ಬಿಗ್ ಬಾಸ್ ಸಾನ್ಯಾ ಅಯ್ಯರ್ ಗೆ ಪುತ್ತೂರು ಕಂಬಳದಲ್ಲಿ ಕಪಾಳಮೋಕ್ಷ – ಜುಟ್ಟು ಹಿಡಿದೆಳೆದವನಿಗೆ ಸಾರ್ವಜನಿಕರಿಂದ ಧರ್ಮದೇಟು..!!

ಬಿಗ್ ಬಾಸ್ ಸಾನ್ಯಾ ಅಯ್ಯರ್ ಗೆ ಪುತ್ತೂರು ಕಂಬಳದಲ್ಲಿ ಕಪಾಳಮೋಕ್ಷ – ಜುಟ್ಟು ಹಿಡಿದೆಳೆದವನಿಗೆ ಸಾರ್ವಜನಿಕರಿಂದ ಧರ್ಮದೇಟು..!!

ನ್ಯೂಸ್ ಆ್ಯರೋ : ಕನ್ನಡದ ಖಾಸಗಿ ಚಾನೆಲ್ ವೊಂದರ ಪುಟ್ಟ ಗೌರಿ ಧಾರಾವಾಹಿ ಮೂಲಕ ನಟನೆಗಿಳಿದ ಸಾನ್ಯಾ ಅಯ್ಯರ್ ಅನಂತರ ಡ್ಯಾನ್ಸಿಂಗ್ ಸ್ಟಾರ್ ಮೂಲಕ ಮನೆಮಾತಾದರು. ಅನಂತರ ವೈಕ್ತಿಕ ಜೀವನದ ಕೆಲವು ಗಲಾಟೆಗಳಿಂದ ಸುದ್ದಿಯಿದ್ದರು. ಇತ್ತೀಚೆಗೆ ಬಿಗ್‌ಬಾಸ್ 9 ನಲ್ಲಿ ಭಾಗವಹಿಸಿ, ರೂಪೇಶ್ ಶೆಟ್ಟಿಯೊಂದಿಗೆ ಪ್ರೀತಿಯಲ್ಲಿದ್ದಾರೆ ಎನಿಸಿಕೊಂಡಿದ್ದರು. ಸದ್ಯ, ಇದೀಗ ಮತ್ತೆ ಪುತ್ತೂರಿನಲ್ಲಿ ನಡೆದ 30 ವರ್ಷದ ಕಂಬಳದಲ್ಲಿ ನಡದ ಗಲಾಟೆಯಿಂದ ಸುದ್ದಿಯಲ್ಲಿದ್ದಾರೆ.

ಹೌದು, ಪುತ್ತೂರಿನಲ್ಲಿ ಇತ್ತೀಚೆಗಷ್ಟೇ 30ನೇ ವರ್ಷದ ಕಂಬಳ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಾನ್ಯಾ ಅಯ್ಯರ್, ಅವರ ತಾಯಿ ದೀಪಾ ಹಾಗೂ ಬೆಂಗಳೂರಿನ ಸ್ನೇಹಿತರ ಜೊತೆ ಆಗಮಿಸಿದ್ದರು. ಕಂಬಳ ವೀಕ್ಷಿಸುತ್ತಿದ್ದ ವೇಳೆ ಸೆಲ್ಪಿಗಾಗಿ ವೇದಿಕೆಯೇರಿ ಬಂದ ಅಭಿಮಾನಿಯೊಬ್ಬ, ಸಾನ್ಯಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾನ್ಯಾ ತಾಯಿ ಹಾಗೂ ಸ್ನೇಹಿತರು ವೇದಿಕೆಯ ಮೇಲೆ ಗಲಾಟೆ ಮಾಡಿದ್ದಾರೆ.

ಸಾನ್ಯಾ ಅಯ್ಯರ್ ಭಾನುವಾರ ಕಂಬಳವನ್ನು ಉದ್ಘಾಟಿಸಿ ಕೊಂಚ ವಿರಾಮದ ನಂತರ, ಮತ್ತೆ ತಾಯಿ ಹಾಗೂ ಸ್ನೇಹಿತರೊಂದಿಗೆ ವೇದಿಕೆಯಲ್ಲಿ ಕುಳಿತು ಕಂಬಳ ವೀಕ್ಷಿಸುತ್ತಿದ್ದರು. ಈ ವೇಳೆ ಇಬ್ರಾಹಿಂ ಹೆಸರಿನ ಅಭಿಮಾನಿಯೊಬ್ಬ ಸೆಲ್ಫಿ ವೇದಿಕೆಯೇರಿ ಬಂದವನೇ ಸಾನ್ಯಾರ ಜುಟ್ಟು ಹಿಡಿದೆಳೆದು, ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದಾಗಿ ಸಾನ್ಯಾ ಹಾಗೂ ಇಬ್ರಾಹಿಂ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಿಂದ ಸಾನ್ಯಾ ಆತನ ಕಪಾಳಕ್ಕೆ ಭಾರಿಸಿದ್ದಾನೆ. ಆಕ್ರೋಶಿತಗೊಂಡ ಇಬ್ರಾಹಿಂ ಸಾನ್ಯಾರಿಗೂ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

Video credit : Asianet Suvarna News

ವೇದಿಕೆಯಲ್ಲಿ ಸಾನ್ಯಾರಿಗೆ ಆದ ಅವಮಾನವನ್ನು ಕಂಡು ಆಕ್ರೋಶಗೊಂಡ ಸಾನ್ಯಾ ತಾಯಿ ಹಾಗೂ ಸ್ನೇಹಿತರು ವೇದಿಕೆಗೆ ಬಂದು ಆಯೋಜಕರೊಂದಿಗೆ ಗಲಾಟೆ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ ಇಬ್ರಾಹಿಂಗೆ ಸ್ಥಳಿಯರು ಧರ್ಮದೇಟು ನೀಡಿದ್ದಾರೆ. ಕೆಲ ಹೊತ್ತು ಕಂಬಳ ಆಯೋಜನೆಗೊಂಡಿದ್ದ ಸುತ್ತಮುತ್ತಲಿನ ಪರಿಸರ ಉದ್ವಿಗ್ನಗೊಂಡಿತ್ತು. ಕೊನೆಗೆ ಆಯೋಜಕರು ಹಾಗೂ ಸಾನ್ಯಾ ತಾಯಿಯೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಾನ್ಯಾ ಐ ಲವ್ ಯು ಪುತ್ತೂರು ಎಂದು ಹೇಳಿದ್ದರಂತೆ ,ಇದನ್ನು ಕೇಳಿಸಿಕೊಂಡು ಇಬ್ರಾಹಿಂ ಐ ಲವ್ ಯು ಸಾನ್ಯಾ ಎಂದು ಅರಚಾಡುತ್ತಿದ್ದನಂತೆ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆತ ಸಾನ್ಯಾ ಒಳಿ ಓಡೋಡಿ ಬಂದು ಅಸಭ್ಯವಾಗಿ ವರ್ತಿಸಿದ್ದಾನಂತೆ. ವೇದಿಕೆಯಿಂದ ಸಾನ್ಯಾ ಇಳಿಯುತ್ತಿದ್ದಂತೆ ಕೈ ಹಿಡಿದು ಎಳೆದಾಡಿದ್ದಾನೆ. ಕುಡಿತದ ನಶೆಯಲ್ಲಿದ್ದ ಇಬ್ರಾಹಿಂನಿಗೆ ಸ್ಥಳಿಯರು ಧರ್ಮದೇಟು ನೀಡಿ ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ ಎಂದು ತಿಳಿದು ಬಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *