ಮೌನಿಕಾ ರೆಡ್ಡಿ ವೆಡ್ಸ್‌ ಮಂಚು; ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮದುವೆಯ ಫೋಟೋಸ್ ವೈರಲ್…!!

ಮೌನಿಕಾ ರೆಡ್ಡಿ ವೆಡ್ಸ್‌ ಮಂಚು; ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮದುವೆಯ ಫೋಟೋಸ್ ವೈರಲ್…!!

ನ್ಯೂಸ್ ಆ್ಯರೋ : ತೆಲುಗು ನಟ ಮಂಚು ಮನೋಜ್ ವಿವಾಹವಾಗಿದ್ದಾರೆ. ಮೌನಿಕಾ ರೆಡ್ಡಿ ಎಂಬುವರನ್ನ ಮಂಚು ಮನೋಜ್ ಮದುವೆಯಾಗಿದ್ದಾರೆ. ಮಾರ್ಚ್ 3 ರಂದು (ಶುಕ್ರವಾರ) ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಅವರ ವಿವಾಹ ಮಹೋತ್ಸವ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಹೋದರಿ ಲಕ್ಷ್ಮೀ ಮಂಚು ನಿವಾಸದಲ್ಲಿ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಕಲ್ಯಾಣ ಜರುಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಮೌನಿಕಾ ರೆಡ್ಡಿ ಕೊರಳಿಗೆ ಮಂಚು ಮನೋಜ್ ಮಾಂಗಲ್ಯಧಾರಣೆ ಮಾಡಿದ್ದಾರೆ. ಬಂಧು ಮಿತ್ರರು, ಆತ್ಮೀಯರು ಹಾಗೂ ತಾರೆಯರು ಮಂಚು ಮನೋಜ್ ಮತ್ತು ಮೌನಿಕಾ ರೆಡ್ಡಿ ವಿವಾಹಕ್ಕೆ ಸಾಕ್ಷಿಯಾಗಿದ್ದರು.

ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಅವರ ಮದುವೆ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಜರುಗಿತು. ವಿವಾಹಕ್ಕೆ ಕ್ರೀಮ್ ಮತ್ತು ಗೋಲ್ಡನ್ ಬಣ್ಣದ ಕುರ್ತಾ ಹಾಗೂ ಧೋತಿಯನ್ನ ವರ ಮಂಚು ಮನೋಜ್ ಧರಿಸಿದ್ದರು. ಇನ್ನೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ವಧು ಮೌನಿಕಾ ರೆಡ್ಡಿ ಮಿರಿಮಿರಿ ಮಿಂಚುತ್ತಿದ್ದರು.

ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇತ್ತು. ಕಳೆದ ವರ್ಷದ ಗಣೇಶ ಹಬ್ಬದ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ವಿವಾಹವಾಗಿದ್ದಾರೆ.

ಇನ್ನೂ ತೆಲುಗು ನಟ ಮಂಚು ಮನೋಜ್ ಅವರಿಗೆ ಇದು ಎರಡನೇ ವಿವಾವಾಗಿದ್ದು, ಈ ಹಿಂದೆ ಪ್ರಣತಿ ರೆಡ್ಡಿ ಅವರನ್ನ ಮಂಚು ಮನೋಜ್ ಮದುವೆಯಾಗಿದ್ದರು. ಪ್ರಣತಿ ರೆಡ್ಡಿ ಅವರನ್ನು ಪ್ರೀತಿಸಿ ಮಂಚು ಮನೋಜ್ ಮದುವೆಯಾಗಿದ್ದರು. 2015ರಲ್ಲಿ ತಮ್ಮ ಹುಟ್ಟುಹಬ್ಬದಂದೇ ಮಂಚು ಮನೋಜ್, ಪ್ರಣತಿ ರೆಡ್ಡಿ ಅವರನ್ನ ವರಿಸಿದ್ದರು.

ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಅವರ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ಆದರೆ, ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಅವರ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ. ಇಬ್ಬರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯ ಭುಗಿಲೆದ್ದಿತು. ಹೀಗಾಗಿ, 2019ರಲ್ಲಿ ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದರು. ಅಲ್ಲದೇ ಭೂಮಾ ಮೌನಿಕಾ ರೆಡ್ಡಿಗೂ ಇದು 2ನೇ ಮದುವೆಯಾಗಿದ್ದು, 2016ರಲ್ಲಿ ಬೆಂಗಳೂರು ಮೂಲಕ ಗಣೇಶ್ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದರು. ಆದರೆ 3 ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ಬೇರೆಯಾದರು.

ಟಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ಮೋಹನ್ ಬಾಬು ಮತ್ತು ನಿರ್ಮಲಾ ದೇವಿ ದಂಪತಿಯ ಪುತ್ರ ಮಂಚು ಮನೋಜ್. ‘ಮೇಜರ್ ಚಂದ್ರಕಾಂತ್’ ಸಿನಿಮಾದ ಮೂಲಕ ಬಾಲನಟನಾಗಿ ಮಂಚು ಮನೋಜ್ ಚಿತ್ರರಂಗಕ್ಕೆ ಕಾಲಿಟ್ಟರು. ‘ದೊಂಗ ದೊಂಗದಿ’ ಸಿನಿಮಾದ ಮೂಲಕ ಮಂಚು ಮನೋಜ್ ನಾಯಕರಾದರು. ‘ಶ್ರೀ’, ‘ಪ್ರಯಾಣಂ’, ‘ಬಿಂದಾಸ್’, ‘ಪೋಟುಗಾಡು’, ‘ಶೌರ್ಯ’ ಮುಂತಾದ ಸಿನಿಮಾಗಳಲ್ಲಿ ಮಂಚು ಮನೋಜ್ ಅಭಿನಯಿಸಿದ್ದಾರೆ. ಸದ್ಯ ಮಂಚು ಮನೋಜ್ ಕೈಯಲ್ಲಿ ‘ಅಹಂ ಬ್ರಹ್ಮಾಸ್ಮಿ’ ಸಿನಿಮಾ ಇದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *