಬ್ಬು ಮತ್ತು ಹಣ್ಣಿನ ರಸಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣುಗಳನ್ನು ರಸವನ್ನು ಕುಡಿಯಬೇಕು ಅನಿಸುವುದು ಸಹಜ. ಆದರೆ ಅನೈರ್ಮಲ್ಯದಿಂದ ತಯಾರಾದ ಬೀದಿಬದಿಯ ಜ್ಯೂಸ್‌ಗಳನ್ನು ಸೇವಿಸುವುದು ಸೂಕ್ತವಲ್ಲ ಎಂದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *