ಸಮಂತಾ ತೊಡೆಯಲ್ಲಿ ಕುಳಿತು ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕೋತಿ – ವೈರಲ್ ಆಗುತ್ತಿದೆ ಫೋಟೋಗಳು..!

ಸಮಂತಾ ತೊಡೆಯಲ್ಲಿ ಕುಳಿತು ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕೋತಿ – ವೈರಲ್ ಆಗುತ್ತಿದೆ ಫೋಟೋಗಳು..!

ನ್ಯೂಸ್ ಆ್ಯರೋ : ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸಾಂಸಾರಿಕ ಜೀವನದಿಂದ ವಿಚ್ಚೇದನ ಪಡೆದ ನಂತರ ತುಸು ಮಂಕಾಗಿದ್ದರು. ಅದರೊಂದಿಗೆ ಖಾಯಿಲೆಯೊಂದಕ್ಕೆ ತುತ್ತಾಗಿದ್ದರು. ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿರುವ ಟಾಲಿವುಟ್ ಬ್ಯೂಟಿ ವೆಕೇಶನ್ ಮೂಡ್ ನಲ್ಲಿದ್ದಾರೆ. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಸಮಂತಾ ದೂರದ ಬಾಲಿಯಲ್ಲಿ ಆತ್ಮೀಯ ಸ್ನೇಹಿತೆಯ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಕೋತಿಯೊಂದು ಸಮಂತಾ ತೊಡೆಯ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿದ್ದು ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ.

ಸಿನಿಮಾದಿಂದ ಬ್ರೇಕ್, ಫಾರಿನ್ ಟ್ರಿಪ್!

ಸಮಂತಾ ಸದ್ಯಕ್ಕೆ ಮೈಯೋಸಿಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅದರ ಚಿಕಿತ್ಸೆಗಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಯ ವಿದೇಶಕ್ಕೆ ತೆರಳಿದ್ದಾರೆ. ಅದರೊಂದಿಗೆ ಎಂಜಾಯ್ ಮಾಡಲು ಬಾಲಿಗೆ ತೆರಳಿರುವ ಆಕೆ ತನ್ನ ಆತ್ಮೀಯ ಗೆಳತಿಯೊಂದಿಗೆ ಕಾಡಿನಲ್ಲಿ ಸುತ್ತಾಡುತ್ತ, ಕೋತಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ‌.

ಕೋತಿಯೊಂದಿಗೆ ಸೆಲ್ಫಿ, ಸನ್ ಗ್ಲಾಸ್ ಕಳವು!

ಬಾಲಿಯಲ್ಲಿ ಎಂಜಾಯ್ ಮಾಡುತ್ತಿರುವ ಸಮಂತಾ ಬಾಲಿಯ ಉಬುದ್‌ನಲ್ಲಿರುವ ಮಂಕಿ ಫಾರೆಸ್ಟ್‌ಗೆ ಭೇಟಿ ನೀಡಿ ಒಂದು ಕೋತಿಯೊಂದಿಗೆ ಕೆಲ ಕಾಲ ಸಮಯ ಕಳೆದಿದ್ದಾರೆ. ಆ ಕೋತಿಯು ಸಮಂತಾ ತೊಡೆಯ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿದೆ. ಇದಾದ ಬಳಿಕ ಆ ಕೋತಿ ಸಮಂತಾ ಅವರ ಸನ್ ಗ್ಲಾಸ್ ಕದ್ದು ಓಡಿ ಹೋಗಿದೆಯಂತೆ. ಈ ವಿಚಾರವನ್ನು ಅವರೇ ತಮ್ಮ ಇನ್​​ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ.

ಖುಷಿ ಸಿನಿಮಾದಲ್ಲಿ ಸಮಂತಾ-ದೇವರಕೊಂಡ!

ವಿಚ್ಚೇದನದ ನಂತರ‌ ಕೆಲ ಕಾಲ ಸಿನಿ ರಂಗದಿಂದ ದೂರವಿದ್ದ ಸಮಂತಾ ಇದೀಗ ಮತ್ತೆ ಗರಿಗೆದರಿದ್ದಾರೆ. ಸದ್ಯ, ಸಮಂತಾ ಹಾಗೂ ಖ್ಯಾತ ನಟ ವಿಜಯ್ ದೇವರಕೊಂಡ ಜೋಡಿಯ ‘ಖುಷಿ’ ಎಂಬ ಸಿನಿಮಾ ತಯಾರಾಗಿದ್ದು, ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಎನ್ನಲಾಗಿದೆ‌. ಶೀಘ್ರದಲ್ಲೇ ಈ ಚಿತ್ರ ತೆರೆಗೆ ಬರಲಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *