‘ಖುಷಿ’ ಸಿನಿಮಾ ಸಕ್ಸಸ್ ಖುಷಿ ಬೆನ್ನಲ್ಲೇ ವಿಜಯ್ ದೇವರಕೊಂಡ ಗ್ರೇಟ್ ಪ್ರಾಮಿಸ್ – ನೂರು ರೈತರಿಗೆ 1 ಕೋಟಿ ಹಣ ನೀಡುತ್ತೇನೆಂದ ನಟ
- ಮನರಂಜನೆ
- September 5, 2023
- No Comment
- 62
ನ್ಯೂಸ್ ಆ್ಯರೋ : ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿಯಾಗಿ ನಟಿಸಿದ ಖುಷಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೆ.1ರಂದು ಸಿನಿಮಾ ರಿಲೀಸ್ ಆಗಿದ್ದು, ಇದುವರೆಗೂ ಉತ್ತಮ ರೆಸ್ಪಾನ್ಸ್ನೊಂದಿಗೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ವಿನ ಬೆನ್ನಲ್ಲೇ ಚಿತ್ರತಂಡ ವಿಶಾಖಪಟ್ಟಣದಲ್ಲಿ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿತ್ತು. ಈ ವೇಳೆ ವಿಜಯ್ ದೇವರಕೊಂಡ ತಮ್ಮ ವೈಯಕ್ತಿಕ ಖಾತೆಯಿಂದ 1 ಕೋಟಿ ಹಣವನ್ನು 100 ರೈತರಿಗೆ ಹಂಚುವುದಾಗಿ ಘೋಷಣೆ ಮಾಡಿದ್ದಾರೆ.
‘ನಾನು ಒಂದು ಕೋಟಿ ರೂಪಾಯಿ ಹಣವನ್ನು ಸುಮಾರು 100 ರೈತ ಕುಟುಂಬಗಳಿಗೆ ನೀಡಬೇಕು ಎಂದು ನಿರ್ಧಾರ ಮಾಡಿರುವೆ, ಇದರಿಂದ ನನಗೆ ತುಂಬಾ ಖುಷಿ ಆಗಲಿದೆ. ನಾವು ಪಟ್ಟಿ ಮಾಡುವ 100 ರೈತ ಕುಟುಂಬಗಳಿಗೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡುತ್ತೀವಿ. ಇದು ನನ್ನ ವೈಯಕ್ತಿಕ ಖಾತೆಯಿಂದ ನಿಮಗೆ ಹಣ ಬರಲಿದೆ’ ಎಂದು ವೇದಿಕೆ ಮೇಲೆ ನಿಂತು ತೆಲಗು ಭಾಷೆಯಲ್ಲಿ ಘೋಷಣೆ ಮಾಡಿದ್ದಾರೆ.
ವಿಜಯ್ ಮಾತು ಕೇಳಿ ಅಲ್ಲಿದ್ದ ಜನತೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಈ ಹಿಂದೆ ಸುಮಾರು 100 ಅಭಿಮಾನಿಗಳಿಗೆ ಫ್ರೀ ಆಗಿ ಮನಾಲಿ ಟ್ರಿಪ್ ಕಳುಹಿಸಿದ್ದರು.
ಜೀವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಪೋಷಕರನ್ನು ಖುಷಿಯಾಗಿ ನೋಡಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಮಾಡಬೇಕು ಅನ್ನೋದು ನಟ ವಿಜಯ್ ದೇವರಕೊಂಡ ಆಸೆ ಆಗಿತ್ತು. ಇನ್ನು ಮುಂದೆ ನಾನು ಅಭಿಮಾನಿಗಳಿಗೋಸ್ಕರ ಕೆಲಸ ಮಾಡುವೆ, ನನ್ನ ಯಶಸ್ಸಿಗೆ ಕಾರಣ ಖುಷಿ ಸಿನಿಮಾ ಯಶಸ್ಸಿಗೆ ಕಾರಣ ಆಗಿರುವುದು ಅಪಾರ ಪ್ರೀತಿ ಕೊಡುತ್ತಿರುವ ಜನರು ಎಂದು ಭಾವುಕರಾಗಿ ಮಾತನಾಡಿದರು.
ಖುಷಿ ಸಿನಿಮಾ ಮೊದಲು ವಾರವೇ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸದ್ಯ 39.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಿವ ನಿರ್ವಾನ್ ನಿರ್ದೇಶನ ಮಾಡಿರುವ ಖುಷಿ ಚಿತ್ರದಲ್ಲಿ ಸಚಿನ್, ಶರಣ್ಯಾ, ಮುರಳಿ ಶರ್ಮಾ, ಲಕ್ಷ್ಮಿ ಜಯರಾಮನ್ ಮತ್ತು ರೋಷಿಣಿ ನಟಿಸಿದ್ದಾರೆ.