‘ನಾನು ಭಾರತೀಯನೇ, ನನ್ನನ್ನೂ ಹಿಂದೂ ಎಂದು ಕರೆಯಿರಿ’ – ಹೀಗ್ಯಾಕಂದ್ರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್..?

‘ನಾನು ಭಾರತೀಯನೇ, ನನ್ನನ್ನೂ ಹಿಂದೂ ಎಂದು ಕರೆಯಿರಿ’ – ಹೀಗ್ಯಾಕಂದ್ರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್..?

ನ್ಯೂಸ್ ಆ್ಯರೋ : ಸಿನಿ ತಾರೆಯರು ರಾಜಕಾರಣಿಗಳು ಸದಾ ಒಂದೊಂದು ಹೇಳಿಕೆಯಿಂದ ವಿವಾದಕ್ಕೆ, ಮೆಚ್ಚುಗೆಗೆ ಗುರಿಯಾಗುತ್ತಲೇ ಇರುತ್ತಾರೆ. ಸದ್ಯ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ‌ ಸೃಷ್ಟಿಸಿದೆ. ಅವರು ನೀಡಿದ ಹೇಳಿಕೆಯೇನು, ಈ‌ ಹೇಳಿಕೆ ನೀಡಲು‌ ಕಾರಣವೇನು? ಈ ವರದಿ ಓದಿ.

ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ‘ಭಾರತದಲ್ಲಿ‌ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಹಿಂದೂ ಎಂದು ಕರೆಯಬೇಕು. ನನ್ನನ್ನೂ ಕೂಡ ಹಿಂದೂ ಎಂದು ಕರೆಯಬೇಕು’ ಎಂದಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಉತ್ತರ ಅಮೆರಿಕದ ಕೇರಳ ಹಿಂದೂಗಳು ಆಯೋಜಿಸಿದ್ದ, ಹಿಂದೂ ಸಮಾವೇಶದಲ್ಲಿ ಭಾಗಿಯಾದ ಆರಿಫ್ ಖಾನ್, ʻನೀವು ನನ್ನನ್ನು ಕಡ್ಡಾಯವಾಗಿ ಹಿಂದೂ ಎಂದು ಕರೆಯಬೇಕುʼ ಈ ಹಿಂದೆ ಸೈಯದ್‌ ಅಹ್ಮದ್‌ ಖಾನ್‌ ಈ ಮಾತನ್ನು ಹೇಳಿದ್ದರು ಎಂದು ಅವರ ಮಾತುಗಳನ್ನು ಸ್ಮರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆರಿಫ್ ಮೊಹಮ್ಮದ್ ಖಾನ್ ‘ತನ್ನ ಗಂಭೀರ ಆರೋಪ ಇರುವುದು ಆರ್ಯ ಸಮಾಜದ ಸದಸ್ಯರ ಮೇಲೆ. ನೀವು‌ ನನ್ನನ್ನು ಹಿಂದೂ ಎಂದು ಗುರುತಿಸುತ್ತಿಲ್ಲ. ಹಿಂದೂ ಎನ್ನುವ ಪದವನ್ನು ನಾನು ಧಾರ್ಮಿಕ ಸೂಚಕ ಎಂದು ಭಾವಿಸುವುದಿಲ್ಲ. ಬದಲಾಗಿ ಹಿಂದೂ ಎಂಬುದು ಭೌಗೋಳಿಕ ಪದವಾಗಿದೆ. ಭಾರತದಲ್ಲಿ ಹುಟ್ಟಿ, ಇಲ್ಲಿನ‌ ಅನ್ನ ತಿಂದು , ಇಲ್ಲಿನ ಪವಿತ್ರ ನದಿಯ ನೀರನ್ನು ಕುಡಿಯುವ ನಾನು ನನ್ನನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *