18 ವರ್ಷದ ಹುಡುಗಿಯಂತೆ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡ ನಟಿ ಜ್ಯೋತಿ ರೈ- ತೆಲುಗು ನಿರ್ದೇಶಕನ ಕೈ ಹಿಡಿದ ಮೇಲೆ ಕನ್ನಡತಿ ಫುಲ್ ಚೇಂಜ್..!

18 ವರ್ಷದ ಹುಡುಗಿಯಂತೆ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡ ನಟಿ ಜ್ಯೋತಿ ರೈ- ತೆಲುಗು ನಿರ್ದೇಶಕನ ಕೈ ಹಿಡಿದ ಮೇಲೆ ಕನ್ನಡತಿ ಫುಲ್ ಚೇಂಜ್..!

ನ್ಯೂಸ್ ಆ್ಯರೋ : ಕನ್ನಡ ಸಿನಿಮಾರಂಗದ ಅಥವಾ ಸೀರಿಯಲ್ ನಟಿಯರು ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವುದು ಹೊಸ ವಿಚಾರವೇನಲ್ಲ. ಕಿರಿಕ್ ಹುಡುಗಿ ರಶ್ಮಿಕಾ‌ ಮಂದಣ್ಣ ಅವರಿಂದ ಹಿಡಿದು ಶ್ರೀಲೀಲಾ ವರೆಗೆ ಹಲವು ನಟಿಯರು ತೆಲುಗರ ನಾಡಿನಲ್ಲಿ ಯಶಸ್ವಿ ನಟಿಯರು ಎನಿಸಿಕೊಂಡಿದ್ದಾರೆ.

ಇದೀಗ ಅವರ ಸಾಲಿಗೆ ಕಿರುತೆರೆ ನಟಿ ಜ್ಯೋತಿ ರೈ ಎಂಟ್ರಿ ಕೊಟ್ಟಿದ್ದಾರೆ. ‘ಜೋಗುಳ’ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದ ಜ್ಯೋತಿ ಸದ್ಯ, ಟಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಷ್ಟೇ ಅಲ್ಲದೆ ಅಲ್ಲಿನ‌ ನಿರ್ದೇಶನ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಈ ನಡುವೆ ಜ್ಯೋತಿ ಹೊಸ ಫೋಟೋಶೂಟ್ ಮಾಡಿಸಿದ್ದು, ಅಭಿಮಾನಿಗಳಿಗೆ ಇವರ ವಯಸ್ಸು 36 ವರ್ಷನಾ ಅಥವಾ 18ವರ್ಷನಾ ಎಂದು ಅನುಮಾನ ಮೂಡಲಾರಂಭಿಸಿದೆ.

ಕನ್ನಡದಿಂದ ತೆಲುಗಿಗೆ ತಿರುಗಿದ ‘ಜ್ಯೋತಿ’!

1987 ರ ಜುಲೈ 4 ರಂದು ಕರ್ನಾಟಕದಲ್ಲಿ ಜನಿಸಿದ ಜ್ಯೋತಿ ರೈ ಅವರು ತಮ್ಮ ಸಂಪೂರ್ಣ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿದರು.

ಕನ್ನಡದ ‘ಬಂದೇ ಬರುತಾವ ಕಾಲ’ ಧಾರವಾಹಿಯ‌ ಮೂಲಕ ನಟನೆ ಆರಂಭಿಸಿದ ಇವರು ಅದಾದ ಬಳಿಕ
ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಜ್ಯೋತಿ ರೈ ಮನೆ ಮಾತಾಗಿದ್ದರು. ನಂತರ ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡ ಜ್ಯೋತಿ ‘ಗುಪ್ಪೆದಂಥ ಮನಸು’ ಸೀರಿಯಲ್ ಮೂಲಕ ತಮ್ಮ ತೆಲುಗು ಜರ್ನಿ ಆರಂಭಿಸಿದರು. ಸದ್ಯ, ಕನ್ನಡಕ್ಕಿಂತ ಹೆಚ್ಚು ತೆಲುಗಿನಲ್ಲೇ ಅವಕಾಶಗಳು ಇವರನ್ನು ಅರಸಿ ಬರುತ್ತಿವೆ.

20ನೇ ವಯಸ್ಸಿಗೆ ಮದುವೆ-ವಿಚ್ಛೇದನ!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿದ ಜ್ಯೋತಿ ರೈ ಅವರು ತಮ್ಮ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬವರನ್ನು ವಿವಾಹವಾದರು. ಇವರಿಗೆ ಒಂದು ಗಂಡು ಮಗು ಕೂಡ ಇದೆ. ಆದರೆ ಆ ಬಳಿಕ ಸಂಸಾರದಲ್ಲಿ ಎದ್ದ ಬಿರುಗಾಳಿ ತತ್ತರಿಸಿದ ಜ್ಯೋತಿ ಪತಿಗೆ ವಿಚ್ಚೇದನ ನೀಡಿದರು. ಸದ್ಯ, ತೆಲುಗಿನ ನಾಡಲ್ಲಿ ಸೆಟಲ್ ಆಗಿರುವ ಜ್ಯೋತಿ ಬೋಲ್ಡ್ ಫೋಟೋಶೂಟ್ ನಡೆಸಿ ಸುದ್ದಿಯಲ್ಲಿದ್ದಾರೆ.

ಕೈ ಹಿಡಿದ ತೆಲುಗು ನಿರ್ದೇಶಕ ಮತ್ತು ಅದೃಷ್ಟ!

ನಟಿ ಜ್ಯೋತಿ ರೈ ಇದೀಗ ಬೋಲ್ಡ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಕೆಂಪು ಬಣ್ಣದ ಟೀ ಶರ್ಟ್ ಮತ್ತು ಶಾರ್ಟ್ ಧರಿಸಿ ಫೋಟೋಶೂಟ್ ನಲ್ಲಿ ಮಿಂಚುದ್ದು, ಈ ಫೋಟೋ ನೀಡಿ ಅಭಿಮಾನಿಗಳು ಇವರಿಗೆ ವಯಸ್ಸು 18 ಇದ್ದಂತಿದೆ ಎಂದು ಕಮೆಂಟ್ ಹಾಕಿದ್ದಾರೆ. ಸದ್ಯ, ತೆಲುಗು ನಿರ್ದೇಶಕ ಪೂರ್ವಜ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಸದ್ಯದಲ್ಲೇ ಇವರಿಬ್ಬರು ಅಧಿಕೃತವಾಗಿ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಿಂದ ಕೇಳಿ ಬರುತ್ತಿದೆ. ಅಂತೂ-ಇಂತೂ ತೆಲುಗರ‌ ನಾಡಿಗೆ ತರಳಿದ ಜ್ಯೋತಿ ರೈ ಅವರ ಅದೃಷ್ಟ ಬದಲಾಗಿದ್ದಂತೂ ಸುಳ್ಳಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *