ಗಂಗಮ್ಮ ದೇವಿಗೆ ಪಂಜುರ್ಲಿ ಅಲಂಕಾರ: ಕಾಂತಾರ 2 ಬ್ಯಾನ್ ಮಾಡುವಂತೆ ಕರಾವಳಿಗರ ಒತ್ತಾಯ
- ಮನರಂಜನೆ
- March 28, 2023
- No Comment
- 141
ನ್ಯೂಸ್ ಆ್ಯರೋ : ಕರಾವಳಿಯ ಭೂತರಾಧನೆಗೆ ಧಕ್ಕೆ ತಂದಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಇಲ್ಲಿನ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿ,ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಕರಾವಳಿಗರು ಆಕ್ರೋಶವನ್ನು ವ್ಯಕ್ತಪಡಿಸಿ, ಕಾಂತಾರ ೨ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಕಾಂತಾರ ಸಿನಿಮಾ ಯಶಸ್ವಿನ ಬಳಿಕ ನಡೆಯುತ್ತಿರುವುದರಿಂದ ಜನರು ನಿರ್ದೇಶಕ, ನಟ ರಿಷಬ್ ಶೆಟ್ಟಿ ವಿರುದ್ಧ ಆಕ್ರೋಶವಾಗಿದ್ದಾರೆ.
ಕರಾವಳಿ ಭಾಗದಲ್ಲಿ ಹೊರತುಪಡಿಸಿದರೆ ದೇಶದ ಬೇರೆಲ್ಲೂ ದೈವರಾಧನೆಯನ್ನು ಪೂಜಿಸುತ್ತಿರಲಿಲ್ಲ. ಆದರೆ ಇದೀಗ ಇಲ್ಲಿನ ದೈವರಾಧನೆಯ ಕಾರ್ಣಿಕ ತಿಳಿದು ಅದನ್ನು ದುರುಪಯೋಗ ಮಾಡುವ ಯತ್ನ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಕಾರ್ಣಿಕವನ್ನು ತೋರಿಸಿದ ನಂತರ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇದು ಎತ್ತ ಸಾಗಲಿದೆಯೋ, ಆದ್ದರಿಂದ ‘ಕಾಂತಾರ 2’ ಸಿನಿಮಾವನ್ನು ಬ್ಯಾನ್ ಮಾಡುವ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಕೆಲವು ಕರಾವಳಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
‘ಕಾಂತಾರ’ ಸಿನಿಮಾ ತಂಡ ಇದಕ್ಕೆಲ್ಲ ಅವಕಾಶ ನೀಡಬಾರದಿತ್ತು ಆದರೆ ಚಿತ್ರ ತಂಡ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸಾಕಷ್ಟು ಹಣವನ್ನು ಮಾಡಿರುವ ಚಿತ್ರತಂಡ ದೈವರಾಧನೆಯನ್ನು ದುರುಪಯೋಗ ಮಾಡುತ್ತಿರುವುದರ ಬಗ್ಗೆ ಕರಾವಳಿ ದೈವರಾಧಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.