ಬಿಟ್ಟಿ ಪಬ್ಲಿಸಿಟಿಗಾಗಿ ಅನಾರೋಗ್ಯದ ನಾಟಕವಾಡಿದ್ರಾ ಟಾಲಿವುಡ್ ಬ್ಯೂಟಿ ಸಮಂತಾ..? – ಸ್ಯಾಮ್ ಕುರಿತು ನಿರ್ಮಾಪಕ ಚಿಟ್ಟಿಬಾಬು ಹೇಳಿದ್ದು ನಿಜಾನಾ..?
- ಮನರಂಜನೆ
- May 3, 2023
- No Comment
- 90
ನ್ಯೂಸ್ ಆ್ಯರೋ : ಸಮಂತಾಗೆ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಅನಾರೋಗ್ಯದ ನಡುವೆಯೇ ಯಶೋಧ ಸಿನಿಮಾದ ಚಿತ್ರೀಕರಣ ಮುಗಿಸಿದ್ದ ನಟಿ ಸಮಂತಾ ಆ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ, ವಿಶ್ರಾಂತಿಗಳ ಬಳಿಕ ಚೇತರಿಸಿಕೊಂಡಿದ್ದರು. ಅದಾದ ಬಳಿಕ ಇತ್ತೀಚೆಗೆ ಶಾಕುಂತಲಂ ಸಿನಿಮಾದ ಪ್ರಚಾರ ಸಂದರ್ಭದಲ್ಲಿಯೂ ಸಮಂತಾಗೆ ಮತ್ತೆ ಅನಾರೋಗ್ಯ ಕಾಡಿತ್ತು.
ಆದರೆ ಇದೀಗ ಟಾಲಿವುಡ್ ಅಂಗಳದಲ್ಲಿ ಹಸಿಬಿಸಿ ಚರ್ಚೆಯೊಂದು ಶುರು ಆಗಿದ್ದು, ಸಮಂತಾ ಅನಾರೋಗ್ಯಕ್ಕೆ ತುತ್ತಾಗಿರುವುದೇ ಸುಳ್ಳು ಎಂಬ ಮಾತು ಕೇಳಿ ಬರುತ್ತಿದೆ.
ಹೌದು.. ಬಿಟ್ಟಿ ಪಬ್ಲಿಸಿಟಿಗಾಗಿ ಸಮಂತಾ ಮಯೋಸೈಟಿಸ್ ಕಾಯಿಲೆ ಇದೆ ಅಂತೆಲ್ಲಾ ಸುಖಾಸುಮ್ಮನೆ ನಾಟಕವಾಡುತ್ತಿದ್ದಾರೆ. ಅದೆಲ್ಲಾ ಸುಳ್ಳು, ಈ ಹಿಂದೆ ಕೂಡ ಸಮಂತಾ ಅವರನ್ನು ಗುರಿಯಾಗಿಸಿಕೊಂಡು ಸೆನ್ಸೇಷನಲ್ ಕಮೆಂಟ್ಗಳನ್ನು ಮಾಡಿದ್ದರು. ಸಿನಿಮಾ ಪ್ರಚಾರದಲ್ಲಿ ಪ್ರತಿ ಬಾರಿಯೂ ಸಮಂತಾ ಸೆಂಟಿಮೆಂಟ್ ನಾಟಕ ಆಡುತ್ತಿದ್ದಾರೆ ಎಂದು ಚಿಟ್ಟಿ ಬಾಬು ಹೇಳಿದ್ದಾರೆ.
”ಆರೋಗ್ಯ ಸರಿಯಿಲ್ಲದೇ ಇದ್ದಾಗಲೂ ಶೂಟಿಂಗ್ಗೆ ಸಮಸ್ಯೆ ಆಗಬಾರದೆಂದು ನಟಿಸಿದ ಹಲವು ನಟ-ನಟಿಯರಿದ್ದಾರೆ. ಅದು ಅವರಲ್ಲಿರುವ ವೃತ್ತಿಪರತೆ, ಅದು ದೊಡ್ಡ ವಿಷಯವಲ್ಲ, ನಟರಾಗಿರುವವರಿಗೆ ಇರಬೇಕಾದ ಜವಾಬ್ದಾರಿ ಅದು, ಆದರೆ ಸಮಂತಾ, ತಮಗೆ ಹುಷಾರಿಲ್ಲದಿದ್ದರೂ ನಟಿಸಿದ್ದನ್ನು ದೊಡ್ಡ ವಿಷಯವನ್ನಾಗಿ ಹೇಳಿಕೊಂಡು ಅದನ್ನು ಸಿಂಪತಿಯನ್ನಾಗಿ ಬಳಸಿ ಸಿನಿಮಾದ ಪ್ರಚಾರ ಮಾಡುತ್ತಿರುವುದು ಸರಿಯಲ್ಲ” ಎಂದು ನಿರ್ಮಾಪಕ ಚಿಟ್ಟಿಬಾಬು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ನಟಿ ಸಮಂತಾ ಬ್ಯೂಟಿ ಕುರಿತು ಹೇಳಿಕೆ ನೀಡಿದ್ದ ನಿರ್ಮಾಪಕ ಚಿಟ್ಟಿಬಾಬು,”ಸಮಂತಾಗೆ ವಯಸ್ಸಾಗಿದೆ, ಆಕೆಯದ್ದು ಮುದುಕಿಯ ಹೋಲುವ ಮುಖ, ಆಕೆಯ ಕರಿಯರ್ ಮುಗಿದು ಹೋಗಿದೆ. ಶಾಕುಂತಲಂ ಪಾತ್ರಕ್ಕೆ ಸಮಂತಾ ಸೂಕ್ತವಾದ ಆಯ್ಕೆಯಲ್ಲ, ಜೊತೆಗೆ ಆಕೆ ಸಿಂಪತಿ ಬಳಸಿ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ ಅದು ಸರಿಯಲ್ಲ” ಎಂದಿದ್ದರು.
ಚಿಟ್ಟಿಬಾಬು ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದ್ದ ಸಮಂತಾ, ಚಿಟ್ಟಿಬಾಬು ಮುಖದಲ್ಲಿ ಎದ್ದು ಕಾಣುವ ಕಿವಿಯ ಕೂದಲಿನ ಬಗ್ಗೆ ಫೋಸ್ಟ್ ಒಂದನ್ನು ಹಂಚಿಕೊಂಡು, ಪುರುಷರಲ್ಲಿ ಅತಿಯಾದ ಕಿವಿಯ ಕೂದಲು ಬರಲು ಲೈಂಗಿಕತೆಗೆ ಸಂಬಂಧಿಸಿದ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನು ಅಧಿಕವಾಗಿರುವುದು ಕಾರಣ ಎಂಬ ಮಾಹಿತಿಯನ್ನು ಗೂಗಲ್ನಿಂದ ಹೆಕ್ಕಿ ಅದರ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದರು.
ಇದೀಗ ಇವರಿಬ್ಬರ ನಡುವಿನ ಶೀತಲ ಸಮರ ಮುಂದುವರೆದಿದ್ದು, ಸಮಂತಾ, ತಮ್ಮ ಹೆಸರು ಉಲ್ಲೇಖಿಸದೆ ತಮ್ಮ ಕಿವಿಯ ಕೂದಲಿನ ಬಗ್ಗೆ ಮಾತನಾಡಿರುವುದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಚಿಟ್ಟಿಬಾಬು, ಸೌಂದರ್ಯ ಹಾಗೂ ಇನ್ನು ಕೆಲವು ನಟರ ಉದಾಹರಣೆ ನೀಡಿ ಸಮಂತಾ ವೃತ್ತಿಪರ ನಟಿಯಲ್ಲ ಎಂದು ಆರೋಪಿಸಿದ್ದಾರೆ.
”ಹಿಂದೊಮ್ಮೆ ನಾನು ಗೆಲುವು ಹೆಸರಿನ ಸಿನಿಮಾ ಮಾಡಿದಾಗ ಆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸೌಂದರ್ಯ ನಟಿಸಿದ್ದರು. ಸೌಂದರ್ಯ ಶೂಟಿಂಗ್ ಸೆಟ್ಗೆ ಬಂದಾಗ ಆಕೆಗೆ ಆರೋಗ್ಯ ಸರಿಯಿರಲಿಲ್ಲ. ಅದು ನನ್ನ ಗಮನಕ್ಕೆ ಬಂದು, ಆರೋಗ್ಯ ಸರಿಯಿಲ್ಲದಿದ್ದರೆ ಶೂಟಿಂಗ್ ಮುಂದಕ್ಕೆ ಹಾಕಿಕೊಳ್ಳೋಣ ಎಂದೆ. ಆದರೆ ಸೌಂದರ್ಯ ಹಾಗೆ ಮಾಡಲಿಲ್ಲ. ಸುಹಾಸಿನಿ, ಕೋಟಾ ಶ್ರೀನಿವಾಸ್ ರಾವ್, ನರೇಶ್ ಇನ್ನೂ ದೊಡ್ಡ ದೊಡ್ಡ ನಟರಿದ್ದಾರೆ. ಹೀಗಿದ್ದಾಗ ನನಗಾಗಿ ಶೂಟಿಂಗ್ ಮುಂದೂಡುವುದು ಬೇಡ ನಾನು ಶಾಟ್ ನೀಡುತ್ತೇನೆ ಎಂದು ಹೇಳಿ ನಟಿಸಿದರು. ಇದು ನಿಜವಾದ ವೃತ್ತಿಪರತೆ ಎಂದು ಚಿಟ್ಟಿಬಾಬು ಟಾಂಗ್ ನೀಡಿದ್ದಾರೆ.
ಇನ್ನೂ ಸಮಂತಾ, ತಮ್ಮ ಕಿವಿಯ ಕೂದಲಿನ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಬಗ್ಗೆ ಮಾತನಾಡಿರುವ ಚಿಟ್ಟಿಬಾಬು, ”ನನ್ನ ಕಿವಿಯ ಕೂದಲನ್ನು ಅವರು ಗಮನಿಸಿದ್ದಾರೆ, ಹಾಗೆಯೇ ನನ್ನ ದೇಹದ ಇನ್ನೂ ಹಲವು ಭಾಗಗಳಲ್ಲಿ ಕೂದಲು ಬೆಳೆಯುತ್ತವೆ. ಅದರ ಬಗ್ಗೆಯೂ ಅಧ್ಯಯನ ಮಾಡಿ ವರದಿ ಮಾಡುವುದಾದರೆ ಮಾಡಲು ನನ್ನ ಅಭ್ಯಂತರವಿಲ್ಲ” ಎಂದಿದ್ದಾರೆ. ಅಲ್ಲದೆ, ಸಮಂತಾಗೆ ಈಗ 18-20 ವರ್ಷ ವಯಸ್ಸಲ್ಲ. ಸಾಕಷ್ಟು ವಯಸ್ಸಾಗಿದೆ, ಹಾಗಾಗಿ ಆಕೆ ಅಪ್ರತಿಮ ಸುಂದರಿ ಶಾಕುಂತಲ ಪಾತ್ರಕ್ಕೆ ಸೂಕ್ತವಾದ ಆಯ್ಕೆ ಅಲ್ಲ ಎಂದು ಹೇಳಿದ್ದೇನೆ ಇದರಲ್ಲಿ ತಪ್ಪೇನು? ಆಕೆಯ ಗ್ಲಾಮರಸ್ ಅವಧಿ ಮುಗಿದಿದ್ದು ಪೋಷಕ ಪಾತ್ರಗಳತ್ತ ಹೊರಳಿಕೊಳ್ಳುವ ಸಮಯ ಬಂದಿದೆ. ಆದರೆ ಆಕೆ ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದಿದ್ದಾರೆ ಚಿಟ್ಟಿಬಾಬು.
ಸದ್ಯ ಶಾಕುಂತಲಂ ಚಿತ್ರದ ನಂತರ ಸಮಂತಾ ತಮ್ಮ ಮುಂದಿನ ಚಿತ್ರಗಳ ಶೂಟಿಂಗ್ನಲ್ಲಿ ಸಮಂತಾ ಬ್ಯುಸಿಯಾಗಿದ್ದು, ಸ್ಯಾಮ್ ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸೀರೀಸ್ ಮಾಡುತ್ತಿದ್ದಾರೆ. ಖುಷಿ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಿದ್ದಾರೆ.