ದಳಪತಿ ವಿಜಯ್ ಸಿನಿಮಾಗೆ ಲೋಕೇಶ್ ಕನಕರಾಜ್ ಆ್ಯಕ್ಷನ್‌ ಕಟ್ – ಕನಕರಾಜ್ ಯೂನಿವರ್ಸ್ ಎಂಟ್ರಿಯಾಗ್ತಾರ ದಳಪತಿ..??

ದಳಪತಿ ವಿಜಯ್ ಸಿನಿಮಾಗೆ ಲೋಕೇಶ್ ಕನಕರಾಜ್ ಆ್ಯಕ್ಷನ್‌ ಕಟ್ – ಕನಕರಾಜ್ ಯೂನಿವರ್ಸ್ ಎಂಟ್ರಿಯಾಗ್ತಾರ ದಳಪತಿ..??

ನ್ಯೂಸ್ ಆ್ಯರೋ : ದಳಪತಿ ವಿಜಯ್ ಹಾಗೂ ರಶ್ಮಿಕಾ‌ ಮಂದಣ್ಣ ಅಭಿನಯದ ‘ವಾರಿಸು’ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ‌ ಕಂಡು ಬಾಕ್ಸ್ ಆಫೀಸ್‌ನಲ್ಲಿ 275 ಕೋಟಿ ಬಾಚಿತ್ತು. ಇದೀಗ, ವಿಜಯ್ ಅವರು ತಮಿಳಿನ ಹೆಸರಾಂತ ಯುವ ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೆ ಹೋಸ ಸಿನಿಮಾ ಮಾಡುವುದು‌ ಪಕ್ಕಾ ಆಗಿದೆ. ಸದ್ಯ, ಚಿತ್ರಕ್ಕೆ ‘ದಳಪತಿ 67’ ಎಂದು ಹೆಸರಿಡಲಾಗಿದೆ.

ವಿಜಯ್ ಹಾಗೂ ಲೋಕೇಶ್ ಕನಕರಾಜ್ ಎರಡನೇ ಬಾರಿ ಒಂದಾಗುತ್ತಿದ್ದಾರೆ. ಇನ್ನೂ ಹೆಸರಿಡದ ‘ದಳಪತಿ 67’ ಸಿನಿಮಾವನ್ನು, ವಿಜಯ್ ಅವರ ಈ ಹಿಂದಿನ ಸಿನಿಮಾಗಳಾದ ‘ವಾರಿಸು ಹಾಗೂ ಮಾಸ್ಟರ್’ ಸಿನಿಮಾಗೆ ಹೂಡಿಕೆ ಮಾಡಿದ್ದ 7 ಸ್ಕ್ರೀನ್ ಸ್ಟೂಡಿಯೋಸ್ ಸಂಸ್ಥೆ ನಿರ್ಮಾಣ ಮಾಡಲಿದೆ. ಈ ನಿರ್ಮಾಣ ಸಂಸ್ಥೆ ಮೂರನೇ ಬಾರಿ ವಿಜಯ್ ಅವರೊಂದಿಗೆ ಕೈ ಜೋಡಿಸುತ್ತಿದೆ.

ಲೋಕೇಶ್ ಕನಕರಾಜ್ ‘ಮಾಸ್ಟರ್’ ಸಿನಿಮಾದ ನಂತರ ಇದೀಗ‌ ಎರಡನೇ ಬಾರಿಗೆ ವಿಜಯ್ ಅವರಿಗೆ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಈ ಇಬ್ಬರ ಕೂಡುವಿಕೆಯಲ್ಲಿ ಈ ಹಿಂದೆ ಬಿಡುಗಡೆಯಾದ ‘ಮಾಸ್ಟರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು.

ವಿಜಯ್, ಕನಕರಾಜ್ ಯೂನಿವರ್ಸ್ ಎಂಟ್ರಿಯಾಗ್ತಾರಾ?

ಕೈದಿ ಹಾಗೂ ವಿಕ್ರಮ್ ಮೂಲಕ ತಮಿಳು ಸಿನಿ ರಂಗದಲ್ಲಿ ಕನಕರಾಜ್ ಯೂನಿವರ್ಸ್ ತೆರೆದುಕೊಂಡಿದೆ. ತಮಿಳಿನ‌ ಸ್ಟಾರ್ ನಟರಾದ ಕಮಲ್ ಹಾಸನ್, ಕಾರ್ತಿ, ಸೂರ್ಯ, ವಿಜಯ್ ಸೇತುಪತಿ ಮುಂತಾದವರು ಕನಕರಾಜ್ ಯೂನಿವರ್ಸ್ ನಲ್ಲಿದ್ದಾರೆ. ಇದೀಗ ‘ದಳಪತಿ 67’ ಮೂಲಕ ವಿಜಯ್ ಅವರ ಪ್ರವೇಶವಾಗಲಿದೆ ಎಂಬ ಮಾತುಗಳು‌ ಕೇಳಿ ಬರುತ್ತಿವೆ. ಇನ್ನುಳಿದಂತೆ, ಈ ಸಿನಿಮಾದಲ್ಲಿ ನಟ ವಿಕ್ರಮ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.

‘ಕೈದಿ, ಮಾಸ್ಟರ್, ವಿಕ್ರಮ್ ಮತ್ತು ಬೀಸ್ಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ‌ ಮಾಡಿದ್ದ, ತಮಿಳಿನ ಮ್ಯಾಜಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್ ‘ದಳಪತಿ 67’ ಸಿನಿಮಾಗೂ ಸಂಗೀತ ನೀಡಲಿದ್ದಾರೆ. ಇನ್ನುಳಿದಂತೆ, ಲೋಕೇಶ್ ಕನಕರಾಜ್ ಚಿತ್ರಕ್ಕೆ ನಿರ್ದೇಶನ, ಕತೆ, ಸಂಭಾಷಣೆ ಬರೆದಿದ್ದು, ಸತೀಶ್ ಕುಮಾರ್ ಅವರ ಛಾಯಾಗ್ರಹಣವಿರಲಿದೆ. ಸಿನಿಮಾ ಬಗೆಗಿನ ಇನ್ನಷ್ಟು ಅಪ್ಡೇಟ್ಸ್ ಫೆಬ್ರವರಿ 1 ಹಾಗೂ 2 ರಂದು ನೀಡಲಿದ್ದೇವೆ ಎಂದು ಈ ಹಿಂದೆ ಲೋಕೇಶ್ ಕನಕರಾಜ್ ಘೋಷಿಸಿದ್ದರು. ಸದ್ಯ ದಳಪತಿ ಫ್ಯಾನ್ಸ್ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *