‘ಖುಷಿ’ ಸಿನಿಮಾ ಸಕ್ಸಸ್ ಖುಷಿ ಬೆನ್ನಲ್ಲೇ ವಿಜಯ್ ದೇವರಕೊಂಡ ಗ್ರೇಟ್ ಪ್ರಾಮಿಸ್ – ನೂರು ರೈತರಿಗೆ 1 ಕೋಟಿ ಹಣ ನೀಡುತ್ತೇನೆಂದ ನಟ

‘ಖುಷಿ’ ಸಿನಿಮಾ ಸಕ್ಸಸ್ ಖುಷಿ ಬೆನ್ನಲ್ಲೇ ವಿಜಯ್ ದೇವರಕೊಂಡ ಗ್ರೇಟ್ ಪ್ರಾಮಿಸ್ – ನೂರು ರೈತರಿಗೆ 1 ಕೋಟಿ ಹಣ ನೀಡುತ್ತೇನೆಂದ ನಟ

ನ್ಯೂಸ್ ಆ್ಯರೋ : ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿಯಾಗಿ ನಟಿಸಿದ ಖುಷಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೆ.1ರಂದು ಸಿನಿಮಾ ರಿಲೀಸ್ ಆಗಿದ್ದು, ಇದುವರೆಗೂ ಉತ್ತಮ ರೆಸ್ಪಾನ್ಸ್‌ನೊಂದಿಗೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ವಿನ ಬೆನ್ನಲ್ಲೇ ಚಿತ್ರತಂಡ ವಿಶಾಖಪಟ್ಟಣದಲ್ಲಿ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿತ್ತು. ಈ ವೇಳೆ ವಿಜಯ್ ದೇವರಕೊಂಡ ತಮ್ಮ ವೈಯಕ್ತಿಕ ಖಾತೆಯಿಂದ 1 ಕೋಟಿ ಹಣವನ್ನು 100 ರೈತರಿಗೆ ಹಂಚುವುದಾಗಿ ಘೋಷಣೆ ಮಾಡಿದ್ದಾರೆ.

‘ನಾನು ಒಂದು ಕೋಟಿ ರೂಪಾಯಿ ಹಣವನ್ನು ಸುಮಾರು 100 ರೈತ ಕುಟುಂಬಗಳಿಗೆ ನೀಡಬೇಕು ಎಂದು ನಿರ್ಧಾರ ಮಾಡಿರುವೆ, ಇದರಿಂದ ನನಗೆ ತುಂಬಾ ಖುಷಿ ಆಗಲಿದೆ. ನಾವು ಪಟ್ಟಿ ಮಾಡುವ 100 ರೈತ ಕುಟುಂಬಗಳಿಗೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡುತ್ತೀವಿ. ಇದು ನನ್ನ ವೈಯಕ್ತಿಕ ಖಾತೆಯಿಂದ ನಿಮಗೆ ಹಣ ಬರಲಿದೆ’ ಎಂದು ವೇದಿಕೆ ಮೇಲೆ ನಿಂತು ತೆಲಗು ಭಾಷೆಯಲ್ಲಿ ಘೋಷಣೆ ಮಾಡಿದ್ದಾರೆ.

ವಿಜಯ್ ಮಾತು ಕೇಳಿ ಅಲ್ಲಿದ್ದ ಜನತೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಈ ಹಿಂದೆ ಸುಮಾರು 100 ಅಭಿಮಾನಿಗಳಿಗೆ ಫ್ರೀ ಆಗಿ ಮನಾಲಿ ಟ್ರಿಪ್ ಕಳುಹಿಸಿದ್ದರು.

ಜೀವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಪೋಷಕರನ್ನು ಖುಷಿಯಾಗಿ ನೋಡಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಮಾಡಬೇಕು ಅನ್ನೋದು ನಟ ವಿಜಯ್ ದೇವರಕೊಂಡ ಆಸೆ ಆಗಿತ್ತು. ಇನ್ನು ಮುಂದೆ ನಾನು ಅಭಿಮಾನಿಗಳಿಗೋಸ್ಕರ ಕೆಲಸ ಮಾಡುವೆ, ನನ್ನ ಯಶಸ್ಸಿಗೆ ಕಾರಣ ಖುಷಿ ಸಿನಿಮಾ ಯಶಸ್ಸಿಗೆ ಕಾರಣ ಆಗಿರುವುದು ಅಪಾರ ಪ್ರೀತಿ ಕೊಡುತ್ತಿರುವ ಜನರು ಎಂದು ಭಾವುಕರಾಗಿ ಮಾತನಾಡಿದರು.

ಖುಷಿ ಸಿನಿಮಾ ಮೊದಲು ವಾರವೇ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸದ್ಯ 39.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಿವ ನಿರ್ವಾನ್ ನಿರ್ದೇಶನ ಮಾಡಿರುವ ಖುಷಿ ಚಿತ್ರದಲ್ಲಿ ಸಚಿನ್, ಶರಣ್ಯಾ, ಮುರಳಿ ಶರ್ಮಾ, ಲಕ್ಷ್ಮಿ ಜಯರಾಮನ್ ಮತ್ತು ರೋಷಿಣಿ ನಟಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *