ತುಳುನಾಡ ದೈವಕ್ಕೆ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿಯಿಂದ ಕೋಲ ಸೇವೆ – ಕಾಂತಾರ ಬಳಿಕ ಹೆಚ್ಚಾಯ್ತು ಚಂದನವನದ ತಾರೆಯರ ದೈವಭಕ್ತಿ

ತುಳುನಾಡ ದೈವಕ್ಕೆ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿಯಿಂದ ಕೋಲ ಸೇವೆ – ಕಾಂತಾರ ಬಳಿಕ ಹೆಚ್ಚಾಯ್ತು ಚಂದನವನದ ತಾರೆಯರ ದೈವಭಕ್ತಿ

ನ್ಯೂಸ್ ಆ್ಯರೋ : ಕಾಂತಾರ ಸಿನಿಮಾದ ಬಳಿಕ ನಟ ನಟಿಯರು ದೈವಗಳಿಗೆ ಕೋಲ ನೀಡುವ, ಹರಕೆ ತೀರಿಸುವ ಕಾರ್ಯಗಳು ಹೆಚ್ಚಿದ್ದು ಇತ್ತೀಚೆಗೆ 777 ಚಾರ್ಲಿ ಹಾಗೂ`ಲಕ್ಕಿಮ್ಯಾನ್’ ಸಿನಿಮಾ ಖ್ಯಾತಿಯ ಸಂಗೀತಾ ಶೃಂಗೇರಿ ದೈವವೊಂದಕ್ಕೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸದ್ಯ ಈ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೋಲ ನೀಡುವ ವೇಳೆ ನಟಿ ಸಂಗೀತಾ ಶೃಂಗೇರಿ ಅವರ ಜೊತೆ ನಿರೂಪಕಿ, ನಟಿ ಅನುಶ್ರೀ ಕೂಡ ಇದ್ದರು.

ಮಲ್ಲಮೂಲೆಯಲ್ಲಿ ಕಳೆದೆರಡು ದಿನಗಳು ದಿವ್ಯ ಅನುಭವ, ನನ್ನ ಭಾವನೆಗಳನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನಾನು ಇಲ್ಲಿ ನೇರ ಮತ್ತು ಅಪರೂಪದ ತುಳುನಾಡು ದೈವ ಕೋಲ ಮತ್ತು ಕೇರಳ ತೆಯ್ಯಂ ಗೆ ಸಾಕ್ಷಿಯಾಗಿದ್ದೇನೆ. ಇದಕ್ಕೆ ಸಾಕ್ಷಿಯಾಗಲು ನಮ್ಮೆಲ್ಲರನ್ನು ಆಹ್ವಾನಿಸಿದ ಕಿರಣ್​​ ರಾಜ್​ ಅವರಿಗೆ ಹಾಗೂ ಭರತ್ ರಾಜ್ ಕೆ ಯಾದವ್ ಮತ್ತು ಕುಟುಂಬದವರಿಗೆ ಕೃತಜ್ಞತೆಗಳು. ನಾನು ಈ ಸುಂದರ್​ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಹಾಗೇ ಈ ದೈವದ ಹಾದಿಯಲ್ಲೇ ಸದಾ ಸಾಗುತ್ತೇನೆ ಎಂದು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ನಟಿ ಸಂಗೀತಾ ಶೃಂಗೇರಿ ಹರಹರ ಮಹಾದೇವ ಸೀರಿಯಲ್ ಮೂಲಕ ಎಲ್ಲರ ಮನಗೆದ್ದಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಮತ್ತು ಡಾರ್ಲಿಂಗ್ ಕೃಷ್ಣಗೆ ಹೀರೋಯಿನ್​ ಆಗಿ ಸ್ಯಾಂಡಲ್​ವುಡ್​ನ ಸಿನಿರಂಗದಲ್ಲಿ ಕಾಣಿಸಿಕೊಂಡಿದ್ದಲ್ಲದೇ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *