ವಿಕ್ಕಿ ಕೌಶಲ್ ಗೆ ‘ನನ್ನನ್ನು ನೀನು ಮದ್ವೆಯಾಗ್ಲೇಬೇಡ’ ಎಂದಿದ್ರಂತೆ ಕತ್ರೀನಾ..! – ವಿಕ್ಕಿ ಮೇಲೆ ಸಿಟ್ಟಾಗಿದ್ಯಾಕೆ ಕ್ಯಾಟ್?

ವಿಕ್ಕಿ ಕೌಶಲ್ ಗೆ ‘ನನ್ನನ್ನು ನೀನು ಮದ್ವೆಯಾಗ್ಲೇಬೇಡ’ ಎಂದಿದ್ರಂತೆ ಕತ್ರೀನಾ..! – ವಿಕ್ಕಿ ಮೇಲೆ ಸಿಟ್ಟಾಗಿದ್ಯಾಕೆ ಕ್ಯಾಟ್?

ನ್ಯೂಸ್ ಆ್ಯರೋ : ಬಾಲಿವುಡ್ ನಲ್ಲಿ ಕೆಲವು ಸೆಲೆಬ್ರೆಟಿಗಳು ತಮ್ಮದೇ ರೀತಿಯಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಸೆಲೆಬ್ರೆಟಿಗಳನ್ನು ವಿವಾಹವಾಗಿ ಅತ್ಯಂತ ಬ್ಯೂಟಿಫುಲ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಕೆರಿಯರ್ ಕೂಡಾ ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಬಾಲಿವುಡ್ ನ ಕೆಲವು ಕ್ಯೂಟ್ ಜೋಡಿಯ ಪಟ್ಟಿಯಲ್ಲಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಅವರ ಜೋಡಿಯೂ ಒಂದು. ಇದೀಗ ಅವರ ವಿವಾಹ ಜೀವನದ ಬಗ್ಗೆ ವಿಕ್ಕಿ ಕೌಶಲ್ ಇಂಟ್ರೆಸ್ಟಿಂಗ್ ವಿಷಯವೊಂದನ್ನು ಬಹಿರಂಗಗೊಳಿಸಿದ್ದಾರೆ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ವಿಕ್ಕಿ ಕತ್ರೀನಾ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ವಿಕ್ಕಿ ತನ್ನ ಪತ್ನಿಯ ಬಗ್ಗೆ ಹೇಳಿರುವ ಮಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ವಿವಾಹಕ್ಕೂ ಮುನ್ನ ನನ್ನ ಮದ್ವೆಯಾಗಬೇಡ ಅಂದಿದ್ರಂತೆ ಕತ್ರಿನಾ…!

ವಿವಾಹಕ್ಕೂ ಮುನ್ನ ವಿಕ್ಕಿಗೆ ಕತ್ರೀನಾ ಮದುವೆಯಾಗಲೇ ಬೇಡ ಅಂತ ಹೇಳಿದ್ದರಂತೆ. ಈ ಕುರಿತು ಇಂಟ್ರೆಸ್ಟಿಂಗ್‌ ವಿಚಾರವನ್ನು ನಟ ಬಿಚ್ಚಿಟ್ಟಿದ್ದಾರೆ. ನಮ್ಮ ಮದುವೆಗೂ ಮೊದಲು ಸಿನಿಮಾ ಶೂಟಿಂಗ್ ಅರ್ಧ ಆಗಿತ್ತು. ಮದುವೆಗಾಗಿ ನಾನು ರಜೆ ತೆಗೆದುಕೊಂಡಿದ್ದೆ. ವಿವಾಹ ಮುಗಿದ ಎರಡು ದಿನದಲ್ಲೇ ಮತ್ತೆ ಸೆಟ್​ನಲ್ಲಿರಬೇಕಾಗಿತ್ತು. ಈ ವೇಳೆ ಕತ್ರೀನಾ ನನಗೆ ಬೆದರಿಕೆ ಹಾಕಿದ್ದರು ಎಂದ ಹೇಳಿಕೊಂಡಿದ್ದಾರೆ.

ಘಟನೆ ಕುರಿತು ವಿವರವಾಗಿ ಹೇಳಿರುವ ಕೌಶಲ್‌, ಮದುವೆಯಾಗಿ ಎರಡು ದಿನದಲ್ಲಿ ಸೆಟ್​ಗೆ ಹೋಗಬೇಕೆಂದರೆ ಮದುವೆಯಾಗಲೇ ಬೇಡ ಅಂತ ಕತ್ರೀನಾ ಹೇಳಿದ್ದರಂತೆ. ಹಾಗಾಗಿ 2 ದಿನ ಇದ್ದ ರಜೆಯನ್ನು 5ಕ್ಕೆ ಮುಂದೂಡಿದೆ ಅಂತ ಹೆಂಡತಿ ಬಗ್ಗೆ ಹೇಳಿಕೊಂಡಿದ್ದಾರೆ.

2021 ಡಿಸೆಂಬರ್‌ 9ರಂದು ವಿಕ್ಕಿ ಮತ್ತು ಕತ್ರೀನಾ ಅದ್ಧೂರಿಯಾಗಿ ಮದುವೆಯಾಗಿದ್ದರು. ಭಾರತೀಯ ಸಿನಿ ನಟರಿಂದ ಹಿಡಿದು ರಾಜಕಾರಣಿಗಳು, ಇಬ್ಬರ ಅಭಿಮಾನಿಗಳು ಜೋಡಿಗೆ ಶುಭ ಹಾರೈಸಿದ್ದರು. ಇಂದಿಗೂ ಈ ಸ್ಟಾರ್‌ ಬಹಲ ಅನ್ಯೋನ್ಯವಾಗಿದ್ದಾರೆ. ಸದ್ಯ ಅಭಿಮಾನಿಗಳು, ಈ ಜೋಡಿ ಯಾವಾಗ ಗುಡ್​ನ್ಯೂಸ್ ಕೊಡುತ್ತಾರೆ ಅಂತ ಕಾಯುತ್ತಿದ್ದಾರೆ.

ಈ ದಂಪತಿಯ ಸಿನಿಮಾ ಬಗ್ಗೆ ಹೇಳೋದಾದ್ರೆ….

ಸಿನಿಮಾ ವಿಚಾರವಾಗಿ ಹೇಳುವುದಾದರೆ, ಕತ್ರೀನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ಸಿನಿಮಾ ಈಗಾಲೇ 400 ಕೋಟಿ ಗಳಿಸಿದೆ. ವಿಕ್ಕಿ ಕೌಶಲ್ ಕೂಡಾ ಹಲವು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *