ಕನ್ನಡ ವಾಹಿನಿಗಳ ಟಿ.ಆರ್.ಪಿ. ಲಿಸ್ಟ್ ರಿಲೀಸ್ – ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ..

ಕನ್ನಡ ವಾಹಿನಿಗಳ ಟಿ.ಆರ್.ಪಿ. ಲಿಸ್ಟ್ ರಿಲೀಸ್ – ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ..

ನ್ಯೂಸ್ ಆ್ಯರೋ‌ : ಈ ವಾರದ ಕನ್ನಡ ವಾಹಿನಿಗಳ ಟಿ.ಆರ್.ಪಿ. ಲಿಸ್ಟ್ ಹೊರಬಿದ್ದಿದೆ. ಎಂದಿನಂತೆ ಝೀ ಕನ್ನಡ ವಾಹಿನಿ ಪಾರಮ್ಯ ಮೆರೆದಿದೆ. ಟಾಪ್ 5 ಸ್ಥಾನಗಳಲ್ಲಿ ಝೀ ಕನ್ನಡ ವಾಹಿನಿಯದ್ದೇ ಧಾರಾವಾಹಿ ಕಂಡುಬಂದಿರುವುದು ವಿಶೇಷ. ಕಳೆದ ವಾರಕ್ಕೆ ಹೋಲಿಸಿದರೆ ಕೆಲವು ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ಕಂಡು ಬಂದಿದೆ.

1. ಪುಟ್ಟಕ್ಕನ ಮಕ್ಕಳು

ಹಿರಿಯ ನಟಿ ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ತನ್ನ ನಂಬರ್ 1 ಸ್ಥಾನವನ್ನು ಬಿಟ್ಟೇ ಕೊಡುತ್ತಿಲ್ಲ. ಹಲವು ವಾರಗಳಿಂದ ಅಗ್ರಸ್ಥಾನದಲ್ಲಿ ಈ ಧಾರಾವಾಹಿ ಮುಂದುವರಿದಿದೆ.

2. ಸೀತಾರಾಮ

ಎರಡನೇ ಸ್ಥಾನದಲ್ಲಿ ಹಲವು ವಾರಗಳಿಂದ ವಿರಾಜಮಾನವಾಗಿದ್ದ ‘ಗಟ್ಟಿಮೇಳ’ವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಹೊಸ ಧಾರಾವಾಹಿ ‘ಸೀತಾರಾಮ’ ತನ್ನ ಖದರು ಹೆಚ್ಚಿಸಿಕೊಂಡಿದೆ. 23 ಸಂಚಿಕೆಯನ್ನಷ್ಟೇ ಪೂರೈಸಿದ ‘ಸೀತಾರಾಮ’ ಧಾರಾವಾಹಿ ಈ ವಾರ ಟಾಪ್ 2ರಲ್ಲಿದೆ.

3. ಗಟ್ಟಿಮೇಳ

ಸುಮಾರು 4 ವರ್ಷಗಳಿಂದಲೂ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಇನ್ನೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಅದರ ಸ್ಥಾನ. ಕೆಲವು ವಾರಗಳಿಂದ ಟಾಪ್ 2 ಆಗಿ ಹೊರಹೊಮ್ಮಿದ್ದ ಇದು ಈ ಬಾರಿ 3ನೇ ಸ್ಥಾನ ಪಡೆದುಕೊಂಡಿದೆ.

4. ಸತ್ಯ

ಕೆಲವು ವಾರಗಳಿಂದ ಟಾಪ್ 5 ರೇಸ್ ನಿಂದ ಹೊರಗಿದ್ದ ‘ಸತ್ಯ’ ಧಾರಾವಾಹಿ ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ ಮತ್ತೆ 4 ಸ್ಥಾನಕ್ಕೆ ಜಿಗಿದು ಪ್ರಬಲ ಸ್ಪರ್ಧೆ ಒಡ್ಡಿದೆ.

5. ಶ್ರೀರಸ್ತು ಶುಭಮಸ್ತು, ಅಮೃತಧಾರೆ

ಹಿರಿಯ ನಟಿ ಸುಧಾರಾಣಿ ಹಲವು ವರ್ಷಗಳ ಬಳಿಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಧಾರಾವಾಹಿ ‘ಶ್ರೀರಸ್ತು ಶುಭಮಸ್ತು’. ಆರಂಭದಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದ ಈ ಧಾರಾವಾಹಿ ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಿತ್ತು. ಈ ಬಾರಿಯೂ ತನ್ನ ನಾಗಾಲೋಟ ಮುಂದುವರಿಸಿದೆ. ಹಿರಿಯ ನಟ ರಾಜೇಶ್ ನಟರಂಗ ಮತ್ತು ಚಿತ್ರ ನಟಿ ಛಾಯಾ ಸಿಂಗ್ ಅಭಿನಯದ ‘ಅಮೃತಧಾರೆ’ ಕೂಡ ಟಾಪ್ 5ನೇ ಸ್ಥಾನ ಪಡೆದುಕೊಂಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *