ತುಳುನಾಡ ದೈವಕ್ಕೆ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿಯಿಂದ ಕೋಲ ಸೇವೆ – ಕಾಂತಾರ ಬಳಿಕ ಹೆಚ್ಚಾಯ್ತು ಚಂದನವನದ ತಾರೆಯರ ದೈವಭಕ್ತಿ
- ಮನರಂಜನೆ
- January 29, 2023
- No Comment
- 288
ನ್ಯೂಸ್ ಆ್ಯರೋ : ಕಾಂತಾರ ಸಿನಿಮಾದ ಬಳಿಕ ನಟ ನಟಿಯರು ದೈವಗಳಿಗೆ ಕೋಲ ನೀಡುವ, ಹರಕೆ ತೀರಿಸುವ ಕಾರ್ಯಗಳು ಹೆಚ್ಚಿದ್ದು ಇತ್ತೀಚೆಗೆ 777 ಚಾರ್ಲಿ ಹಾಗೂ`ಲಕ್ಕಿಮ್ಯಾನ್’ ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ ದೈವವೊಂದಕ್ಕೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸದ್ಯ ಈ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೋಲ ನೀಡುವ ವೇಳೆ ನಟಿ ಸಂಗೀತಾ ಶೃಂಗೇರಿ ಅವರ ಜೊತೆ ನಿರೂಪಕಿ, ನಟಿ ಅನುಶ್ರೀ ಕೂಡ ಇದ್ದರು.
ಮಲ್ಲಮೂಲೆಯಲ್ಲಿ ಕಳೆದೆರಡು ದಿನಗಳು ದಿವ್ಯ ಅನುಭವ, ನನ್ನ ಭಾವನೆಗಳನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನಾನು ಇಲ್ಲಿ ನೇರ ಮತ್ತು ಅಪರೂಪದ ತುಳುನಾಡು ದೈವ ಕೋಲ ಮತ್ತು ಕೇರಳ ತೆಯ್ಯಂ ಗೆ ಸಾಕ್ಷಿಯಾಗಿದ್ದೇನೆ. ಇದಕ್ಕೆ ಸಾಕ್ಷಿಯಾಗಲು ನಮ್ಮೆಲ್ಲರನ್ನು ಆಹ್ವಾನಿಸಿದ ಕಿರಣ್ ರಾಜ್ ಅವರಿಗೆ ಹಾಗೂ ಭರತ್ ರಾಜ್ ಕೆ ಯಾದವ್ ಮತ್ತು ಕುಟುಂಬದವರಿಗೆ ಕೃತಜ್ಞತೆಗಳು. ನಾನು ಈ ಸುಂದರ್ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಹಾಗೇ ಈ ದೈವದ ಹಾದಿಯಲ್ಲೇ ಸದಾ ಸಾಗುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ನಟಿ ಸಂಗೀತಾ ಶೃಂಗೇರಿ ಹರಹರ ಮಹಾದೇವ ಸೀರಿಯಲ್ ಮೂಲಕ ಎಲ್ಲರ ಮನಗೆದ್ದಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಮತ್ತು ಡಾರ್ಲಿಂಗ್ ಕೃಷ್ಣಗೆ ಹೀರೋಯಿನ್ ಆಗಿ ಸ್ಯಾಂಡಲ್ವುಡ್ನ ಸಿನಿರಂಗದಲ್ಲಿ ಕಾಣಿಸಿಕೊಂಡಿದ್ದಲ್ಲದೇ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.