ಕೊನೆಗೂ ರಾಕಿಂಗ್‌ ಸ್ಟಾರ್‌ ಸಿನಿಮಾದ ಕುರಿತು ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಯಶ್‌ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ತೆಲುಗಿನ ನಿರ್ದೇಶಕ ದಿಲ್‌ ರಾಜು?

ಕೊನೆಗೂ ರಾಕಿಂಗ್‌ ಸ್ಟಾರ್‌ ಸಿನಿಮಾದ ಕುರಿತು ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಯಶ್‌ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ತೆಲುಗಿನ ನಿರ್ದೇಶಕ ದಿಲ್‌ ರಾಜು?

ನ್ಯೂಸ್‌ ಆ್ಯರೋ : ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌–2 ತೆರೆಕಂಡು ವರ್ಷವಾಗುತ್ತಿದೆ. ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹಿಟ್‌ ಎಂಬ ಖ್ಯಾತಿಗೂ ಪಾತ್ರವಾಯಿತು. ಇಷ್ಟಾದರೂ ಯಶ್‌ ಮಾತ್ರ ಮುಂದಿನ ಸಿನಿಮಾವನ್ನು ಘೋಷಣೆ ಮಾಡಿರಲಿಲ್ಲ. ಈಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ತಮ್ಮ ಮೆಚ್ಚಿನ ನಟನ ಹೊಸ ಸಿನಿಮಾ ಬಗ್ಗೆ ತಿಳಿಯಲು ಯಶ್‌ ಅಭಿಮಾನಿಗಳು ಕಾದು ಸುಸ್ತಾಗಿದ್ದಾರೆ. ಹಬ್ಬಗಳು, ವಿಶೇಷ ದಿನ, ಕೊನೆಗೆ ಯಶ್‌ ಜನ್ಮದಿನವಾದರೂ ಹೊಸ ಸಿನಿಮಾ ಅನೌನ್ಸ್‌ ಮಾಡಬಹುದು ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದರು. ಈ ನಡುವೆ ಯಶ್‌ ಹೆಸರು ಖ್ಯಾತ ನಿರ್ದೇಶಕರು, ನಿರ್ಮಾಪಕರ ಜೊತೆ ಕೇಳಿಬಂದಿತ್ತು.

ಯಶ್‌ ಸ್ವತಃ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಲಿದ್ದು, ಆ ಬ್ಯಾನರ್‌ ಮೂಲಕ ತಮ್ಮ ಮುಂದಿನ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ತೆಲುಗು ನಿರ್ಮಾಪಕ ದಿಲ್‌ ರಾಜು ಯಶ್‌ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದು, ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ದಿಲ್‌ ರಾಜು ಏಪ್ರಿಲ್‌ 5 ಸಂಜೆ ಟ್ಟಿಟ್ಟರ್‌ನಲ್ಲಿ #AskDilRaju‌ ಸೆಷನ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿನಿಪ್ರಿಯರು ನಿರ್ಮಾಪಕ ದಿಲ್‌ ರಾಜು ಅವರ ಸಿನಿಮಾ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ದರು. ಅಭಿಮಾನಿಯೊಬ್ಬರು, ‘ಯಶ್‌ ಜೊತೆ ಸಿನಿಮಾ ಮಾಡುತ್ತೀರ?’ ಎಂಬ ಪ್ರಶ್ನೆಗೆ ದಿಲ್‌ ರಾಜು ‘ಹೌದು’ ಎಂದು ಉತ್ತರಿಸುವ ಮೂಲಕ ಯಶ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ದಿಲ್‌ರಾಜು ಮಾತು ಕೇಳಿ ಯಶ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಹೌದು ಎಂದು ಅವರು ಹೇಳಿದ ಮೇಲೆ ಖಂಡಿತ ಶೀಘ್ರದಲ್ಲೇ ಯಶ್‌ ಮುಂದಿನ ಸಿನಿಮಾ ಅಪ್‌ಡೇಟ್‌ ದೊರೆಯಲಿದೆ ಎಂದು ಖುಷಿ ಆಗಿದ್ದಾರೆ. ಸಿನಿಮಾ ಯಾವುದು? ಯಾರೆಲ್ಲಾ ನಟಿಸಲಿದ್ದಾರೆ? ಅದೂ ಕೂಡಾ ಪ್ಯಾನ್‌ ಇಂಡಿಯಾ ಸಿನಿಮಾನಾ ಎಂದು ನೂರಾರು ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೆ ಸಿಗಬೇಕಿದೆ.

ತೆಲುಗು ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್‌ ರಾಜು ಅವರು ಸಹೋದರನೊಂದಿಗೆ ಸೇರಿ 2003 ರಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ಅದೇ ವರ್ಷ ದಿಲ್‌ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಸಿನಿಮಾ ನಂತರ ರಾಜು, ದಿಲ್‌ ರಾಜು ಎಂದೇ ಹೆಸರಾದರು. ರಾಮ ರಾಮ ಕೃಷ್ಣ ಕೃಷ್ಣ , ಬೊಮ್ಮರಿಲ್ಲು, ಶಾದಿ ಮುಬಾರಕ್‌, ಕೊತ್ತ ಬಂಗಾರು ಲೋಕಮ್‌, ವಾರಿಸು, ಜೆರ್ತಿ ಸೇರಿ ಅನೇಕ್‌ ಹಿಟ್‌ ಸಿನಿಮಾಗಳನ್ನು ಅವರು ನೀಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *